ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶ್ರೀ ರಾಮಕೃಷ್ಣ ಪರಮಹ೦ಸರ.

ತಂದೆಯ ಮರಣಾನಂತರ ಸಂಸಾರದ ಭಾರವೆಲ್ಲ ಖುದಿ

ರಾಮನಮೇಲೆ ಬಿತ್ತು. ಆತನು ಧರ್ಮಮಾರ್ಗವನ್ನು ಬಿಡದೆ ಸಾಧ್ಯವಾದ ಮಟ್ಟಿಗೆ ಸಂಸಾರವನ್ನು ಅನುಕೂಲವಾದ ರೀತಿ ಯಲ್ಲಿ ನಡೆಸಿಕೊಂಡು ಹೋಗುತ್ತಿದ್ದನು. ಇದಕ್ಕೆ ಮುಂಚೆಯೇ ಆತನಿಗೆ ಮದುವೆಯಾಗಿ ಹೆಂಡತಿ ತೀರಿಹೋಗಿದಳು. ಕ್ರಿ. ಶ. ೧೭೯೯ ರಲ್ಲಿ ಮತ್ತೆ ಮದುವೆಯಾಯಿತು. ಆಗ ಆತನಿಗೆ ಸುಮಾರು ೨೫ ವರ್ಷ. ಈ ಎರಡನೆಯ ಹೆಂಡತಿಯಾದ ಶ್ರೀಮತೀ ಚ೦ದ್ರಾ ದೇವಿಗೆ ಎಂಟು ವರ್ಷ. ಆಕೆಯು ಚಿಕ್ಕ ವಯಸ್ಸಿನಿಂದಲೂ ಸರ ಕಸ್ವಭಾವವುಳ್ಳವಳಾಗಿಯೂ ದೇವಬ್ರಾಹ್ಮಣರಲ್ಲಿ ಭಕ್ತಿ ಯುಳ್ಳವಳಾಗಿಯೂ ಪ್ರೇಮಮಯಿಯಾಗಿಯೂ ಇದಳು. ಆದರಿಂದ ಈಕೆಯನ್ನು ಕಂಡರೆ ಮನೆಯಲ್ಲಿ ಎಲ್ಲರಿಗೂ ಕೇವಲವಿಶ್ವಾಸ. ಹೀಗಿರಲಿ, ಈಕೆಯ ಹೊಟ್ಟೆಯಲ್ಲಿ ೧೮೦ ರಲ್ಲಿ ರಾಮಕುಮಾರ ನೆಂಬೊಬ್ಬ ಮಗನೂ ೧೮೧೦ ರಲ್ಲಿ ಕಾತ್ಯಾಯನೀ ಎಂಬೊಬ್ಬ ಮಗಳೂ ಹುಟ್ಟಿದರು. ಹೀಗೆ ಸಂಸಾರವು ಹೆಚ್ಚಾದ್ದರಿಂದ ಖುದಿ ರಾಮನಿಗೆ ಜೀವನ ಮಾಡುವುದು ಕಷ್ಟವಾಗುತ್ತ ಬ೦ತು. ನಾಲಿ ದಕ್ಕೆ ಕಾತ್ಯಾಯನಿಯು ಹುಟ್ಟಿದ ಸ್ವಲ್ಪ ಕಾಲದಲ್ಲಿಯೇ ಅಕಸ್ಮಾತ್ತಾಗಿ ಆತನಿಗೆ ಇನ್ನೊಂದು ವಿಷಮುಕಷ್ಟವು ಪ್ರಾಪ್ತವಾಯಿತು.

ಆವೂರಿನ ಜಮೀನುದಾರನಾದ ರಾಮಾನಂದರಾಯನು

ಇಶ್ವರ ಮತ್ತನಾಗಿ ತನಗಾಗದ ಜನರನ್ನೆಲ್ಲಾ ಕಿರುಕುಳಗುಟ್ಟಿಸು ತಿದ್ದನು. ಇವನು ಒಂದುಕಾಲದಲ್ಲಿ ಯಾರಮೇಲೆಯೋ ಒ೦ದು ಸುಳ್ಳು ದಾವಾ ಹಾಕಿ ಅದಕ್ಕೆ ಯೋಗ್ಯನಾದ ಸಾಕ್ಷಿ ಬೇಕಾಗಿದ್ದುದು ರಿಂದ ಖುದಿರಾಮನನ್ನು ಸಾಕ್ಷಿಯಾಗಿ ಕೋರಿದನು. ಪಾಪ! ಧರ್ಮ ಪರಾಯಣನಾದ ಖುದಿರಾಮನು ತನ್ನ ಸ್ವಭಾವಕ್ಕೆ ವಿರುದ್ದವಾಗಿ ಸುಳ್ಳು ಸಾಕ್ಷ್ಯವನ್ನು ಕೊಡುವುದೆಂದರೆ ಹೇಗೆ? ಹೇಳದೇ ಹೋದರೂ, ರಾಮಾನಂದರಾಯನು ಯಾವುದಾದರೂ ಒಂದು ನೆಪದಲ್ಲಿ ತನ್ನನ್ನು ನಿರ್ಮೂಲ ಮಾಡಿಬಿಡುವುದು ನಿಶ್ಚಯ. ಆದರೂ ಸತ್ಯಕ್ಕೆ ಹೆದರಿ