ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚರಿತ್ರೆ ೧೦೫ ಪಾಶ್ಚಿಮಾತ್ಯರೂ, ಅವರ ರೀತಿ ನೀತಿಗಳನ್ನು ಮೆಚ್ಚತಕ್ಕ ನಮ್ಮ ದೇಶಿಯರೂ “ ನಮ್ಮದೇಶದ ಸ್ವಾಮಿಗಳೂ, ಸನ್ಯಾಸಿಗಳೂ, ಮಠಾಧಿಪತಿಗಳೂ, ಎಲ್ಲರೂ ಶುದ್ಧ Selfsh (ಸ್ವಾರ್ಥಪರರು): ತಮ್ಮ ಗತಿಯನ್ನು ತಾವು ನೋಡಿಕೊಂಡರೆ ಸರಿ; ಅವರು ನಿಜ ವಾಗಿಯೂ ಅಂಥ ಮೋಕ್ಷಸಾಧಕವಾದ ವಿಷಯಗಳನ್ನು ತಿಳಿದು ಕೊಂಡಿದ್ದರೆ ಊರೂರಿಗೂ ಹೋಗಿ ಲೆಕ್ಟರುಗಳನ್ನು ಕೊಡಲಿ. " ಎಂದು ಹೇಳಿರುವುದನ್ನು ಕೇಳಿರಬಹುದು, ಉಪನ್ಯಾಸಗಳನ್ನು ಕೊಡುವುದರಿಂದಲೇ ಪ್ರಪಂಚ ಉದ್ಧಾರವಾಗುವಂತೆ ಈಗಿನ ಕಾಲ ದಲ್ಲಿ ಜನರು ತಿಳಿದುಕೊಂಡಿರುವ ಹಾಗಿದೆ. ನಿಜವಾದ ಗುರುವು ಉಪನ್ಯಾಸಗಳನ್ನೇ ಕೊಡಬೇಕೆ ? ಅವನ ದರ್ಶನ ಮಾತ್ರದಿಂದ ಜನರು ಕೃತಾರ್ಥರಾಗರೆ ? ಗುರುವಿನ ಮನಸ್ಸಿನಲ್ಲಿ ಭಕ್ತನಿಗೆ ಜ್ಞಾನೋದಯವಾಗಲಿ ಎಂಬ ಕೋರಿಕೆ ಅಂಕುರಿಸಿದರೆ ಸಾಲದೆ ? ಅವರು ಊರಿಂದೂರಿಗೆ ಅಲೆಯುತ್ತಾ ಹೋಗಬೇಕೆ ? ಅವರಲ್ಲಿ ಮಹಿಮೆ ಇದ್ದರೆ ಶಿಷ್ಯರೇ ಹುಡುಕಿಕೊಂಡು ಬರುವುದಿಲ್ಲ ವೇ ? ಪರಮಹಂಸರು “ ಹೂ ಅರಳಿ ಮಕರಂದದಿಂದ ತುಂಬಿದರೆ ದುಂಬಿ ಗಳು ತಾವಾಗಿಯೇ ಹುಡುಕಿಕೊಂಡು ಬರುವುವು, ಅವುಗಳಿಗೆ ಯಾರೂ ಮಂತ್ರಾಕ್ಷತೆ ಕೊಟ್ಟು ಕರೆಸಬೇಕಾಗಿಲ್ಲ.” ಎಂದು ಹೇಳುತ್ತಿದ್ದರು. ಹಾಗಲ್ಲದೆ ನಿಸ್ಸಾರವಾದ, ಒಣಗಿಹೋದ ನಿರ್ಗಂಧ ಕುಸುಮವು ದುಂಬಿಗಳ ಮೇಲೆ ಹೋಗಿಬಿದ್ದರೆ ತಾನೇ ಆ ದುಂಬಿ ಗಳಿಗೆ ಆನಂದವುಂಟಾಗುವುದೇ ? ಮಧುವಿನಿಂದ ತುಂಬಿ ತುಳು ಕುತ್ತಿರುವ ಹೂವಿನಿಂದ ಅದನ್ನು ಆಸ್ವಾದನೆ ಮಾಡಲು ಶಕ್ತಿ ಯಿಲ್ಲದ ಹುಳು ಹುಬಟಿಗಳಿಗೆ ತಾನೇ ಪ್ರಯೋಜನವಾಗುವುದೋ ? ಆದ್ದರಿಂದ ಒಂದು ಕಡೆ ಗುರುವು ಜ್ಞಾನವನ್ನು ಪಡೆದು ಅದನ್ನು ಶೇಖರಿಸಿ ಇತರರಲ್ಲಿ ಧರ್ಮಶಕ್ತಿಯನ್ನು ಎಬ್ಬಿಸಲು ಸಮರ್ಥನಾ ಗಿರಬೇಕು, ಮತ್ತೊಂದು ಕಡೆ ಶಿಷ್ಯನು ನಿಜವಾದ ಶ್ರದ್ಧೆ, ನೈ ರಾಗ್ಯ, ಪವಿತ್ರತೆ, ಮೋಕ್ಷ ಪಡೆಯುವುದಕ್ಕೆ ಆಶೆ, ಇವೆಲ್ಲವನ್ನೂ