ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶ್ರೀ ರಾಮಕೃಷ್ಣ ಪರಮಹ೦ಸರ

24

ತ್ರಿದನು. ಹೀಗೆ ರಾಮಾಯಣ ಮಹಾಭಾರತ ಮುಂತಾದ ಪುಣ ಕಥೆಗಳನ್ನು ಕಲಿತಿದರಲ್ಲದೆ, ಅವಗಳನ್ನು ಯಾವರೀತಿಯಲ್ಲಿ ಹೇಳಿ ದರೆ ಕೇಳುವವರ ಮನಸ್ಸಿಗೆ ಹಿಡಿಯುವುದೆಂಬುದನ್ನು ಲಕ್ಷ್ಯವಿಟ್ಟು ತಿಳಿದುಕೊಳ್ಳುತ್ತಿದ್ದನು. ಅವನ ಅಪೂರ್ವವಾದ ಜ್ಞಾಪಕಶಕ್ತಿಯೂ ಸೂಕ್ಷ್ಮ ಬುದ್ದಿಯೂ ಇದರಲ್ಲಿ ಬಹಳ ಸಹಕಾರಿಗಳಾದುವು. ಪಾಠಶಾಲೆಗೆ ಹೋದಾಗಲೂ ಅನೇಕವೇಳೆ ಪಾಠಗಳಿಗೆ ಗಮನವನ್ನೆ; ಕೊಡುತ್ತಿರಲಿಲ್ಲ. ಮತ್ತೊಬ್ಬರು ಆಡಿದಹಾಗೆ ಆಡುವುದು, ಮಾಡಿದ ಹಾಗೆ ಮಾಡುವುದು, ಎಂಥವರನ್ನೆ ಬೇಕಾದರೂ ಅನುಕರಣ ಮಾಡಿ ಹಾಸ್ಯ ಮಾಡುವುದು ಇವುಗಳಲ್ಲಿ ಅದ್ಭುತ ಶಕ್ತಿ ಇತ್ತು. ಹೀಗೆ ತಾನು ಸದಾ ಸಂತೋಷಚಿತ್ತನಾಗಿರುತ್ತಿದನಲ್ಲದೆ ಮಿಕ್ಕ ಹುಡುಗರು ಇವನ ಜೊತೆಯಲ್ಲಿದ್ದಾಗ ಬೇರೊಂದು ಚಿಂತೆಯಿಲ್ಲದೆ ಸುಖವಾಗಿರು ತಿದರು.

ಹೀಗಿರಲು ಗದಾಧರನ ವಿಚಾರದಲ್ಲಿ ಅವನ ತಾಯಿತಂದೆಗಳಿಗೆ

ಚಿಂತೆಗೆ ಕಾರಣವಾಯಿತು. ಅವನು ಹುಟ್ರದಂದಿನಿಂದ ಇಂದಿನ ವರೆಗೆ ಎಂದೂ ಅಸ್ವಸ್ಥನಾಗಿದದೇ ಇಲ್ಲ. ಇಂಥ ಆರೋಗ್ಯ ಭಾಗ್ಯ ವಿದದ್ದರಿಂದ ಗಗನಚಾರಿಯಾದ ಪಕ್ಷಿಯಂತೆ ಸಂತೋಷವಾಗಿ ಆಡಿ ಕೊಂಡಿದನು. ದೇಹದ ಮೇಲೆ ಗಮನ ಹೋಗದಿರುವಿಕೆಯೇ ಸಂ ಪೂರ್ಣ ಆರೋಗ್ಯ ಸ್ಥಿತಿಯ ಲಕ್ಷಣವೆಂದು ಸಮರ್ಥರಾದ ವೈದ್ಯರು ಹೇಳಿದ್ದಾರೆ. ಗದಾಧರನಿಗೆ ಇಂಥ ಆರೋಗ್ಯ ಸ್ಥಿತಿ ಇತ್ತು. ಅದ ರಲ್ಲಿಯೂ ಅವನಿಗೆ ಸ್ವಾಭಾವಿಕವಾಗಿ ಬಂದ ಏಕಾಗ್ರಚಿತ್ರವು ಯಾವುದಾದರೂ ಒಂದು ಸದಾರ್ಥದಲ್ಲಿ ನಟ್ಟು ಹೋದರೆ, ಆಗ ದೇಹದ ಮೇಲಣ ಪ್ರಜ್ಞೆಯು ಸಂಪೂರ್ಣವಾಗಿ ಲೋಪ ಹೊ೦ದಿ ಕೇವಲ “ಭಾವಮಯ” ನಾಗುತ್ತಿದನ.. ಮಂದಮಾರುತನಿ೦ದ ಆಂದೋಳಿತವಾಗಿ ಆನಂದದಲ್ಲಿ ತಲೆತೂಗುತ್ತಿರುವ ಪೈರುಹಚ್ಚೆ ಗಳಿ೦ದ ಕೂಡಿದ, ಹಸುರಾದ, ವಿಸ್ತಾರವಾದ ಮೈದಾನ, ನದಿಯ ಅವಿರಳವಾದ ಅನಂತನಾದ ಪ್ರವಾಹ, ಪಕ್ಷಿಗಳ ಅವ್ಯಕ್ಕೆ ಮಧುರ