ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಚರಿತ್ರೆ

ಬಾಹ್ಯ ಜ್ಞಾನಕ್ಕೆಲ್ಲಾ ಇದೊಂದೇ ಉಪಯೋಗವಾಯಿತು. ದಾಂಭಿಕ ತನ, ಸ್ವಾರ್ಥ, ದುರಾಶೆ ಇವೇ ಇದರ ಫಲವಾದುವು. ನಾವು ಪಾಶ್ಚಿಮಾತ್ಯರೊಡನೆ ಬೆರೆತ೦ದಿನಿಂದ ಅವರ ಐಶ್ವರ್ಯವನ್ನೂ ಐಹಿಕ ಭೋಗಸಾಧನಗಳನ್ನೂ ಮೆಚ್ಚುತ್ತ ಬಂದೆವು, ಇಂದ್ರಿಯಾತೀತ ವಾದ ಆಧ್ಯಾತ್ಮಿಕ ವಿಚಾರವನ್ನು ಆಗಲೇ ಮರೆಯುತ್ತ ಬಂದಿದ್ದರಿಂದ ವಿಜ್ಞಾನ ಶಾಸ್ತ್ರವೇ ಶಾಸ್ತ್ರವೆಂದೂ, ಇಂದ್ರಿಯ ಸುಖವೇ ಸುಖ ನೆ೦ದೂ ಭ್ರಮೆಯುಂಟಾಯಿತು. ಯಾವಾಗಲೂ ಪಾಶ್ಚಿಮಾತ್ಯ ರನ್ನು ನೋಡಿ ಬೆರಗಾಗುತ್ತಿದದರಿಂದ ಅವರ ಭೌತಿಕ ಶಾಸ್ತ್ರವು ಆಧ್ಯಾತ್ಮಿಕ ವಿಚಾರಗಳಲ್ಲಿ ಪ್ರಮಾಣವಾಗಲಾರದೆಂಬುದನ್ನೂ, ಸಾವಿರಾರು ವರ್ಷಗಳ ಕೆಳಗೆ ಸಂಸಾರ ತ್ಯಾಗಮಾಡಿ ಸರಮಾತ್ಮ ಧ್ಯಾನದಲ್ಲಿ ನಿರತರಾಗಿದ್ದು ಜ್ಞಾನಸಂಪಾದನೆ ಮಾಡಿದ ಖುಷಿ ಗಳೆ ಪ್ರಮಾಣ ವೆಂಬುದನ್ನೂ ನಾವು ನಂಬಲಾರದೇ ಹೋದೆವು. ವಿಜ್ಞಾನಬಲದಿ೦ದ ಸ೦ಚ ಭೂತಗಳನ್ನು ವಶಮಾಡಿಕೊಂಡು ಇಷ್ಟು ಸಾಮರ್ಥ್ಯವನ್ನೂ ಸಂಪತ್ತನ್ನೂ ಪಡೆದಿರುವ ಪಾಶ್ಚಿಮಾ ತ್ಯರು “ ಧರ್ಮವೆಂದು ವೈದಿಕರೂ ಪುರೋಹಿತರೂ ತಮ್ಮ ಹೊಟ್ಟೆ ತುಂಬಿಕೊಳ್ಳುವದಕ್ಕಾಗಿ ಮಾಡಿದ ಒಂದು ಕಟ್ಟು. ಪರಲೋಕ, ಪರಬ್ರಹ್ಮ ಪರಮಾತ್ಮ ಇವೆಲ್ಲಾ ಒಂದು ದೊಡ್ಡ ಕವಿಕಲ್ಪನೆ. ಎಷ್ಟು ಇಶ್ವರವನ್ನು ಸಂಪಾದಿಸಿದರೂ ಹುಟ್ಟಿದಂದಿ ನಿಂದ ಸಾಯುವವರೆಗೂ ಕೀಳುಜಾತಿಯವರು ಕೀಳುಜಾತಿ ಯಲ್ಲಿಯೇ ಇರುವುದೆಂದರೆ ಯಾವನ್ಯಾಯ ? " ಎಂದು ಮುಂತಾಗಿ. ಹೇಳಿದ ರಿ೦ದ ಅದೇ ವೇದವಾ ಕ್ಯವಾಯಿತು, ನಾವು ಅವರ ಉಪದೇಶವನ್ನು ಸ್ವೀಕರಿಸಿ ಅವರು ಹೇಳಿಕೊಟ್ಟ ಮಂತ್ರವನ್ನೇ ಜಪಿಸುತ್ತಾ, ಅವರು ತೋರಿಸಿದ ದಾರಿಯನ್ನೇ ಹಿಡಿದೆವು. ಅದಕ್ಕೆ ಫಲವಾಗಿ ಅವರಂತೆ ನಾವೂ ಸ್ವಲ್ಪ ಐಹಿಕ ಭೋಗದ ರುಚಿಯನ್ನು ನೋಡಿದೆವು. ಜೊತೆಯಲ್ಲಿ ಯೇ ಅವರಂತೆ ಸ್ವಾರ್ಥ ಪರತೆ ಧರ್ಮದಲ್ಲಿ ಅಪನಂಬುಗೆ, ಅತೃಪ್ತಿ, ಅಶಾಂತತೆ ಇವು. ಗಳನ್ನು ಯಥೇಚ್ಚವಾಗಿ ಸಂಪಾದನೆ ಮಾಡಿಕೊಂಡೆವು.