ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೊದಲನೆಯ ಅಧ್ಯಾಯ'

ರಾಮಕ್ರಷ್ಣಪರಮಹಂಸರ ತಾಯಿತಂದೆಗಳು.

ಬಂಗಾಳಾದೇಶದ ಬರ್ದವ್ರಾ ಡಿಸ್ಟ್ರಿಕ್ಟಿಗೆ ಸೇರಿದ 'ದೇರ'

ಎ೦ಬ ಗ್ರಾಮದಲ್ಲಿ ಸುಮಾರು ನೂರೈವತ್ತು ವರ್ಷಗಳ ಹಿಂದೆ ಮಾಣಿಕರಾವಚಟ್ಟೋಪಾಧ್ಯಾಯನೆಂಬ ಒಬ್ಬ ವೈದಿಕ ಬ್ರಾಹ್ಮಣ ಸಿದ್ದನು. ಆತನಿಗೆ ಖಧಿರಾನು, ನಿಧಿಯಾನ, ಕನೈ, ರಾಮು ಎಂಬ ಮೂರುಜನ ಗಂಡುಮಕ್ಕಳೂ, ರಾಮಶೀಲಾ ಎಂಬ ಒಬ್ಬ ಹೆಣ್ಣು ಮಗ ಇದರು. ಹಿರಿಯಮಗನಾದ ಖುದಿರಾಮನು ಕ್ರಿ. ಶ. ೧೭೭೫ ರಲ್ಲಿ ಹುಟ್ಟಿ ದನು. ಆತನು ಜೀವನೋಪಾಯಕ್ಕೆ ಅನು ಕೂಲವಾದ ಯಾವುದಾದರೂ ಲೌಕಿಕವಿದ್ಯೆಯನ್ನು ಕಲಿತಿದ್ದನೋ ಇಲ್ಲವೋ ತಿಳಿಯದು. ಆದರೆ ಶಾಸ್ತ್ರದಲ್ಲಿ ಸದ್ದಾಹ್ಮಣರಿಗೆ ಸ್ವ ಭಾವಸಿದ್ದವಾಗಿ ಇರಬೇಕೆಂದು ಹೇಳಿರುವ ಸತ್ಯ ನಿಷ್ಟೆ, ತೃಪ್ತಿ, ತಾಳ್ಮೆ, ವೈರಾಗ್ಯ ಮುಂತಾದ ಗುಣಗಳನ್ನು ಸಿಧಾತನು ಆತನಿಗೆ ಯಥೇಚ್ಚವಾಗಿ ಕೊಟ್ಟಿದ್ದನು. ಪ್ರತಿನಿತ್ಯವೂ ಸಂಧ್ಯಾವಂದನಾದಿ. ನಿತ್ಯಕರ್ಮಗಳನ್ನು ಮುಗಿಸಿಕೊಂಡು ಮನೆದೇವರಾದ ಶ್ರೀರಾಮು ಚಂದ್ರನನ್ನು ಭಕ್ತಿ ಪೂರ್ವಕವಾಗಿ ಪೂಜೆಮಾಡಿದಹೊರತು ಒಂದು. ತೊಟ್ಟು ನೀರನ್ನು ಸಹ ಕುಡಿಯುತ್ತಿರಲಿಲ್ಲ. ರೂದ್ರರ ಮನೆಯಲ್ಲಿ ದಾನವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಶೂದ್ರರ ಮನೆಯಲ್ಲಿ ಪೌರೋಹಿತ್ಯ, ಪೂಜೆಮುಂತಾದದ್ದನ್ನು ಮಾಡಿಸುತ್ತಿದ್ದ ಬ್ರಾಹ್ಮಣರ ಮನೆಗೆ ಊಟ ಉಪಚಾರಗಳಿಗೆ ಹೋಗುತ್ತಿರಲಿಲ್ಲ. ಈ ವಿಧ ನಾದ ನಿಷ್ಠೆ ಮತ್ತು ಸದಾಚಾರವನ್ನು ನೋಡಿ ಆಗ್ರಾಮದವ ರೆಲ್ಲರೂ ಅವನಲ್ಲಿ ವಿಶೇಷ ಭಕ್ತಿಯನ್ನೂ ಗೌರವವನ್ನೂ ಇಟ್ಟು ಕೊ೦ಡಿದರು.