ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೬ ಶ್ರೀ ರಾಮಕೃಷ್ಣ ಪರಮಹ೦ಸ ರ ಉಳ್ಳವನಾಗಿರಬೇಕು, ಹೀಗೆ ಮುಮುಕ್ಷುತ್ವವಿದ್ದರೆ ಮಹಾಪುರುಷ ಸಂಶ್ರಯವೂ ಉಂಟಾಗಿಯೇ ಆಗುವುದು-ಆಗಲೇಬೇಕು. ಆಧ್ಯಾ ತ್ರಿಕ ವಿಚಾರಗಳಲ್ಲಿ ಮಾತ್ರ ಇಂದಿಗೂ ನಾಳೆಗೂ, ಹಸಿದು ಬಾ ಯಾರಿ ಬೇಸತ್ತು ಬಂದು “ ದೇಹಿ” ಎಂದರೆ ಈ ಧರ್ಮಭೂಮಿ ಯಾದ ನಮ್ಮದೇಶದಲ್ಲಿ " ನಾಸ್ತಿ" ಎನ್ನುವಹಾಗಿಲ್ಲ. ನಾನೇ ಸಂಶಯಾತ್ಮರು. ನಮ್ಮಲ್ಲಿಯೇ ನಮಗೆ ನಂಬುಗೆಯಿಲ್ಲ. ದೇವ ರಲ್ಲಿ ಕೇಳಬೇಕೆ? ಅಲ್ಲದೆ ನಮ್ಮಲ್ಲಿ ತೀವ್ರ ವೈರಾಗ್ಯವು ಹುಟ್ಟ ಬಿಟ್ಟಂತೆ ಕಾಣುತ್ತದೆ. ಆ ವೈರಾಗ್ಯವು ಅಭಾವ ವೈರಾಗ್ಯವೋ ಸ್ಮಶಾನ ವೈರಾಗ್ಯವೋ ಅಥವಾ ನಮ್ಮನಮ್ಮ ಕರ್ತವ್ಯವನ್ನು ಮಾಡು ವುದಕ್ಕೆ ಕೈಯಲ್ಲಿ ಹರಿಯದೆ ಹುಟ್ಟಿದ ಸುಳ್ಳು ವೈರಾಗ್ಯವೋ ಹೊರತು ನಿಜವಾದ ವೈರಾಗ್ಯವಲ್ಲ. ಈ ವಿಚಾರದಲ್ಲಿ ನಮ್ಮ ಕಳ್ಳ ಮನಸ್ಸೇ ನಮ್ಮನ್ನು ಮೋಸ ಪಡಿಸುವುದು, ಏಕೆಂದರೆ ಉತ್ತರ ಕ್ಷಣದಲ್ಲಿಯೇ ಪರಮಹಂಸರು ಆಜೀವನವೂ ಮಾತುಮಾತಿಗೂ ಒತ್ತಿ ಒತ್ತಿ ಪ್ರಸ್ತಾಪಿಸುತ್ತಿದ್ದ ಕಾಮಿನೀಕಾಂಚನಗಳು ಬಾಧಿಸ ತೊಡಗುವುವು. { ನಿಜವಾದ ವೈರಾಗ್ಯಕ್ಕೆ ಕಾಮಿನೀಕಾ೦ಚನಗಳ ಮೇಲಣ ಆಶೆಯು ಪೂರ್ತಿಯಾಗಿ ಹೋಗುವುದೇ ಲಕ್ಷಣ. ನಿಜ ವಾದ ವೈರಾಗ್ಯ, ಶ್ರದ್ಧೆ, ಅಭ್ಯಾಸಗಳಿದ್ದು ಕಾಮಿನೀಕಾಂಚನ ಗಳನ್ನು ತ್ಯಜಿಸಿ' ಮೋಕ್ಷವನ್ನು ಸಾಧಿಸಬೇಕೆಂದು ಆಸಕ್ತಿ ಇರುವ ವನಿಗೆ ಸಕಾಲದಲ್ಲಿ ಗುರುವು ದೊರೆತೇ ದೊರೆಯುವನು. ಅವಶ್ಯ ವಿದ್ದರೆ ಗುರುವೇ ಶಿಷ್ಯನನ್ನು ಹುಡುಕಿಕೊಂಡು ಹೋಗುವನು. ಪರಮಹಂಸರ ಜೀವನ ಚರಿತ್ರೆಯಿಂದಲೇ ಇದಕ್ಕೆ ಉದಾಹರಣೆ ಗಳನ್ನು ಕೊಡಬಹುದು. ಈಗಿನ ಕಾಲದಲ್ಲಿ ಹಿಂದೂಧರ್ಮವು ನಮ್ಮದೇಶದ ಅನ ನತಿಗೆ ಮುಖ್ಯ ಕಾರಣವೆಂದೂ, ದೇಶೋನ್ನತಿಗೆ ದೊಡ್ಡ ಅಡಚಣೆ

  • Ask, and it shall be given -Christ.