ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಚರಿತ್ರೆ

೬೬

ನೋಡಿ ಅವರು ಅವತಾರ ಪುರುಷರಿರಬೇಕೆಂದು ನಿರ್ಧರಿಸಿದಳು. ಈ ಕಾಲದಲ್ಲಿ ಒ೦ದುದಿನ ಪರಮಹಂಸರು ಪಂಚವಟಿಯ ಒಳಗೆ ಮಧುರಾನಾಥನೊಡನೆ ಕುಳಿತುಕೊಂಡು ಮಾತನಾಡುತ್ತ, ಮಾತಿಗೆ ಮಾತು ಬಂದು ಭೈರವಿಯು ತಮ್ಮ ವಿಚಾರವಾಗಿ ಹೇಳಿದ್ದನ್ನೆಲ್ಲ ಅನ ನಿಗೆ ತಿಳಿಸಿದರು. ಅದನ್ನು ಕೇಳಿ ಮಧುರನು “ ಆಕೆ ಏನು ಹೇಳಿದ ರೇನು? ಅವತಾರಗಳು ಹತ್ತಕ್ಕಿಂತ ಹೆಚ್ಚು ಉಂಟೇನು ? ಆದ್ದರಿಂದ ಆಕೆಯ ಮಾತು ಹೇಗೆ ಸತ್ಯವಾದೀತು? ಆದರೆ ನಿಮ್ಮ ಮೇಲೆ ಜಗ ದಂಬೆಯ ಕೃಪೆಯಿದೆ ಎಂಬುದೇನೋ ಸತ್ಯ.” ಎಂದು ಹೇಳಿದನು. ಇದಾದ ಸ್ವಲ್ಪ ಹೊತ್ತಿನಮೇಲೆ ಬ್ರಾಹ್ಮಣಿಯು ಅಲ್ಲಿಗೆ ಬಂದಳು. ಪರಮಹಂಸರು ಆಕೆಗೆ ಮಧುರಾನಾಥನ ಪರಿಚಯಮಾಡಿಕೊಟ್ಟು ಆಕೆಯನ್ನು ಕುರಿತು " ಅಮಾ, ನೀನು ನನ್ನ ಸಂಬಂಧವಾಗಿ ಹೇಳಿದ್ದನ್ನೆಲ್ಲ ಈತನಿಗೆ ಹೇಳಿದೆ. ಅದಕ್ಕೆ ಈತನು ಅವತಾರಗಳು ಹತ್ತೇ ಹೊರತು ಹೆಚ್ಚೆಲ್ಲಾದರೂ ಉಂಟೆ ಎಂದನು” ಎಂದು ಹೇಳಿ ದರು. ಆಗ ಬ್ರಾಹ್ಮಣಿಯು ಮಧುರಸಿಗೆ ಆಶೀರ್ವಾದವಾಡಿ “ ಯಾಕೆ ? ಭಾಗವತದಲ್ಲಿ ಇಪ್ಪತ್ತನಾಲ್ಕು ಮುಖ್ಯ ಮುಖ್ಯವಾದ ಅವತಾರಗಳಿವೆ ಎಂದೂ ಅಲ್ಲದೆ ಅಸಂಖ್ಯ ಅವತಾರಗಳಿವೆ ಎಂದೂ ಹೇಳಿಲ್ಲವೆ? ವೈಷ್ಣವಗ್ರಂಥಗಳಲ್ಲಿ ಚೈತನ್ಯದೇವನ ಪುನರಾಗಮನದ ಮಾತು ಸ್ಪಷ್ಟವಾಗಿದೆಯಲ್ಲ! " ಎಂದು ಹೇಳಲು ಮಧುರನು ಅದಕ್ಕೆ ಪ್ರತ್ಯುತ್ತರ ಹೇಳುವುದಕ್ಕೆ ತೋರದೆ ಸುಮ್ಮನಾದನು.

ಬ್ರಾಹ್ಮಣಿಯು ತ್ಯಾಸ್ತ್ರಜ್ಞಾನವನ್ನು ಪಡೆದ ಪಂಡಿತಳಷ್ಟೇ ಅಲ್ಲ.

ಶಾಸ್ತ್ರದಲ್ಲಿ ಹೇಳಿದ ಸಾಧನಗಳನ್ನು ಅನುಷ್ಠಾನಮಾಡಿ ತಿಳಿದು ಕೊಂಡಿದ್ದಳು. ಆದ್ದರಿಂದ ಪರಮಹಂಸರನ್ನು ತಂತ್ರ ಸಾಧನೆ ಮಾಡಲು ಪ್ರೇರೇಪಿಸಿ, ಗುರುರೂಪವಾಗಿ ನಿಂತು ಆತನಿಂದ ಎಲ್ಲ ವಿಧವಾದ (ಸುಮಾರು ಅರವತ್ತನಾಲ್ಕು) ತಂತ್ರ ಸಾಧನೆಗಳನ್ನೂ ಸಾಂಗೋಪಾಂಗವಾಗಿ ಮಾಡಿಸಿದಳು. ತಂತ್ರ ಸಾಧನೆಯು ನಮ್ಮ ದೇಶದಲ್ಲಿ ರೂಢಿಯಲ್ಲಿಲ್ಲದಿರುವುದೇ ಮುಂತಾದ ಕಾರಣಗಳಿಂದ