ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಶ್ರೀ ರಾಮಕೃಷ್ಣ ಪರಮಹ೦ಸರ

ಪ್ರಾಚೀನಕಾಲದಲ್ಲಿ ನಮ್ಮ ಜೀವನವು ಧರ್ಮದ ಆಧಾರದ

ಮೇಲೆ ಬೆಳೆದಿದ್ದ ದರಿಂದ ಆಗಿನ ನಾಗರಿಕತೆಯು ಈಗಿನ ನವನಾಗರಿಕತೆಗೆ ಪೂರ್ತಿಯಾಗಿ ವಿರೋಧವಾಗಿತ್ತು. ಸಂಯ ಮನೇ ಮೂಲಮಂತ್ರ, ವೈರಾಗ್ಯಕ್ಕೋಸ್ಕರ ಸುಖ, ತ್ಯಾಗಕ್ಕೋಸ್ಕರ ಭೋಗ, ಪರಕ್ರೋಸ್ಕರ ಇಹ, ಈಶ್ವರ ಸಾಕ್ಷಾತ್ಕಾರವೇ ಮುಖ್ಯೋ ವೇಶ್ಯ, ಹೀಗಿದ್ದದ್ದರಿಂದ ನಮ್ಮವರು ಉನ್ನತೋನ್ನತವಾದ ಲಕ್ಷ್ಮ. ವನ್ನು ಸಾಧಿಸುತ್ತಿದ ರು. ವರ್ಣ ಜಾತಿ ವಿಭಾಗಗಳಿದ ರೂ ಯಾವ ವಿಧವಾದ ಅಸಮಾಧಾನವೂ ಇರಲಿಲ್ಲ. ಸಮಾಜದ ಯಾವಿ ಣಿಯಲ್ಲಿದ್ದ ರೂ, ಯಾವಜಾತಿಯಲ್ಲಿ ಹುಟ್ಟಿದ್ದರೂ ನಿಷವಕರ್ಮ ವನ್ನು ಮಾಡಿದರೆ ಮೋಕ್ಷವನ್ನು ಪಡೆಯುವನೆಂದೂ ಅದೇ ಮುಖ್ಯವೆಂದೂ ಇwಕ ಭೋಗವು ತುಚ್ಚವೆಂದೂ ಎಲ್ಲರೂ ನ೦ಬಿ ದರು. ಹೀಗಿದ್ದರೆ ಅಸಮಾಧಾನ ಹೇಗೆ ಬಂದೀತು? ಅಲ್ಲದೆ, ಹಿಂದಿನ ಕಾಲದಲ್ಲಿ ಹಿಮಾಚಲದಿಂದ ರಾಮೇಶ್ವರದ ವರೆಗೂ ಭರತ ತಂಡವೆಲ್ಲವೂ ಒಂದೇ ಧರ್ಮಸೂತ್ರದಿಂದ ಕಟ್ಟಲ್ಪಟ್ಟಿತ್ತು. ಎಲ್ಲ ರಲ್ಲಿಯೂ ದೈವಭಕ್ತಿ, ವೇದ, ರಾಮಾಯಣ ಮಹಾಭಾರತ ಮುಂತಾದ ಧರ್ಮಗ್ರಂಥಗಳಲ್ಲಿ ಪೂರ್ಣವಾದ ನಂಬುಗೆ, ಗೀತಾ, ಗಂಗಾ, ಗಾಯತ್ರೀ ಇವುಗಳಲ್ಲಿ ಶ್ರದ್ದಾ ಭಕ್ತಿ, ತೀರ್ಥಯಾತ್ರೆ ಗಳಲ್ಲಿ ವಿಶ್ವಾಸ ಇವುಗಳೆಲ್ಲವೂ ಒಂದೇಯಾಗಿದ್ದುವು. ಆದ್ದರಿಂದ ಜನಗಳಲ್ಲಿ ಒಂದು ವಿಧವಾದ ಐಕಮತ್ಯವೂ ಪರಸ್ಪರ ವಾತೃ ಲ್ಯವೂ ಇದು ವ್ರ, ಧರ್ಮವೇ ಅವರ ಜೀವನವಾಗಿತ್ತು.

ಪಾಶ್ಚಿಮಾತ್ಯರ ಪ್ರಾಬಲ್ಯದಿ೦ದ ಐಹಿಕ ಸುಖಕ್ಕೆ ಪ್ರಾಶಸ್ಯ

ಉಂಟಾಯಿತು. ಐಶ್ವರ್ಯವಂತನನ್ನು ಬಡವನು ನೋಡಿ ಅಸೂಯೆ ಪಡುವಂತಾಯಿತು. ವರ್ಣ ಜಾತಿ ಭೇದಗಳಿ೦ದ ಅತೃಪ್ತಿಯು ಹೆಚ್ಚಿತು. ಇಂದ್ರಿಯ ಸುಖವು ತಾನೇ ತಾನಾಗಿ ಸಂಯಮವನ್ನು ಓಡಿಸಿ ಬಿಟ್ಟಿತು. ಹಿಂದಿನ ಶಿಕ್ಷಾಫಲವೆಲ್ಲಾ ಹೋಗಿ ನಾಸ್ತಿಕ್ಯ ವುಂಟಾಯಿತು. ಆವಶ್ಯಕತೆ ಇರಲಿ, ಇಲ್ಲದಿರಲಿ, ನಾವು ಮೂಗ