ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಚರಿತ್ರೆ

ಒಂದು ಬಿಲ್ವವೃಕ್ಷವನ್ನು ನೋಡಿ ಅವನಿಗೆ ಪರಮಾನಂದವಾಯಿತು. ತಾನು ಮೇದಿನೀಪುರಕ್ಕೆ ಹೊರಟಿದ್ದನೆಂಬುದು ಸಂಪೂರ್ಣವಾಗಿ ಮರೆತು ಹೋಯಿತು. ಆ ಊರಿನೊಳಕ್ಕೆ ಹೋಗಿ ಒಂದು ಹೊಸ ಬುಟ್ಟಿಯನ್ನೂ ಒಂದು ಚೌಕವನ್ನೂ ಕೊಂಡು ಕೊಂಡು ಆ ಚೌಕ ವನ್ನು ಚೊಕ್ಕಟವಾಗಿ ಕೊಳದಲ್ಲಿ ಒಗೆದು ಆ ಕುಕ್ಕೆಯತುಂಬ ಬಿಲ್ವಪತ್ರೆಯ ದಳಗಳನ್ನು ಕುಯು ತುಂಬಿ ಅದರಮೇಲೆ ಒದ್ದೆಯ ಬಟ್ಟೆಯನ್ನು ಮುಚ್ಚಿಕೊಂಡು ಉರಿಬಿಸಿಲಿನಲ್ಲಿಯೇ ಹಿಂತಿರುಗಿದನು. ಕಾಮಾರಪುಕುರವನ್ನು ಸೇರಿದಾಗ ಮಧ್ಯಾಹ್ನ ಸುಮಾರು ಒಂದು ಗಂಟೆಯಾಗಿತ್ತು. ಕೂಡಲೇಸ್ನಾನಮಾಡಿ ಬಹಳ ಹೊತ್ತು ಈ ಪತ್ರೆಗಳಿಂದ ದೇವತಾರ್ಚನೆಯನ್ನು ಮಾಡಿದನು. ಇದೆಲ್ಲವೂ ಆದಮೇಲೆ ಊಟಮಾಡುತ್ತಿದ್ದಾಗ ಶ್ರೀಮತಿ ಚ೦ದ್ರಾದೇವಿಯು ಈ ವೃತ್ತಾಂತವನ್ನೆಲ್ಲಾ ತಿಳಿದು ಕೇವಲವಿಸ್ಮಿತೆಯಾದಳು. ಖುದಿ ರಾಮನು ಮೇದಿನೀಪುರಕ್ಕೆ ಮರುದಿನ ಹೊರಟನು.

ಕಾಮಾರಪುಕುರಕ್ಕೆ ಬಂದಮೇಲೆ ಈರೀತಿ ಆರುವರ್ಷಗಳು

ಕಳೆದುವು. ಈಗ ರಾಮಕುಮಾರನಿಗೆ ಹದಿನಾರುವರ್ಷ ಕಾತ್ಯಾ ಯನಿಗೆ ಹನ್ನೊಂದುವರ್ಷ ಮಗಳಿಗೆ ವಿವಾಹವಾಗಬೇಕಾದ ವಯಸ್ಸು ಮೀರುತ್ತಾಬಂದದ್ದನ್ನು ನೋಡಿ ಖುದಿರಾಮನು ಹುಡುಗಿ ಯನ್ನು ಹತ್ತಿರದಲ್ಲಿದ್ದ ಆನೂರು ಗ್ರಾಮದ ಕೇನೇರಾಮನಿಗೆ ಕೊಟ್ಟು ಮದುವೆಮಾಡಿದನು. ಇದರ ಜೊತೆಯಲ್ಲಿಯೇ ಕೇನೇರಾಮನ ತಂಗಿ ಯನ್ನು ಕೊಟ್ಟು, ರಾಮಕುಮಾರನ . ಮದುವೆಯೂ ನಡೆದುಹೋ ಯಿತು. ಇಷ್ಟು ಹೊತ್ತಿಗೆ ರಾಮಕುಮಾರನು ಸಾಹಿತ್ಯ ವ್ಯಾಕರಣ ಗಳನ್ನು ಮುಗಿಸಿ ಸ್ಮತಿ ಶಾಸ್ತ್ರಗಳನ್ನು ಓದುತ್ತಿದ್ದನು. ಮೂರು ನಾಲ್ಕು ವರ್ಷಗಳಲ್ಲಿ ರಾಮಕುಮಾರನು ಸಂಪಾದಿಸುವುದಕ್ಕೆ ಶಕ್ತ ನಾದನು. ಮಗನು ವಯಸ್ಕನಾಗಿ ಸಂಸಾರ ಭಾರವನ್ನು ವಹಿಸು ವುದಕ್ಕೆ ಸಮರ್ಥನಾದದ್ದನ್ನು ನೋಡಿ ತೀರ್ಥಯಾತ್ರೆ ಮಾಡಿ ಕೊಂಡು ಬರಲು ಮನಸ್ಸು ಹುಟ್ಟ, ೧೮೨೪ ರಲ್ಲಿ ಖುದಿರಾಮನು