ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶ್ರೀ ರಾಮಕೃಷ್ಣ ಪರಮಹ೦ಸರ

ನೋಡಿದ ಕೂಡಲೆ ತನ್ನ ಕಾಡುಹರಟೆಗಳನ್ನು ಬಿಟ್ಟು, ಎದುನಿಂತು ಅವನೊಡನೆ ಮಾತನಾಡುತ್ತಿದ್ದರು ಅವನ ಆಶೀರ್ವಚನವು ನಿಶ್ಚಯ ವಾಗಿಯೂ ಫಲಕಾರಿಯಾಗುವದೆಂದು ನಂಬಿ ಸಂಪತ್ತಿನಲ್ಲಿಯೂ ಪಿಪತ್ತಿನಲ್ಲಿಯೂ ಅವನ ಆಶೀರ್ವಾದವನ್ನು ಪಡೆಯಲು ಜನರು ಬಂದು ಹೋಗುತ್ತಲೇ ಇದ್ದರು. ಶ್ರೀಮತಿ ಚ೦ದ್ರಾದೇವಿಯಲ್ಲಿ ರೂ ಜನರಿಗೆ ಇದೇ ವಿಧವಾದ ಗೌರವವೂ ವಿಶ್ವಾಸವೂ ಇದುವು. ಆಕೆಯೂ ತನ್ನ ಸರಳತೆ, ದಯೆ, ಪ್ರೀತಿಗಳಿ೦ದ ಆ ಗ್ರಾಮಕ್ಕೆ ತಾಯಿ ಯಂತಿದ್ದಳು. ಬಡವರನ್ನು ಕಂಡರೆ ಆಕೆಗೆ ಕೇವಲ ಮರುಕ, ತನ್ನ ಹತ್ತಿರ ಇದ್ದದ್ದನ್ನು ಹಿಂದು ಮುಂದು ನೋಡದೆ ಕೊಟ್ಟು ಬಿಡುವಳು. ವಿಶ್ವಾಸಪೂರ್ವಕವಾಗಿ ಮಾತನಾಡಿಸುವಳು. ಭಿಕ್ಷುಕರಿಗೂ ಸಾಧು ಸನ್ಯಾಸಿಗಳಿಗೂ ಎಂದಿಗೂ ಆ ಮನೆಯ ಬಾಗಿಲು ಹಾಕಿದುದೇ ಅಲ್ಲ, ಮಕ್ಕಳಿಗೂ ಕೂಡ ಅನರಮನೆಗೆ ಹೋದರೆ ಏನಾದರೂ ತಿ೦ಡಿಸಿಕ್ಕುವುದೆಂದು ಪೂರ್ಣ ಭರವಸೆ ಇತ್ತು. ಹೀಗೆ ಆಬಾಲ ವೃದ್ದರೂ ಖುದಿರಾಮನಮನೆಗೆ ಆಗಾಗ್ಗೆ ಸಂತೋಷದಿಂದ ಬಂದು ಹೋಗುತ್ತಿದ್ದರು. ಮನೆಯಲ್ಲಿ ದಾರಿದ್ರವಿದ್ದರೂ ಒಂದು ಅಪೂರ್ವ ವಾದ ಶಾ೦ತಿಯು ಬೆಳಗುತ್ತಿತ್ತು.

ಈ ಕಾಲದಲ್ಲಿ ನಡೆದ ಒಂದುಸ೦ಗತಿಯಿಂದ ಖುದಿರಾಮನ

ದೈವಭಕ್ತಿಯು ಎಷ್ಟಿ, ನಮಟ್ಟಿಗಿತ್ತೆಂಬುದನ್ನು ಊಹಿಸಬಹುದು. ಆತನತ೦ಗಿಯಾದ ರಾಮಶೀಲೆಯ ಮಗ ರಾಮಚಂದ್ರನು ಮೇದಿನಿ ಪುರದಲ್ಲಿ ಮೊತ್ತ ಯಾರನಾಗಿದ್ದನು. ಕಾಮಾರಪುರಕ್ಕೂ ಅಲ್ಲಿಗೂ ಸುಮಾರು ೪೦ ಮೈಲಿ. ಈ ರಾಮಚಂದ್ರನ ಯೋಗಕ್ಷೇಮವನ್ನು ವಿಚಾರಿಸಿಕೊಂಡು ಬರುವುದಕ್ಕೆ ಆಗಿಂದಾಗ್ಗೆ ಖುದಿರಾಮನು ಅಲ್ಲಿಗೆ ಹೋಗಿಬರುತ್ತಿದ್ದನು. ಒ೦ದುದಿನ ಹೀಗೆ ಮೇದಿಸೀ ಪುರಕ್ಕಾಗಿ ಬೆಳಗ್ಗೆ ಹೊರಟು ಸುಮಾರು ಹತ್ತು ಗಂಟೆಯ ಹೊತ್ತಿಗೆ ದಾರಿಯಲ್ಲಿ ಒಂದು ಊರನ್ನು ಸೇರಿದನು. ಅಲ್ಲಿ ಆಗ ತಾನೇ ಚಿಗುರಿ ತಳತಳನೆ ಹೊಳೆಯುತ್ತಿರುವ ದಳಗಳಿಂದ ಕೂಡಿದ