ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಶ್ರೀ ರಾಮಕೃಷ್ಣ ಪರಮಹಂಸರ

30

ನಲ್ಲ” ಎಂದು ಹೇಳಿ ಹಟಹಿಡಿದನು. ಕೊನೆಗೆ ಅವರ ತಂದೆಗೆ ಸ್ನೇಹಿತನಾಗಿದ್ದ ಧರ್ಮದಾಸ ಲಾಹಾಬಾಬುವಿನ ಹೇಳಿಕೆಯಂತೆ ರಾಮಕುಮಾರನೇ ಸೋಲಬೇಕಾಯಿತು. ಯಥಾಕಾಲದಲ್ಲಿ ಉಪ ನಯನವು ನಡೆದುಹೋಯಿತು. ಧನಿಯು ಭಿಕ್ಷಾಮಾತೆಯಾಗಿ ಕೃತಕೃತ್ಯಳಾದಳು.

ಉಪನಯನವಾದ ಸ್ವಲ್ಪ ಕಾಲದಲ್ಲಿ ರ್ಯೆ ಗದಾಧರನ ಅಸಾ

ಧಾರಣ ಬುದ್ಧಿ ಶಕ್ತಿಯನ್ನು ತೋರಿಸುವ ಒಂದು ಘಟನೆಯ ನಡೆಯಿತು. ಮೇಲೆ ಹೇಳಿದ ಧರ್ಮ ದಾಸ ಬಾಬುವಿನ ಮನೆ ಯಲ್ಲಿ ಯಾವುದೋ ಒಂದು ವಿಶೇಷದಿವಸ ಅನೇಕ ಪಂಡಿತರು ಬಂದು ಸೇರಿದ್ದರು. ಶಾಸ್ತ್ರ ವಿಷಯವಾದ ಚರ್ಚೆಗೆ ಆರಂಭವಾಯಿತು. ಎಷ್ಟು ಚರ್ಚೆಮಾಡಿದರೂ ಯಾವವಿಧದಲ್ಲಿ ಯ ವ್ಯವಸ್ಥೆಯಾಗ ಲಿಲ್ಲ. ಗದಾಧರನಂತೆ ಅಲ್ಲಿ ಅನೇಕ ಹುಡುಗರು ಬಂದು ನೆರೆ ದಿದ್ದರು. ಅವರು ಆಟಪಾಟಗಳನ್ನು ಆಡುತ್ತಲೋ ಪಂಡಿತರನ್ನು ಅಣಕಿಸುತ್ತಲೋ ಇಲ್ಲ ವೇ ಪಿಳಪಿಳನೆ ಕಣ್ಣು ಬಿಟ್ಟು ಕೊಂಡೋ ಕುಳಿ `ತಿದ್ದರು. ಆದರೆ ಗದಾಧರನುಮಾತ್ರ ಶಾಸ್ತ್ರ ವಿಚಾರಕ್ಕೆ ಗಮನ ಕೊಟ್ಟು ಕೇಳುತ್ತಿದ್ದು ಎಲ್ಲವನ್ನೂ ಗ್ರಹಿಸಿ ಅವರ ವಾದಾನು ವಾದವು ಕೊನೆಮುಟ್ಟದಿರಲು, ತನಗೆ ತೋರಿದ ಒಂದು ತೀರ್ಮಾನ ವನ್ನು ಹೇಳಿದನು. ಇದು ಕೇವಲ ತೃಪ್ತಿಕರವಾಗಿದ್ದದ್ದರಿಂದ ಪಂಡಿತರೆಲ್ಲರೂ ಆಶ್ಚರ್ಯಪಟ್ಟು ಖಂಡಿತವಾಗಿಯೂ ಅವನು ದೇವಾಂಶಸಂಭೂತನಾಗಿರಬೇಕೆಂದು ಹೊಗಳಿ ಆಶೀರ್ವಾದಮಾಡಿ ಕಳುಹಿಸಿದರು. ಪಾಠಕರಿಗೆ ಇದು ಶುದ್ಧಾಂಗವಾಗಿ ಅಸಂಭವವೆಂದು ತೋರ ಬಹುದು. ಆದರೆ ಇಂಥ ಘಟನೆಗಳು ಇತರ ಅವತಾರ ಪುರು ಷರ ಜೀವನ ಚರಿತ್ರೆಗಳಲ್ಲಿಯೂ ಕಂಡುಬರುವುದು. ಏಸು ಕ್ರಿಸ್ತನು ಹನ್ನೆರಡುವರ್ಷದ ಹುಡುಗನಾಗಿದ್ದಾಗ ಜೆರುಸಲೇಮಿ ನಲ್ಲಿ ಇದರಂತೆಯೇ ಪಂಡಿತರು ಚರ್ಚೆ ಮಾಡುತ್ತಿದ್ದ ಯಾವುದೋ