ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಚರಿತ್ರೆ

ಅವನಿಗೆ ವಿರೋಧವಾಗಿ ನಡೆಯಬೇಕಾಯಿತು. ತಾನು ಸುಳ್ಳು ಸಾಕ್ಷಿ ಹೇಳಲಾರೆನೆಂದು ಕಂಡೋಕ್ತವಾಗಿ ಹೇಳಿ ಬಿಟ್ಟ ನು. ಇದರಿಂದ ಆತ ನಿಗೆ ಮಹಾಕೋಪ ಉಂಟಾಗಿ, ಸ್ವಲ್ಪ ದಿವಸದಲ್ಲಿಯೇ ಸುಳ್ಳು ಪತ್ರ ಗಳನ್ನು ಹುಟ್ಟಿಸಿ ಖುದಿರಾಮನಮೇಲೆ ದಾವಾ ಹಾಕಿ ಆತನ ಅಲ್ಪ ಸ್ವಲ್ಪ ನಿತ್ರಾರ್ಜಿತ ಸ್ವತ್ತನ್ನೆಲ್ಲಾ ಅಪಹರಿಸಿಬಿಟ್ಟನು. ಖುದಿರಾಮ ನಿಗೆ ಡೇರೆಯಲ್ಲಿ ನಿಲ್ಲುವುದಕ್ಕೆ ಒಂದುಹೆಜ್ಜೆ ಜಾಗವೂ ಇಲ್ಲದಂತಾ ಯಿತು. ಈ ದರ್ದತೆಯನ್ನು ಕಂಡು ಊರಿನವರಿಗೆಲ್ಲಾ ಕನಿ ಕರ ಉ೦ಟಾದರೂ ರಾಮಾನಂದರಾಯನ ಮೇಲಿನ ಭಯದಿಂದ ಅವನಿಗೆ ಸಹಾಯಮಾಡಲು ಯಾರೂ ಮುಂದುವರಿಯಲಿಲ್ಲ. ಈಗ ಖುದಿರಾಮಸಿಗೆ ೪೦ ವರ್ಷ, ಸಂಸಾರ ದೊಡ್ಡದು, ಅದರ ಮೇಲೆ ಬಡತನ, ಆದರೂ 'ರಾಮನೇಗತಿ " ಯೆಂದು ಹೇಗೋ ಕಾಲವನ್ನು ತಳ್ಳುತಿದನು. ಈಸನಾಚಾರವು ಕೆಲವುದಿನಗಳಲ್ಲಿ, ಡೇರೆಗೆ ಸುಮಾರು ಎರಡು ಮೈಲಿಯಲ್ಲಿದ ಕಾಮಾರಪುಕುರ ಗ್ರಾಮದ ಸುಖಲಾಲಗೋಸ್ವಾಮಿಯ ಕಿವಿಗೆ ಬಿತ್ತು. ಖುದಿ ರಾಮನಿಗೂ ಈತನಿಗೂ ಮೊದಲಿನಿಂದಲೂ ಸ್ನೇಹವಿದುದರಿಂದ ಈ ಕಷ್ಟ ಕಾಲದಲ್ಲಿ ಅವನನ್ನು ಬರಮಾಡಿಕೊಂಡು ತನ್ನ ಮನೆ ಯಲ್ಲಿಯೇ ಇರಲು ಸ್ವಲ್ಪ ಜಾಗವನ್ನು ಕೊಟ್ಟಿದ್ದಲ್ಲದೆ ಕೆಲವುದಿನಗಳಾದ ಮೇಲೆ ಸುಮಾರು ಅರ್ಧ ಎಕರೆ ಜಮೀನನ್ನೂ ಕೊಟ್ಟನು. ಇಲ್ಲಿಂದ ಮುಂದಕ್ಕೆ ಕಾಮಾರಪುಕುರವೇ ಖುದಿರಾನನ ವಾಸಸ್ಥಾನ ವಾಯಿತು.

ಈ ಕಷ್ಟಾನುಭವದಿಂದ ಖುದಿರಾಮನಿಗೆ ಪ್ರಾಪಂಚಿಕ ಸುಖವು

ಕ್ಷಣಿಕವೆಂಬುದು ಮನಸ್ಸಿಗೆ ತಟ ವೈರಾಗ್ಯವು ಹೆಚ್ಚಿತು. ಶಾಂತಿ, ತೃಪ್ತಿ, ಈಶ್ವರ ನಿರ್ಭರತೆ ಇವು ಹೆಚ್ಚುತ್ತಾ ಹೋದುವು. ಅವನ ಮುಖದಲ್ಲಿ ಕಂಡುಬರುತ್ತಿದ ಒಂದುವಿಧವಾದ ತೆಜಸ್ಸನ್ನೂ ಶಾಂತಿ ಯನ್ನೂ ಗ್ರಾಮ ನಿವಾಸಿಗಳೆಲ್ಲರೂನೋಡಿ ಅವನನ್ನು ಖುಷಿಯಂತೆ ಗೌರವದಿಂದಲೂ ಭಕ್ತಿಯಿಂದಲೂ ಕಾಣುತ್ತಿದ್ದರು. ಅವನನ್ನು