ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶ್ರೀ ರಾಮಕೃಷ್ಣ ಪರಮಹ೦ಸರ

ರಾಮೇಶ್ವರಕ್ಕೆ ಹೊರಟನು. ಆ ಕಾಲದಲ್ಲಿ ಈಗಿನಹಾಗೆ ಪ್ರಯಾ ಣಕ್ಕೆ ರೈಲು ಮುಂತಾದ ಅನುಕೂಲಗಳಿರಲಿಲ್ಲ. ಆದರೂ ದಕ್ಷಿಣ ದೇಶದಲ್ಲಿದ್ದ ತೀರ್ಥ ಕ್ಷೇತ್ರಗಳನ್ನೆಲ್ಲಾ ಸುತ್ತಿ ಕೊಂಡು ಸುಮಾರು ಒಂದುವರ್ಷದ ತರುವಾಯ ಹಿ೦ತಿರುಗಿ ಬಂದನು. ಇದಾದ ಕೆಲವುದಿನಗಳಲ್ಲಿ ಶ್ರೀಮತೀ ಚ೦ದ್ರಾದೇವಿಯು ಗರ್ಭಧಾರಣಮಾಡಿ ಒಬ್ಬ ಮಗನನ್ನು ಹೆತ್ತಳು (೧೮೨೬), ರಾಮೇಶ್ವರಯಾತ್ರೆ ಮಾಡಿ ಕೊಂಡು ಬಂದತರುವಾಯ ಹುಟ್ಟಿದನಾದ್ದರಿಂದ ಈ ಹುಡುಗನಿಗೆ ರಾಮೇಶ್ವರನೆಂದು ನಾಮಕರಣ ಮಾಡಿದರು.

ಇದಾದ ಏಳೆಂಟುವರ್ಷಗಳ ತರುವಾಯ ಖುದಿರಾಮನಿಗೆ

ಪುನಃ ತೀರ್ಥಯಾತ್ರೆ ಮಾಡಬೇಕೆಂಬ ಅಭಿಲಾಷೆಹುಟ್ಟಿತು. ರ್ಸ ೧೮೩೫ ನೆಯ ಇಸವಿಯ ಫಾಲ್ಗುಣ ಮಾಸದಲ್ಲಿ ಹೊರಟು ಕಾಶಿಗೆ ಹೋಗಿ ಅಲ್ಲಿ ವಿಶ್ವೇಶ್ವರನ ದರ್ಶನಮಾಡಿಕೊಂಡು ಚೈತ್ರ ಮಾಸದಲ್ಲಿ ಗಯಾ ಕ್ಷೇತ್ರವನ್ನು ಸೇರಿದನು. ಈ ತಿಂಗಳಲ್ಲಿ ಗಯಾಕ್ಷೇತ್ರದಲ್ಲಿ ಪಿಂಡಪ್ರದಾನ ಮಾಡಿದರೆ ಸಿಗಳಿಗೆ ಅಕ್ಷಯತೃಪ್ತಿಯಾಗುವುದೆಂದು ಹೇಳಿರುವುದರಿಂದ ಈ ತಿಂಗಳಿಗೆ ಸರಿಯಾಗಿ ಅಲ್ಲಿಗೆ ಒ೦ದನು. ಅಲ್ಲಿ ಸುಮಾರು ಒಂದು ತಿಂಗಳು ಇದು ಯಥಾವಿಧಿಯಾಗಿ ತೀರ್ಥಕ್ಷೇತ್ರ ಗಳಲ್ಲಿ ಮಾಡಬೇಕಾದ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು ಕೊನೆಗೆ ಗದಾಧರನ ಶ್ರೀ ಪಾದಪದ್ಮಗಳಲ್ಲಿ ಸಿಂಡಪ್ರದಾನಮಾಡಿ ದನು. ಈ ರೀತಿಯಲ್ಲಿ ಶಾಸ್ತ್ರೀಯವಾಗಿ ಪಿತೃಕರ್ಮಗಳನ್ನು ಮುಗಿಸಿದ ರಿ೦ದ ಅವನ ಹೃದಯದಲ್ಲಿ ಎಷ್ಟು ತೃಪ್ತಿಯೂ ಶಾ೦ತಿಯ ನೆಲಗೊಂಡವೋ ಅದನ್ನು ಹೇಳಬೇಕಾದ್ದಿಲ್ಲ. ಭಗ ವಂತನು ತನ್ನಂಥ ದೀನನಿಗೆ ಈ ಕಾರವನ್ನು ನಡೆಸಲು ಶಕ್ತಿ ಕೊಟ್ಟನಲ್ಲಾ ಎಂಬ ಆಲೋಚನೆಯಿಂದ ಅವನಲ್ಲಿ ಕೃತಜ್ಞ ತೆಯೂ ಭಕ್ತಿಯೂ ತುಂಬಿಹೋದುವು. ಹಗಲೆಲ್ಲಾ ಇದೇ ಯೋಚನೆ ಯಲ್ಲಿಯೇ ಇದ್ದು ರಾತ್ರಿ ಮಲಗಿಕೊಂಡಮೇಲೆ ನಿದ್ರೆ ಹತ್ತಿತೋ ಇಲ್ಲ ವೋ ಆಗ ಅವನಿಗೆ ಒಂದು ಸ್ವಷ್ಟವಾಯಿತು. ಅದರಲ್ಲಿ