ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಶ್ರೀ ರಾಮಕೃಷ್ಣ ಪರಮಹ೦ಸರ

೨4

ದಲ್ಲಿ ಆರೋಗ್ಯ ವಿರಲಿಲ್ಲ. ಆದರೂ “ಶರೀರವೂ ದಿನದಿನಕ್ಕೆ ದುರ್ಬಲವಾಗುತ್ತಿದೆ. ನಾನು ಈ ವರ್ಷ ಹೋಗದೆಹೋದರೆ ಮತ್ತೆ ಹೋಗಿ ನೋಡುವೆನೆಂಬ ನಂಬುಗೆ ಏನು?" ಎಂದಂದು ಕೊಂಡು ರಾಮಕುಮಾರನು ಚಿಂತೆಯಲ್ಲಿ ಹೊರಟನು. ಅಲ್ಲಿ ಹೋದಕೂಡಲೆ ರೋಗವು ಹೆಚ್ಚಿ ದಶಮಿಯದಿನದ ಹೊತ್ತಿಗೆ ನಿಶ್ಯಕ್ತಿ ಯಾಗಿ ಮಾತಾಡುವುದು ಕಷ್ಟವಾಯಿತು. ಮಧ್ಯಾಹ್ನದ ಹೊತ್ತಿಗೆ ರಾಮಚಂದ್ರನು ಬೇಗಬೇಗ ಪೂಜೆಯನ್ನು ಮುಗಿಸಿಕೊಂಡು ಪ್ರತಿಮೆ ಯನ್ನು ವಿಸರ್ಜನೆಮಾಡಿ ಬಂದನು. ಅಷ್ಟು ಹೊತ್ತಿಗಾಗಲೆ ಖುದಿ ರಾಮನಿಗೆ ಅಂತ್ಯ ಕಾಲವು ಪ್ರಾಪ್ತವಾಗಿತ್ತು. ಬಹಳ ಹೊತ್ತಿ ನಿಂದಲೂ ಒಂದುಮಾತನ್ನೂ ಆಡದೆ ಜ್ಞಾನವಿಲ್ಲದೆ ಬಿದ್ದಿದ್ದ ಮಾವ ನನ್ನು ನೋಡಿ ರಾಮಚಂದ್ರನು ಕಣ್ಣೀರ ಸುರಿಸುತ್ತಾ “ ಮಾವ! ನೀನು ಯಾವಾಗಲೂ ಮಾತುಮಾತಿಗೂ ರಘುವೀರ ರಘುವೀರ ಎನ್ನುತ್ತಿದ್ದೆ, ಈಗಲೇಕೆ ಅವನನ್ನು ಸ್ಮರಿಸಿಕೊಳ್ಳುವುದಿಲ್ಲ?” ಎಂದನು. ರಘುವೀರನಮಾತು ಕಿವಿಗೆ ಬಿದ್ದ ಕೂಡಲೆ ಖುದಿರಾಮನಿಗೆ ಚೈತನ್ಯ ಬಂದು ಮೆಲ್ಲಗೆ ಕಂಪಿತವಾದ ಸ್ವರದಿಂದ “ ಯಾರು, ರಾಮಚಂದ್ರನೆ ?' ಪ್ರತಿಮೆಯ ವಿಸರ್ಜನೆ ಮಾಡಿಯಾಯಿತೆ ? ಸ್ವಲ್ಪ ಎಬ್ಬಿಸಿ ಕೂರಿಸು " ಎಂದನು. ಅದರಂತೆ ಉಪಾಯವಾಗಿ ಎಬ್ಬಿಸಿ ಕೂರಿ ಸಲು ಮೂರುಸಾರಿ ಗಂಭೀರ ಸ್ವರದಿಂದ ರಘುವೀರನ ನಾಮೋ ಚಾರಣೆಮಾಡಿ ಖುದಿರಾಮನು ದೇಹತ್ಯಾಗ ಮಾಡಿದನು. ಸಿಂಧು. ಬಿಂದು ಸಿಂಧುವಿನೊಡನೆ ಮಿಳಿತವಾf: ಹೋಯಿತು. ಮರುದಿನವೇ ಈ ವರ್ತಮಾನವು ಕಾಮಾರಪುಕರಕ್ಕೆ ತಲಸಿ ಆ ಆನಂದಧಾನ ವನ್ನು ನಿರಾನಂದದಿಂದ ತುಂಬಿತು.

ಚಂದ್ರಾದೇವಿಯ ದುಃಖಕ್ಕೆ ಪಾರವಿರಲಿಲ್ಲ. ಅವಳಭಾಗಕ್ಕೆ

ಪ್ರಪಂಚವೆಲ್ಲಾ ಶೂನ್ಯವಾಗಿ ಕಂಡಿತು. ಆದ್ದರಿಂದ ಶ್ರೀ ಶ್ರೀ ರಘು ವೀರನನ್ನು ಶರಣುಹೊಕ್ಕು ಸಂಸಾರದ ಚಿಂತೆಯನ್ನು ಬಿಟ್ಟು ಬಿಡ ಬೇಕೆಂದು ಮನಸ್ಸನ್ನು ಮಾಡಿದಳು. ಆದರೆ ಆಕೆಯು ಸಂಸಾರ