ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶ್ರೀ ರಾಮಕೃಷ್ಣ ಪರಮಹ೦ಸ ರ

38

ಪೂಜೆಮಾಡಿದರೆ ಅಥವಾ ಪ್ರಸಾದಗ್ರಹಣಮಾಡಿದರೆ ದೋಷಭಾಗಿ ಗಳಾಗುವುದಿಲ್ಲ.” ಎಂದು ಉತ್ತರ ಬರೆದನು. ಇದರಿಂದ ರಾಣಿಗೆ ಬಹು ಆನಂದವಾಯಿತು. ದೇವಾಲಯವನ್ನೂ ಅದರ ಆಸ್ತಿಯನ್ನೂ ತನ್ನ ಕುಲಪುರೋಹಿತರಿಗೆ ದಾನಮಾಡಿ ದೇವಸ್ಥಾನದ ಕೆಲಸ ಕಾಠ್ಯಗಳ ಮೇಲ್ವಿಚಾರಣೆಯ ಅಧಿಕಾರವನ್ನು ಅವರಿಂದ ಪಡೆದಳು.

ಅರ್ಚಕರು ಸಿಕ್ಕುವುದು ಕಷ್ಟವಾಯಿತು. ಶೂದ್ರರ ಮನೆ

ಯಲ್ಲಿ ಪೌರೋಹಿತ್ಯ ನಡೆಸುತ್ತಿದ್ದ ಬ್ರಾಹ್ಮಣರನ್ನೂ ಒಂದು ವಿಧ ವಾದ ಶೂದ್ರರೆಂದು ಸದಾಚಾರ ನಿಷರಾದ ಬ್ರಾಹ್ಮಣರು ಎಣಿಸು ಆದ್ದರು. ರಾಮಕುಮಾರನ ವ್ಯವಸ್ಥೆಯು ಶಾಸ್ತ್ರವಿರುದ್ದವೆಂದು ಯಾರೂ ಹೇಳಲಿಲ್ಲ. ಆದರೆ ಅದು ಸಮಾಜದ ಅನೂಚೀನವಾದ ಪದ್ದತಿಗೆ ವಿರುದ್ದವೆಂದು ಎಲ್ಲರೂ ಹೇಳತೊಡಗಿದರು. ರಾಣಿಗೆ ಪುನಃ ದಿಕ್ಕು ತೋಚದಂತಾಯಿತು, ಆದರೆ ಕಾರ ದಕ್ಷಳಾದ ರಾಣಿಯು ಆಗಲೂ ನಿರುತ್ಸಾಹಿಯಾಗಲಿಲ್ಲ. ಅಲ್ಲಿ ಪ್ರತಿಷ್ಟೆ ಮಾಡ ಬೇಕಾಗಿದ್ದ ಎರಡು ದೇವರುಗಳಲ್ಲಿ, ಹಾಗೂ ಹೀಗೂ ' ರಾಧಾ ಗೋವಿಂದ ' ದೇವರಪೂಜೆಗೆ ಒಬ್ಬ ಅರ್ಚಕನು ಸಿಕ್ಕಿದನು. ಆದರೆ, ಕಾಳಿಕಾದೇವಿಯ ಪೂಜೆಗೆ ಯೋಗ್ಯನಾದ ಬ್ರಾಹ್ಮಣನು ದೊರೆಯ ಲಿಲ್ಲ. ಪ್ರತಿಷ್ಟೆ ಮಾಡಬೇಕೆಂದಿದ್ದ ದಿನವು ಸವಿಾಪಿಸುತ್ತಾ ಬಂತು. ಆಗ ರಾಣಿರಾಸಮಣಿಯು ಬಹಳ ನಮ್ಮ ಭಾವದಿಂದ ರಾಮಕುಮಾರ ನಿಗೆ ಹೀಗೆ ಕಾಗದ ಬರೆದಳು, “ ಜಗನ್ಮಾತೆಯ ಪ್ರತಿಷ್ಠಾ ಕಾರ್ಯ ದಲ್ಲಿ ನಾನು ಉದ್ಯುಕ್ತಳಾದದ್ದು ತಮ್ಮ ವ್ಯವಸ್ಥೆಯ ಬಲದಿಂದಲೇ. ಬರುವ ಸ್ನಾನಯಾತ್ರೆಯದಿನ ದೇವಿಯ ಪ್ರತಿಷ್ಠೆ ಮಾಡಬೇಕೆಂದು ಸಂಕಲ್ಪಿಸಿ ಸಮಸ್ತ ಸಲಕರಣೆಗಳನ್ನೂ ಸಿದ್ಧಪಡಿಸಿದ್ದೇನೆ. ರಾಧಾ ಗೋವಿಂದನ ಪೂಜೆಗೆ ಒಬ್ಬ ಆರ್ಚಕರು ಸಿಕ್ಕಿದ್ದಾರೆ. ಆದರೆ ಜಗ ನ್ಯಾತೆಯ ಪೂಜೆಗೆ ತಕ್ಕವರು ಯಾರೂ ಸಿಕ್ಕಿಲ್ಲ. ಆದ್ದರಿಂದ ತಾವೇ ಈ ವಿಷಯದಲ್ಲಿ ಏನಾದರೂ ಒಂದು ವ್ಯವಸ್ಥೆ ಮಾಡಿ ಈ ವಿಪತ್ತಿನಿಂದ ನನ್ನನ್ನು ಉದ್ದಾರ ಮಾಡಬೇಕು. ತಾವು ಪಂಡಿತರು ಮತ್ತು