ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಚರಿತ್ರೆ

ಮಗುವು ಬಹುವದಾ ಗಿದುದರಿಂದ ಆ ವೂರಿನ ಗಂಡಸರು

ಹೆಂಗಸರೆಲ್ಲರೂ ಮಗುವನ್ನು ಎತ್ತಿಕೊಂಡು ಆಡಿಸುತ್ತಾ ಆನಂದ ಪಡುತ್ತಿದರು. ಹೀಗೆನಾದುವರ್ಷಗಳು ಕಳೆದುವು. ಇನ್ನೂ ಈ ಚಿಕ್ಕವಯಸ್ಸಿನಲ್ಲಿಯೇ ಗದಾಧರನ ಬುದ್ದಿಯೂ ಜ್ಞಾಪಕಶಕ್ತಿಯೂ ಅದ್ಭುತವಾಗಿದುವು. ಇದನ್ನು ನೋಡುತ್ತಿದೆ ಖುದಿರಾಮನ ವಿಸ್ಮಯವನ್ನೂ ಆನಂದವನ್ನೂ ಹೇಳತೀರದು. ಅವನು ಚಂಚಲ ನಾದ ಈ ಬಾಲಕನನ್ನು ತೊಡೆಯಮೇಲೆ ಕೂರಿಸಿಕೊಂಡು ತನ್ನು ಪೂರ್ವ ಪುರುಷ ನಾನಾವಳಿ, ದೇವದೇಸಿಯರ ಸಣ್ಣ ಸಣ್ಣ ಸ್ತೋತ್ರಗಳು, ಅಥವಾ ರಾಮಾಯಣ ಮಹಾಭಾರತಗಳ ವಿಚಿತ್ರ ವಾದ ಕಥೆಗಳು ಇವನ್ನು ಹೇಳಿಕೊಡುತ್ತಿದನು. ಒಂದುಸಲ ಕೇಳಿದ ಮಾತ್ರದಿಂದಲೇ ಗದಾಧರಸಿಗೆ ಮುಕ್ಕಾಲು ಪಾಲೆಲ್ಲಾ ಬಾಯಿಗೆ ಬಂದುಬಿಡುತ್ತಿತ್ತು, ಎಷ್ಟೋ ದಿನ ಬಿಟ್ಟು ಕೇಳಿದರೂ ಅವುಗಳನ್ನು ಅದೇರೀತಿಯಲ್ಲಿ ನೀರು ಕುಡಿದಂತೆ ಹೇಳುತ್ತಿದನು. ಈ ಕಾಲ ದಲ್ಲಿಯೇ ಖುದಿರಾಮನಿಗೆ ಇನ್ನೊಂದು ವಿಶೇಷ ಸಂಗತಿಯ ಕಂಡುಬಂತು. ಹುಡುಗನಿಗೆ ಕೆಲವು ವಿಷಯಗಳಲ್ಲಿ ಪ್ರದೆ ಯೂ. ಆಸಕ್ತಿಯ ವಿಶೇಷವಾಗಿದ್ದು, ಮತ್ತೆ ಕೆಲವು ವಿಚಾರಗಳಲ್ಲಿ ಅನನು ಕೇವಲ ಉದಾಸೀನನಾಗಿರುತ್ತಿದನು. ನೂರಾರುನಲಿ ಹೇಳಿದರೂ ಅವುಗಳಲ್ಲಿ ಸ್ವಲ್ಪವೂ ಮನಸ್ಸೇ ಇರುತ್ತಿರಲಿಲ್ಲ. ಇಂಥ ವಿಚಾರಗಳಲ್ಲಿ ಗಣಿತಒಂದು. ಇದನ್ನು ಕಂಡು ಖುದಿರಾ ಮನು “ ಹುಡುಗನು ಇನ್ನೂ ಚಿಕ್ಕವನು, ಇನ್ನೂ ಕೇವಲ ಆಟಪಾಟದ ಮೇಲೆಯೇ ಗಮನ, ಈಗಾಗಲೇ ಅನನಿಗೆ ಇದೆ ನನ್ನೂ ಹೇಳಿ ಕೊಟ್ಟು ಏಕೆ ಗೋಳಾಡಿಸಬೇಕು' ಎಂದು ಯೋ ಚಿಸಿ ಐದನೆಯ ವರ್ಷದಲ್ಲಿ ಶಾಸ್ತ್ರೀಯವಾಗಿ ವಿದ್ಯಾರಂಭಮಾಡಿಸಿ, ಹತ್ತಿರದಲ್ಲಿದ ಪಾಠಶಾಲೆಗೆ ಕಳುಹಿಸಿದನು. ಅಲ್ಲಿ ಹುಡುಗ ರನ್ನು ಬೇಗ ಪರಿಚಯಮಾಡಿಕೊಂಡು ಗದಾಧರನು ಸಂತೋಷವಾಗಿ .ಓಡಾಡಿಕೊಂಡಿರುತ್ತಿದನಲ್ಲದೆ ಜಿ೯ಗೆ ಉಪಾಧ್ಯಾಯರಿಗೂ ಅಚ್ಚು ಮೆಚ್ಚಾದನು.