ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಚರಿತ್ರೆ

25

ವಾದ ಕಲಗಾನ, ಎಲ್ಲದರ ಮೇಲೂ ಇರುವ ಸುನೀಲವಾದ ಅ೦ತ ರಿಕ್ಷ, ಮತ್ತು ಅದರ ಮಧ್ಯದಲ್ಲಿ ಕ್ಷಣಕ್ಷಣಕ್ಕೂ ಬದಲಾಯಿಸು ತಿರುವ ಮೇಘರಾಶಿಯ ಮಾಯಾರಾಜ ಮುಂತಾದ ಸೃಷ್ಟಿ ನೌ೦ ದರ್ಯ ವಿಶೇಷಗಳು ಅವನನ್ನು ಭಾವರಾಜ್ಯದಲ್ಲಿ ಎಲ್ಲಿಗೋ ತೆಗೆದು ಕೊಂಡು ಹೋಗಿ ಬಿಡುತ್ತಿದವು. ಮುಂದೆ ಹೇಳುವ ವೃತ್ತಾಂತವೂ ಅವನ ಇಂಥ “ಭಾವಪ್ರವಣತೆ" ಯಿಂದಲೇ ನಡೆದದ್ದು, ಒಂದು ದಿನ ಮೈದಾನದಲ್ಲಿ ಓಡಾಡುತ್ತಿರುವಾಗ ಗದಾಧರನು, ರುದ್ರನಾದ ರೆಕ್ಕೆಗಳನ್ನು ಬಿಚ್ಚಿ ನಿರಾತಂಕವಾಗಿ ೬೦ತರಿಕ್ಷದಲ್ಲಿ ಹಾರಾಡುತ್ತಿದೆ ಕೆಲವು ಸುಂದರವಾದ ಒಲಾಕಾ ಪಕ್ಷಗಳನ್ನು ನೋಡಿ ಆನಂದದಲ್ಲಿ ತನ್ಮಯನಾಗಿ ಹೋದನು. ದೇಹದ ಮೇಲಣ ಪ್ರಜ್ಞೆಯೇ ತಪ್ಪಿ ಕೆಳಗೆ ಬೀಳಲು ಜೊತೆಯಲ್ಲಿ ಹುಡುಗರು ಅವನನ್ನು ಹೊತ್ತು ಕೊಂಡು ಹೋಗಿ ಅವನ ತಾಯಿತಂದೆಗಳಿಗೆ ಈ ವರ್ತಮಾನವನ್ನು ತಿಳಿಸಿದರು. ಖುದಿರಾಮನೂ ಚಂದ್ರಾದೇವಿಯೂ ಇದನ್ನು ಕೇಳಿ ವಿಧವಿಧವಾಗಿ ಚಿಂತಿಸಿ ಕೊನೆಗೆ ನರ್ಭ ಹೋಗಿರಬೇಕೆಂದು ಸಿಕ್ಕೆ ಯಮಾಡಿ ಅದಕ್ಕೆ ತಕ್ಕ ಔಷಧವನ್ನು ಕೊಡಿಸಿದ್ದಲ್ಲದೆ ಶಾ೦ತಿ ಜಸ ಮುಂತಾದನ್ನು ಮಾಡಿಸಿದರು. ಗದಾಧರನು ಮಾತ್ರ ಈ ಸಿಷಯ ವನ್ನು ಆಗಾಗ್ಗೆ ನೆನೆಸಿಕೊಂಡು ತನ್ನ ಮನಸ್ಸು ಆಗ ಒಂದು ವಿಚಿತ್ರ ವಾದ ಭಾವದಲ್ಲಿ ಲೀನವಾಗಿಹೋಗಿತ್ತೆಂದೂ ತಾನು ಹೊರಗಿನ ನದಾರ್ಥಗಳನ್ನು ನೋಡುತ್ತಿರಲಿಲ್ಲ ದಿದರೂ ಒಗೆ ಪ್ರಜ್ಞೆ ಇತ್ತೆಂದೂ ಒ೦ದು ವಿಧವಾದ ಅಪೂರ್ವವಾದ ಆನಂದಉಂಟಾಗಿತ್ತೆಂದೂ ಹೇಳುತ್ತಿದ್ದನು.

ಇಷ್ಟು ಹೊತ್ತಿಗೆ ಗದಾಧರನಿಗೆ ಆರು ವರ್ಷ ತುಂಬಿ ಏಳನೆಯ

ವರ್ಷ ನಡೆಯುತ್ತಿತ್ತು. ರಾಮಚಂದ್ರನು ಸೋದರಮಾವನಾದ ಖುದಿರಾಮನನ್ನು ದುರ್ಗೋತ್ಸವಕ್ಕೆ (ನವರಾತ್ರಿಯಪೂಜೆ) ಬರ ಬೇಕೆಂದು ಹೇಳಿ ಕಳುಹಿಸಿ ದನು. ಪ್ರತಿವರ್ಷವೂ ಖುದಿರಾನುನು ಅಲ್ಲಿಗೆ ಹೋಗಿ ಬರುವ ಸದತಿಯಿತ್ತು. ಈ ಸಾರಿ ಆತನಿಗೆ ದೇಹ