ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೧ ಚರಿತ್ರೆ ದೈತ ವಿಶಿಷ್ಟಾದ್ಮತ ಮತಗಳು ಬೇರೆಬೇರೆಯಲ್ಲ. ಅವೆಲ್ಲವೂ ಒಬ್ಬೊಬ್ಬ ಸಾಧಕನ ಜೀವಮಾನದಲ್ಲಿಯೂ ಒಂದಾದಮೇಲೆ ಒ೦ದ ರಂತೆ ಬರತಕ್ಕ ಅವಸ್ಥಾ ಭೇಧಗಳು * ” ಎಂದು ಮುಂತಾಗಿ ಹೇಳು ತಿದ್ದರು. ಅವರ ಆಚರಣೆಯೂ “ ಎಷ್ಟು ಮತವೋ ಅಷ್ಟು ಪಥ” ಎಂಬುದಕ್ಕೆ ತಕ್ಕಂತೆಯೇ ಇತ್ತು. ತಲೆಗೆಲ್ಲ ಒಂದೇ ಸೂತ್ರವನ್ನು ಅವರು ಎಂದಿಗೂ ವಿಧಿಸಿದವರಲ್ಲ. ಒ೦ದು ಜನರಿಗೂ ಮತ್ತೊಂದು ಜನರಿಗೂ ಒಬ್ಬ ಮನುಷ್ಯನಿಗೂ ಮತ್ತೊಬ್ಬ ಮನುಷ್ಯನಿಗೂ ಸ್ವಭಾವ ಗುಣ, ಮುಂತಾದುವ್ರಗಳಲ್ಲಿ ವ್ಯತ್ಯಾಸವಿರುವತನಕ ಅವರ ಮಾ ರ್ಗವೂ ಬೇರೆಯಾಗ ಬೇಕು, ಆದ್ದರಿಂದ ಪರಮಹಂಸರು ಶಿಷ್ಯರ ಯೋಗ್ಯತೆಯನ್ನು ನೋಡಿ ಅವರವರಿಗೆ ತಕ್ಕ ಶಿಕ್ಷಣವನ್ನು ಕೊಡು ಆದರು ಸಮರ್ಥನಾದ ವೈದ್ಯನಂತೆ ಬೇಕಾದ ಸಾಧನ ಸಾಮಗ್ರಿ ಗಳನ್ನೂ ಅನುಭವವನ್ನೂ ಸಂಪಾದಿಸಿಟ್ಟುಕೊಂಡು ಯಾರು ಬಂದರೂ,

  1. ಈ ಸಂದರ್ಭದಲ್ಲಿ ಮಹಾ ಜ್ಞಾನಿಯಾದ ಹನುಮಂತನ ಕಥೆ ಯನ್ನು ಹೇಳುತ್ತಿದ್ದ ರು. ಒ೦ದು ಸಲ ಶ್ರೀ ರಾಮಚ೦ದ್ರನು, ಹನು ನು೦ತನನ್ನು “ ನೀನು ನನ್ನ ನು ಯಾವ ಭಾವದಲ್ಲಿ ಕಾಣುವೆ ? ನನ್ನ ನ್ನು ಯಾವಭಾವದಿಂದ ಕಂಡುಕೊಂಡು ಪೂಜೆ ಮಾಡುವೆ ? ಎ೦ದು ಕೇಳಿದ ನ೦ತೆ. ಆಗ ಆ೦ಜ ನೇಯನು, “ ಹೇ ರಾಮು ! ಯಾವಾಗ ನನಗೆ ಈ ದೇಹ ಬುದ್ದಿ ಇರುತ್ತದೆಯೋ, ಅಂದರೆ ನಾನು ದೇಹವೆ೦ದು ತಿಳಿದು ಕೊಂಡಿ ರುತ್ತೇನೆಯೋ, ಆಗ ನೀನು ಪ್ರಭು, ನಾನು ದಾಸ, ನೀನು ಸೇವ್ಯ ನಾನು ಸೇವಕ, ನೀನು ಪೂಜ್ಯ, ನಾನು ಪೂಜಕ ಎಂದು ತಿಳಿದು ಕೊ೦ಡಿರುತ್ತೇನೆ. ಯಾವಾಗ ನಾನು ಮನಸ್ಸು ಬುದ್ಧಿ ಗಳಿ೦ದ ಕೂಡಿದ ಜೀವಾತ್ಮ ನೆ೦ಬ ಭಾವನಿ ರುತ್ತದೆಯೋ ಆಗ ನೀನು ಪೂರ್ಣ, ನಾನು ಆ೦ ಶ ಎ೦ದು ತಿಳಿದುಕೊ೦ಡಿರುತ್ತೇನೆ, ಮತ್ತು ಯಾವಾಗ ನಾನು ಉಪಾಧಿ ರಹಿತವಾದ ಶುದ್ಧವಾದ ಆತ್ಮವೆಂದು ಸಮಾಧಿಯಲ್ಲಿ ಅನು ಭವಕ್ಕೆ ತಂದುಕೊಳ್ಳುತ್ತೇನೆಯೋ ಆಗ ನೀನುಯಾರೋ ನಾನು ಅವನೇ. ನೀನೂ ನಾನೂ ಒ೦ದೇ, ಏನೂ ಭೇದವಿಲ್ಲ, ಎ೦ದು ತಿಳಿದುಕೊಳ್ಳು ತೇನೆ ” ಎ೦ದು ಉತ್ತರಕೊಟ್ಟನ೦ತೆ.