ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಚರಿತ್ರೆ

ಗೊತ್ತಾಗಬೇಕಾದರೆ ನಮಗೆ ಎಚ್ಚರವಾಗಿ ಜಾಗ್ರದವಸ್ಥೆಯೊಡನೆ ಅದನ್ನು ಹೋಲಿಸಿ ನೋಡಬೇಕು. ಅಲ್ಲಿಯವರೆಗೂ ಅದು ನಿಜ ನಾಗಿಯೇ ಕಾಣುತ್ತಿರುತ್ತದೆ. ಇಂಥ ಭ್ರಾಂತಿಜನಕವಾದ ಅಜ್ಞಾ ನವು ನಾಶವಾಗಿ ಈಶ್ವರ ಸಾಕ್ಷಾತ್ಕಾರವಾಗುವಂತೆ ನಾವು ಮಾಡ ಬೇಕಾದ ಪ್ರಯತ್ನಕ್ಕೆ 'ಸಾಧನ' ವೆಂದು ಹೆಸರು.

ಈ ಪ್ರಯತ್ನವನ್ನು ಮುಖ್ಯವಾಗಿ ಜ್ಞಾನಮಾರ್ಗ, ಭಕ್ತಿ

ಮಾರ್ಗವೆಂದು ಎರಡು ಭಾಗ ಮಾಡಬಹುದು, ಅವುಗಳಲ್ಲಿ ಜ್ಞಾನ ಮಾರ್ಗವು ಬಹುಕಠಿಣ, ಜನ್ಮಜನ್ಮಾಂತರದ ಕುಸ೦ಸಾರ ಗಳಿಂದ ತುಂಬಿದ ಮನಸ್ಸುಳ್ಳ ಮನುಷ್ಯ ಸಾಮಾನ್ಯನಿಗೆ ಈ ಮಾರ್ಗ ವನ್ನು ಅವಲಂಬನೆಮಾಡುವುದು ಅಸಾಧ್ಯ: “ಭಕ್ತಿ ಮಾರ್ಗವು ಅಷ್ಟು ಕ್ಷೇಶಕರವಾದದ್ದಲ್ಲ. ಪ್ರತಿಯೊಬ್ಬನೂ ಅವನವನ ಯೋಗ್ಯ ತಾನುಸಾರವಾಗಿ ಈ ಮಾರ್ಗವನ್ನು ಅವಲಂಬಿಸಬಹುದು. ಕಲಿ ಯುಗಕ್ಕೆ ಈ ಮಾರ್ಗವನ್ನೇ ದೇವರು ವಿಧಿಸಿದ್ದಾನೆಂದು ಪರನ ಹಂಸರು ಹೇಳುತ್ತಿದರು, ಈ ಮಾರ್ಗಗಳು ಬೇರೆ ಬೇರೆ ಎಂದು ಹೇಳಿ? ದರೂ ಕೊನೆಗೆ ಅವೆರಡೂ ಒಂದೇಸ್ಥಳದಲ್ಲಿ ಕೂಡುತ್ತವೆ. ಜ್ಞಾನ ಮಾರ್ಗಾವಲಂಬಿಯೂ ಭಕ್ತಿ ಮಾರ್ಗಾವಲಂಬಿಯೂ ಇಬ್ಬರೂ ಕೊನೆಗೆ ಈಶ್ವರ ಸಾಕ್ಷಾತ್ಕಾರವನ್ನು ಪಡೆಯುತ್ತಾರೆ.

ಲೋಕಹಿತಾರ್ಥವಾಗಿ ಈಶ್ವರನು ಮನುಷ್ಯ ಜನ್ಮವನ್ನು ತಾಳಿ

ವಾಗ ಆತನೂ ಸಾಧನೆ ಮಾಡಬೇಕಾಗುತ್ತದೆ. (ಅವತಾರ ಪುರುಷರ ಜೀವನ ಚರಿತ್ರೆಗಳಲ್ಲಿ ಸಾಧಕಭಾವಾಲೋಚನೆಯನ್ನು ವಿಸ್ತಾರವಾಗಿ ಮಾಡಿಲ್ಲ. ಆದರೂ ರಾಮಾಯಣ, ಭಾಗವತ ಮುಂತಾದ ಗ್ರಂಥಗಳನ್ನು ವಿಮರ್ಶೆಮಾಡಿ ಓದಿದವರಿಗೆ ರಾಮ, ಕೃಷ್ಣ ಮೊದಲಾದ ಅವತಾರ ಪುರುಷರೂ ಸಾಧನೆ ಮಾಡಿದ ರೆಂಬುದು ಗೊತ್ತಾಗದೇ ಇರಲಾರದು), ಜ್ಞಾನಸ್ವರೂಪನೂ, ಮಾ ಯಾತೀತನೂ, ಆದ ಪರಮಾತ್ಮನೂ ಕೂಡ ಅಜ್ಞಾನಮಾಯೆಗಳಿಂದ ಮುಕ್ತನಾಗಲು ಸಾಧನೆ ಮಾಡುತ್ತಾನೆಂಬುದು ವಿಚಿತ್ರವಾಗಿ ಕಾಣ