ಈ ಪುಟವನ್ನು ಪರಿಶೀಲಿಸಲಾಗಿದೆ
ಚರಿತ್ರೆ
೬೫
ನ್ನೆಲ್ಲಾ ದಾನಮಾಡೋಣವೆಂದು ನಿಶ್ಚಯಮಾಡಿದ್ದೇನೆ ; ಹಿಡಿ ! ?” ಎಂದು ಹೇಳಿದರು. ಅದಕ್ಕೆ ಸ್ವಾಮಿಗಳು “ ಮಹಾಶಯ, ಈಶ್ವರ ಲಾಭಮಾಡಿಕೊಳ್ಳಲು ಇವುಗಳಿಂದ ನನಗೇನಾದರೂ ಪ್ರಯೋಜನ ವಾಗುವುದೇ ? ” ಎಂದು ಕೇಳಿದರು. ಪರಮಹಂಸರು ಅದಕ್ಕೆ ಉತ್ತರವಾಗಿ “ ಧರ್ಮಪ್ರಚಾರ ಮುಂತಾದ ಕಾರ್ಯಗಳಿಗೆ ಅವು ಗಳಿಂದ ಸ್ವಲ್ಪ ಮಟ್ಟಿಗೆ ಸಹಾಯವಾಗುವುದಾದರೂ ಈಶ್ವರಲಾಭಕ್ಕೆ ಯಾವವಿಧವಾದ ಪ್ರಯೋಜನವೂ ಆಗುವುದಿಲ್ಲ.” ಎಂದರು. ಅದನ್ನು ಕೇಳಿ ಸ್ವಾಮಿಗಳು " ಹಾಗಾದರೆ ಅವುಗಳಿಂದ ನನಗೇನೂ ಕೆಲಸವಿಲ್ಲ ” ಎಂದುಬಿಟ್ಟರು.