ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಶ್ರೀ ರಾಮಕೃಷ್ಣ ಪರಮಹಂಸರ

೩೨

ಯಾವದೇವತೆಯ ವಿಚಾರವಾಗಿ ಧ್ಯಾನಮಾಡುತ್ತಿದ್ದನೋ ಆ' ದೇವತೆಯ ವಿಷಯಕವಾದ ಒಂದು ವಿಧವಾದ ದಿವ್ಯ ದರ್ಶನ ವಾಗುತ್ತಿತ್ತೆಂದು ಹೇಳುವನು. ಚ೦ದ್ರಾದೇವಿ ಮುಂತಾದವರು ಮೊದಲುಮೊದಲು ಇದನ್ನು ಕಂಡು ಹೆದರುತ್ತಿದ್ದರೂ, ಗದಾಧರನ ದೇಹಾರೋಗ್ಯವು ಯಾವರೀತಿಯಲ್ಲಿಯೂ ಕೆಡದಿದದನ್ನು ನೋಡಿ ಆಮೇಲೆ ಅಷ್ಟು ಲಕ್ಷ್ಯಮಾಡುತ್ತಿರಲಿಲ್ಲ. ಕ್ರಮೇಣ ಈ ವಿಧವಾದ ಭಾವಸಮಾಧಿಯ ಅವನಿಗೆ ಅಭಾಸವಾಗಿ ಇಷ್ಟ ಪಟ್ಟಾಗ ಬರು ವಂತಾಯಿತು.

ಇವನ ಧರ್ಮ ಪ್ರವೃತ್ತಿಯು ಅಭಿವೃದ್ಧಿಯಾದಂತೆ ವಿದ್ಯಾಭ್ಯಾಸ

ಮಾತ್ರ ವೃದಿ ಹೊಂದಲಿಲ್ಲ. ಪಂಡಿತ ಭಟ್ಟಾಚಾರ ಮುಂತಾದ ಬಿರುದುಗಳನ್ನು ಪಡೆಯುವುದು ಕೇವಲ ಧನದಾಸೆಯಿಂದಾಗಲಿ ಅಥವಾ ಐಹಿಕ ಭೋಗಸುಖಗಳನ್ನು ಪಡೆಯುವುದಕ್ಕಾಗಲೀ ಸಾಧನಗಳೆಂದು ತಿಳಿದು ಲೌಕಿಕ ವಿದ್ಯಾಭ್ಯಾಸ ವಿಚಾರದಲ್ಲಿ ಅವನು ಉದಾಸೀನನಾದನು. ಅದಕ್ಕೆ ಬದಲಾಗಿ ತನ್ನ ತಂದೆಯ ವೆ, ರಾಗ, ದೇವಭಕ್ತಿ, ಸತ, ಸದಾಚಾರ, ಧರ್ಮ ಪಾರಾಯಣತೆ ಇವೇ ಅವನಿಗೆ ಅಭ್ಯಾಸಕ್ಕೆ ಯೋಗ್ಯವಾಗಿ ಕಂಡುಬಂದುವು. ಪ್ರಪಂಚದಲ್ಲಿ ಎಲ್ಲರೂ ಅನಿತ್ಯವಾದ ಸಂಸಾರವನ್ನು ನಿತ್ಯವೆಂದು ಭ್ರಮೆಗೊಂಡು, ಸರ್ವದಾ ದುಃಖಸಾಗರದಲ್ಲಿ ಮುಳುಗಿರುವರೆಂದು ತಿಳಿದು ಅವನಮನಸ್ಸಿಗೆ ತುಂಬ ಕೊರತೆಯಾಯಿತು. ಪಾಠಕರು ಇದನ್ನು ಓದಿ “ ಹನ್ನೆರಡು ವರ್ಷದ ಹುಡುಗನಿಗೆ ಇಷ್ಟು ಸೂಕ್ಷ್ಯ ಬುದಿ ಯೂ, ವಿಚಾರಶಕ್ತಿಯೂ ಎಲ್ಲಿಯಾದರೂ ಇರಬಹುದೇ? ?” ಎಂದು ಆಕ್ಷೇಪಿಸಬಹುದು. ಸಾಧಾರಣವಾದ ಹುಡುಗರಿಗೆ ಎಂದಿಗೂ ಇರುವುದಿಲ್ಲ. ನಿಜ, ಆದರೆ ಗದಾಧರನು ಸಾಮಾನ್ಯ ಹುಡುಗನೇ ? ಅವನು ಅಸಾಧಾರಣ ಬುದ್ದಿ ಮತ್ತು ಮಾನಸಿಕ ಸಂಸ್ಕಾರಗಳೊಡನೆಯೇ ಜನ್ಮಗ್ರಹಣ ಮಾಡಿದನು. ವಯಸ್ಸು ಚಿಕ್ಕದಾದರೂ ಆ ಶಕ್ತಿ ಎಲ್ಲಿ ಹೋದೀತು ? ಅ೦ತೂ ಪಾಠಶಾಲೆಗೆ