ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಶ್ರೀ ರಾಮಕೃಷ್ಣ ಪರಮಹಂಸರ

44

ಸ್ಥಾನದಿಂದ ದೂರಹೋಗಿ ಗಂಗಾತೀರದಲ್ಲಿ ತಿರುಗಾಡುತ್ತಲೋ ಪಂಚವಟಿಯಲ್ಲಿ ಅಥವಾ ಅದರ ಹತ್ತಿರವಿದ್ದ ಕಾಡಿನಲ್ಲಿ ಕುಳಿತು ಕೊಂಡೋ ಇರುತ್ತಿದ್ದರು. ತನಗೋ ವಯಸ್ಸಾಗುತ್ತ ಬಂದಿತ್ತು. ತಾನು ಹೋದರೆ ಸಂಸಾರ ನಡೆಸುವವರಾರು ? ಹೇಗಾದರೂ ಗದಾಧರನು ಎರಡು ಕಾಸು ಸಂಪಾದಿಸುವಂತಾಗಿ ಸಂಸಾರ ನಡೆ ಸುವ ಹಾಗಾದರೆ ತಾನು ನಿಶ್ಚಿಂತೆ ಯಾಗಿರಬಹುದು ಎಂದು ಅಂದುಕೊಳ್ಳುತ್ತಿದ್ದನು. ಈಗ ಮಧುರಾನಾಥನ ಬಲವಂತದಿಂದ ತಮ್ಮನು ನೌಕರಿಗೆ ಸೇರಲು ರಾಮಕುಮಾರನಿಗೆ ಚಿಂತೆಯು ಕಡಿಮೆಯಾಗಿ, ಅವನಿಗೆ ಚ೦ಡೀಪಾಠ, ಕಾಳಿಕಾಪೂಜೆಯಕ್ರಮ ಮುಂತಾದುವುಗಳನ್ನು ಕಲಿಸುತ್ತ ಬಂದನು. ಪರಮಹಂಸರೂ ಇವೆಲ್ಲವುಗಳನ್ನೂ ಬಲುಬೇಗ ಕಲಿತರು; ಮತ್ತು ಶಕ್ತಿ ದೀಕ್ಷೆಯನ್ನು ತೆಗೆದುಕೊಳ್ಳದಿದ್ದರೆ ದೇವಿಯ ಪೂಜೆಯು ಪ್ರಶಸ್ತವಾಗುವುದಿಲ್ಲವೆಂದಂ ದುಕೊಂಡು ಕೇನೋರಾಮಚಟ್ಟೋಪಾಧ್ಯಾಯನೆಂಬ ಪ್ರಸಿದ್ದ ಶಕ್ತಿ ಸಾಧಕನಿಂದ ಶಕ್ತಿಮಂತ್ರವನ್ನು ಉಪದೇಶ ಮಾಡಿಸಿಕೊಂಡರು.

ಪರಮಹಂಸರು ಅಣ್ಣನಿಗೆ ಪೂಜೆಯ ಕೆಲಸದಲ್ಲಿ ಸಹಾಯ

ಕರಾಗಿ ಬಂದ ಕೆಲವು ದಿನಗಳ ಮೇಲೆ ಅದೇ ದೇವಸ್ಥಾನದಲ್ಲಿದ ರಾಧಾಗೋವಿಂದದೇವರ ಅರ್ಚಕನು ಗೋವಿಂದದೇವರನ್ನು ಎತ್ತಿ ಹಾಕಿ ಭಿನ್ನಮಾಡಿದ ತಪ್ಪಿಗಾಗಿ ಆ ಕೆಲಸದಿಂದ ನಿವೃತ್ತನಾದನು. ಸರಮಹಂಸರು ಆತನ ಸ್ಥಾನದಲ್ಲಿ ನಿಯಮಿಸಲ್ಪಟ್ಟರು.

ರಾಮಕುಮಾರನು ತನಗೆ ವಯಸ್ಸಾಗಿದ್ದದ್ದರಿಂದಲೋ ದೇಹ

ಸ್ಥಿತಿಯು ನೆಟ್ಟಗಿಲ್ಲದ್ದರಿಂದಲೋ ಅಥವಾ ತಮ್ಮನಿಗೆ ಅಭ್ಯಾಸ ವಾಗಲಿಯೆಂಬ ಅಭಿಪ್ರಾಯದಿಂದಲೋ ಆಗಾಗ ಪರಮಹಂಸರನ್ನು ದೇವೀಪೂಜೆಗೆ ನಿಯಮಿಸಿ ತಾನು ರಾಧಾಗೋವಿಂದನ ಪೂಜೆಗೆ ಹೋಗುತ್ತಿದ್ದನು. ದೇವೀ ಪೂಜೆಗೆ ಬೇಕಾದಷ್ಟು ದೇಹಶಕ್ತಿಯು ರಾಮಕುಮಾರನಿಗೆ ಇಲ್ಲವೆಂದು ತಿಳಿದು ಮಧುರನು ರಾಣಿಗೆಹೇಳಿ? ರಾಮಕುಮಾರನು ರಾಧಾಗೋವಿಂದನನ್ನೂ ಪರಮಹಂಸರು ಕಾಳೀ