ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦ ಶ್ರೀ ರಾಮಕೃಷ್ಣ ಪರಮಹಂಸರ ಸ್ಮವೇ ಇವರಲ್ಲಿ ವಿಶೇಷ. ಅವರು ಕಾಮಿನೀಕಾಂಚನಗಳನ್ನು ತ್ಯಾಗಮಾಡಬೇಕೆಂದು ಎಷ್ಟು ಸಾರಿಸಾರಿ ಹೇಳುತ್ತಿದ್ದರೋ ಹಾಗೆ ಯೇ ಸಾರಿಸಾರಿ " ಎಲ್ಲಾ ಧರ್ಮವೂ ಸತ್ಯ; ಎಷ್ಟು ಮತವೋ ಅಷ್ಟು ಪಥ ; ನಮ್ಮ ದೇವರು ಹೆಚ್ಚು ನಿಮ್ಮ ದೇವರು ಕಡಿಮೆ ಎಂದು ಕೀಳುಬುದ್ಧಿಯಿಂದ ಜಗಳವಾಡ ಬಾರದು ಯಾರು ಯಾವ ಮಾರ್ಗವನ್ನು ಅನುಸರಿಸಿದರೆ ಆ ಮಾರ್ಗವನ್ನೇ ಅನುಸರಿಸಲಿ, ಅವರ ಮಾರ್ಗವನ್ನು ಕೆಡಿಸಬೇಡಿ, ಹಿಂದೂ ಮತದಲ್ಲಿಯೂ ರೈತಾ ---

  • ಯಾ ರಾದ ರೂ ಕಾಳಿ ಹೆಚ್ಚು-ಕೃಷ್ಣ ಹೆಚ್ಚು ಎಂದು ಜಗಳಾಡು ತಿದ್ದದ್ದನ್ನು ಕ೦ಡರೆ ಸ ರಮಹ೦ಸ ರು " ಇದೇನೋ ನಿನ್ನ ಹೀನಬುದ್ದಿ ! ನಿನ್ನ ಇಷ್ಟ ದೇವತೆಯೇ ಕಾಳಿ ಕೃಷ್ಣ ಎಲ್ಲ ಆಗಿ ದ್ದಾ ನೆಂದು ತಿಳಿದುಕೊ೦ ಡಿರು, ಹಾಗೆಂದರೆ ನಿನ್ನ ಇಷ್ಟದೇವತೆಯನ್ನು ಬಿಟ್ಟು ಮತ್ತೊಂದನ್ನು ಪೂಜಿಸಬೇಕೆಂದು ಹೇಳಿದ್ದಲ್ಲ. ದ್ವೇಷ ಬುದ್ಧಿಯನ್ನು ಬಿಟ್ಟು ಬಿಡಬೇಕೆ೦ ದರ್ಥ, ನಿನ್ನ ಇಷ್ಟ ದೇವತೆಯ ಕೃಷ್ಣ ನೂ, ಗಾರಾಂ ಗನೂ ಆಗಿದಾ ನೆ-ಈ ಜ್ಞಾನವನ್ನು ಒಳಗೆ ನಿಶ್ಚಯಬುದ್ಧಿಯಿಂದ ಇಟ್ಟು ಕೊಳ್ಳಬೇಕು, ನೋಡು ! ಹೆ೦ಗಸು ಗಂಡನಮನೆಗೆ ಹೋದರೆ, ಮಾವ, ಅತ್ತೆ, ಅತ್ತಿಗೆ, ಮೈ ದನ ಮು೦ತಾದವರೆಲ್ಲರಲ್ಲಿಯೂ ಮರ್ಯಾದೆ ಯಿ೦ದಲೂ, ಭಕ್ತಿಯಿ೦ದಲೂ ಯಥಾಯೋಗ್ಯವಾಗಿ ನಡೆದುಕೊಳ್ಳು ತ್ತಾಳೆ , ಆದರೆ ತನ್ನ ಮನಸ್ಸಿ. ನಲ್ಲಿದ್ದದ್ದನ್ನೆಲ್ಲಾ ನಿಸ್ಸಂಕೋಚವಾಗಿ ಹೇಳುವುದು ಮಲಗುವುದು ಕೂರು ವುದು ಇದೆಲ್ಲ ಕೇವಲ ತನ್ನ ಗ೦ಡನ ಸ೦ಗಡ ಮಾತ್ರ, ತನ್ನ ಗ೦ಡ ಒ೦ದ ಅತ್ತೆ ಮಾವ ಮು೦ತಾದವರೆಲ್ಲರೂ ತನ್ನ ವರಾಗಿದ್ದಾರೆಂದು ಅವಳಿಗೆ ಗೊತ್ತಿ ರುತ್ತದೆ, ಅದರ ಹಾಗೆ ನಿನ್ನ ಇಷ್ಟ ದೇವತೆಯನ್ನು ಗ೦ಡನ ಹಾಗೆ ಸೇವಿಸು. ನಿನ್ನ ಇಷ್ಟದೇವತೆ ಯೊಡನೆ ಸಂಬಂ ಧವಿರುವದ್ದರಿಂದಲೇ ಅದರ ಇತ ರ ರೂಪಗಳೊಡನೆ ಸ೦ಬ೦ಧ ; ಅವುಗಳಲ್ಲೆಲ್ಲಾ ಏಕ ರೀತಿಯಾಗಿ ಶ್ರದ್ದಾ ಭಕ್ತಿಯನ್ನು ಇಟ್ಟು ಕೊ೦ಡಿ ರಬೇಕು.- ಹೀಗೆಂದು ತಿಳಿದುಕೊ. ಹೀಗೆ ತಿಳಿದುಕೊಂಡು ದ್ವೇಷಬುದ್ದಿ ಯನ್ನು ದೂರಮಾಡು : ಗೌರೀಪ೦ಡಿ ತನು ಹೇಳುತ್ತಿದ್ದದ್ದೇನೆಂದರೆ “ ಕಾಳಿ ಮತ್ತು ಗೌರಾ೦ಗ ಇಬ್ಬರೂ ಒ೦ದೇ ಎ೦ದು ತಿಳಿದು ಬಿಟ್ಟರೆ ಆಗ ನಿಜವಾದ ಜ್ಞಾನವು ಉತ್ಪನ್ನವಾಯಿತೆಂದು ಹೇಳಬಹುದು - ಎ೦ದು ಹೇಳುತ್ತಿದ್ದ ರು.