ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಐದನೆಯ ಅಧ್ಯಾಯ

೧೫೧

ಸಾಧನಾ

ಶ್ರೀ ರಾಮಕೃಷ್ಣ ಪರಮಹಂಸರವರು ಕಲ್ಕತ್ತೆಗೆಬಂದು ದಕ್ಷಿ

ಹೇಶ್ವರದಲ್ಲಿ ನಿಂತಾಗಿನಿಂದ ಅವರ “ಸಾಧನಕಾಲ” ವಾರಂಭ ನಾಯಿತೆಂದು ಹೇಳಬಹುದು, ಅವರು ಕಾಳೀದೇವಸ್ಥಾನದಲ್ಲಿ ಅರ್ಚಕರ ಕೆಲಸವನ್ನು ವಹಿಸಿದಮೇಲೆ ಹನ್ನೆರಡುವರ್ಷಕಾಲ ವಿಧ ವಿಧವಾದ ಸಾಧನಗಳನ್ನು ಕೈಕೊಂಡು ಅವುಗಳಲ್ಲಿ ಸಿದ್ಧರಾದದ್ದನ್ನು ವಿವರಿಸುವುದಕ್ಕೆ ಮೊದಲು “ಸಾಧನ” ವೆಂದರೇನು ಎಂಬುದನ್ನು ಇಲ್ಲಿ ಸ್ವಲ್ಪ ವಿಚಾರಮಾಡುತ್ತೇವೆ.

“ಸರ್ವಂಖಲ್ವಿದಂಬ್ರಹ್ಮ-ಜಗತ್ತಿನಲ್ಲಿರುವ ಸ್ಫೂಲ, ಸೂಕ್ಷ,

ಚೇತನ, ಅಚೇತನ, ವಸ್ತುಗಳೆಲ್ಲವೂ ಒಂದೇ ಅದ್ವಯಬ್ರಹ್ಮ ವಸ್ತು ; ಕಲ್ಲು, ಮಣ್ಣು, ಮನುಷ್ಯ, ಪಶು, ಗಿಡ, ಮರ, ದೇವತೆ ಗಳು ಈ ಸಮಸ್ತವೂ ಬೇರೆಬೇರೆಯಾಗಿ ಕಂಡರೂ ಅವೆಲ್ಲವೂ ಒಂದೇ ವಸ್ತು--- ಎಂದು ಶಾಸ್ತ್ರವು ಹೇಳುತ್ತದೆ. ಅದೇಮಾತನ್ನೇ ಜ್ಞಾನಿ ಗಳು “ಅ೦ತಾ ರಾಮಮಯಂ, ಈ ಜಗನಂತಾ ರಾಮಮಯಂ' ಎಂದು ಹೇಳಿದ್ದಾರೆ. ಆದರೆ ಎಷ್ಟು ಪರೀಕ್ಷಿಸಿ ನೋಡಿದರೂ ಜಗತ್ತಿ ನಲ್ಲಿ ಬೇರೆಬೇರೆ ಪದಾರ್ಥಗಳು ಕಾಣುವುದೇ ಹೊರತು ನನಗೆ ದೇವರು ಎಲ್ಲಿಯೂ ಕಂಡುಬರುವುದಿಲ್ಲ. ಹೀಗಾಗಲು ನಮ್ಮಭ್ರಾಂ ತಿಯೇ ಕಾರಣ; ಭ್ರಾಂತಿಗೆ ಅಜ್ಞಾನವೇ ಕಾರಣ ; ಎಂದಿನವರೆಗೆ ಅಜ್ಞಾನವು ನಾಶವಾಗಿ ಜ್ಞಾನ ಹುಟ್ಟುವುದಿಲ್ಲವೋ ಅಂದಿನವರೆಗೂ ಜಗತ್ಸಂಬಂಧವಾದ ನಮ್ಮ ತಿಳಿವಳಿಕೆಯು ಭ್ರಾಂತಿಯುಕ್ತವಾದ ಟ್ವೆಂದು ನಮಗೆ ಗೊತ್ತಾಗುವುದಿಲ್ಲ. ಸ್ವಪ್ನದಲ್ಲಿ ಕಾಣುವುದೆಲ್ಲಾ ಆನ್ಲೈ ನಿಜವೆಂದೇ ತೋರುತ್ತಿರುತ್ತದೆ. ಅದು ಮಿಥೈಯೆಂದು