ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಚರಿತ್ರೆ

೨೬

ವನ್ನು ಬಿಡಬೇಕೆಂದರೂ ಸಂಸಾರವು ಆಕೆಯನ್ನು ಹೇಗೆ ಬಿದ್ದೀತು? ಗದಾಧರನಿಗೆ ಆಗ ಏಳುವರ್ಷ. ಈಚಿಗೆ ಹುಟ್ಟಿದ ಸರ್ವಮಂಗಳ ಎಂಬ ಹುಡುಗಿಗೆ ನಾಲ್ಕು ವರ್ಷ, ಇವರಯೋಚನೆ ಹೀಗೆ ತಪ್ಪಿತು ? ಆದರಿ೦ದ ಚ೦ದ್ರಾದೇವಿಯು ರಘುವೀರನ ಧ್ಯಾನದಲ್ಲಿಯೇ ಹೇಗೋ ಸಂಸಾರದ ಯೋಗಕ್ಷೇಮವನ್ನೆಲ್ಲಾ ನೋಡಿಕೊಳ್ಳು ತ್ತಾ ಕಾಲಕಳೆಯ ಬೇಕಾಯಿತು. ಗದಾಧರನು ಈಗಲೂ ಎಂದಿನಂತೆ ಸಂತೋಷಚಿತ್ತನಾಗಿದ್ದಂತೆ ಕಂಡುಬಂದರೂ ಕ್ರಮೇಣ ಚಿಂತಾ ಶೀಲನಾದನು. ಈ ಸಮಯದಲ್ಲಿಯೇ ಎಷ್ಟೋ ಜನರು ಆ ಗ್ರಾಮದ ಹತ್ತಿರаದ ಸ್ಮಶಾನ, ಮಾಣಿಕರಾಜನ ಮಾವಿನತೋಟ ಮುಂತಾದ ನಿರ್ಜನ ಪ್ರದೇಶದಲ್ಲಿ ಏನೋ ಯೋಚನೆಮಾಡುತ್ತಾ ಅವನು ತಿರುಗುತ್ತಿದ್ದದ್ದನ್ನು ನೋಡುತ್ತಿದ್ದರು. ತಾಯಿಯ ದುಃಖವನ್ನು ನೋಡಿ ಆಕೆಯಲ್ಲಿ ಪ್ರೀತಿಯು ಇನ್ನೂ ಹೆಚ್ಚಾಯಿತು. ಮನೆ ಕೆಲಸ ಗಳಲ್ಲಿಯೂ ಪೂಜೆ ಪುರಸ್ಕಾರಗಳಲ್ಲಿಯೂ ಆಕೆಗೆ ಸಹಾಯಕ ನಾಗಿದ್ದು ಯಾವಾಗಲೂ ಆಕೆಗೆ ಸಮಾಧಾನವಾಗುವಂತೆ ವರ್ತಿಸು ತ್ರಿವನು. ಯಾವುದರಲ್ಲಿ ಮೊದಲಿನಂತೆ ಹಟ ಮಾಡುತ್ತಿರ ಲಿಲ್ಲ. ಏಕೆಂದರೆ ತನಗೆ ಬೇಕಾದದನ್ನು ಚಂದ್ರಾದೇವಿಯು ಮಾಡಿ ಕೊಡಲಾರದೆಹೋದರೆ ಹಿಂದಿನ ಸ್ಥಿತಿಯನ್ನು ನೆನಸಿಕೊಂಡು ಅಳುತ್ತಿದ್ದಳು. ಇದನ್ನು ಕಂಡರೆ ಅವನಿಗೆ ಬಹಳವಾಗಿ ದುಃಖ ವಾಗುತ್ತಿತ್ತು, ಮುಖ್ಯವಾಗಿ ಪಿತೃವಿಯೋಗದಿಂದ ತಾಯಿಯನ್ನು ಎಂದಿಗೂ ಕೈಬಿಡಬಾರದೆಂದೂ ಸರ್ವವಿಧದಲ್ಲಿಯೂ ಅವಳ ಯೋಗ ಕ್ಷೇಮವನ್ನು ನೋಡಿಕೊಳ್ಳ ಬೇಕೆಂದೂ ಮನಸ್ಸಿನಲ್ಲಿ ದೃಢಸಂಕಲ್ಪ ವುಂಟಾಯಿತು.

ಮನಸ್ಸು ಸ್ವಲ್ಪ ಸಮಾಧಾನಕ್ಕೆ ಬಂದ ಮೇಲೆ ಮತ್ತೆ ಪಾಠ

ಶಾಲೆಗೆ ಹೋಗಲು ಮೊದಲು ಮಾಡಿದನು. ಆದರೆ ಪುರಾಣ ಪುಣ್ಯ ಕಥೆಗಳನ್ನೂ ಭಜನೆ, ಕೀರ್ತನೆಗಳನ್ನೂ ಕೇಳುವುದು ದೇವದೇವಿಯರ ವಿಗ್ರಹಗಳನ್ನೂ ಮಾಡುವುದು ಇವುಗಳಮೇಲೆ