ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಚರಿತ್ರೆ

೬೭

ಯನ್ನು ಗ್ರಹಣಮಾಡುತ್ತಿತ್ತಂತೆ. ಹೀಗೆ ಆತನು ಯಾವ ಪಿಗ್ರಹದ ಅವಲಂಬನೆಯಿಂದ ತನಗೆ ದಿವ್ಯ ದರ್ಶನವಾಗಿತ್ತೋ ಆ ರಾಮುವಿಗ್ರಹ ವನ್ನೇ ಸೇವೆಮಾಡುತ್ತ ಅನೇಕ ಪುಣ್ಯಕ್ಷೇತ್ರಗಳನ್ನು ಸುತ್ತಿಕೊಂಡು ದಕ್ಷಿಣೇಶ್ವರಕ್ಕೆ ಬಂದಿದ್ದನು.

ಪರಮಹಂಸರು ಜಟಾಧಾರಿಯನ್ನು ನೋಡಿದ ಕೂಡಲೆ,

ಅವನ ವೃತ್ತಾಂತವನ್ನೆಲ್ಲ ತಿಳಿದುಕೊಂಡರು. ಮನೆದೇವರಾದ ರಘು ವೀರನನ್ನು ಯಥಾವಿಧಿಯಾಗಿ ಪೂಜೆಮಾಡುವುದಕ್ಕಾಗಿ ಬಹುದಿನಗಳ ಕೆಳಗೆ ರಾಮಮಂತ್ರದ ಉಪದೇಶವನ್ನು ಹೊಂದಿದ್ದರೂ ಅವರಿಗೆ ರಾಮಚಂದ್ರನು ತಾವು ಸೇವಿಸಬೇಕಾದ ಪ್ರಭು ಎಂಬ ವಾಸ ಭಾವವಿತ್ತೇ ಹೊರತು ಬೇರೆ ಭಾವವಿರಲಿಲ್ಲ. ಈಗ ಜಟಾಧಾರಿಯ ಹತ್ತಿರವಿದ್ದ ವಿಗ್ರಹವನ್ನು ನೋಡಿ ಅದೇ ರಾಮಚಂದ್ರನಲ್ಲಿ ವಾತ್ಸಲ್ಯ ಭಾವವು ಉತ್ಪನ್ನವಾಯಿತು. ಮಂತ್ರೋಪದೇಶ ಮೂಲಕ ಜಟಾ ಧಾರಿಯು ಹೇಳಿದ ಮಾರ್ಗವನ್ನು ಹಿಡಿದು ಪರಮಹಂಸರು ಬಾಲ ರಾಮಚಂದ್ರನ ದರ್ಶನಲಾಭವನ್ನು ಪಡೆದರು. ಆ ದಿವ್ಯಮೂರ್ತಿಯ ಧ್ಯಾನದಲ್ಲಿಯೇ ಮಗ್ನರಾಗಿರಲು ಅತ್ಯಲ್ಪ ಕಾಲದಲ್ಲಿ ಕೆಳಗೆ ಹೇಳುವ ಅಭಿಪ್ರಾಯದ ಪ್ರತ್ಯಕ್ಷಾನುಭವವುಂಟಾಯಿತು:-

ಜೋರಾಂ ದಶ ರಥಕಿ ಬೇಟಾ,

ಓಹಿ ರಾ೦ ಘ ಟಕ್ ಘಟಕ್ ಮೇಲೇಟಾ !

ಓಹಿರಾ೦ ಜಗತ್ ಪಶೇರಾ,

`ಓಹಿರಾ೦ ಸಬೈ ನೇಯಾ ರಾ ||

ಅರ್ಥ:- ಶ್ರೀರಾಮಚಂದ್ರನು ದಶರಥ ಪುತ್ರನು ಮಾತ್ರವೇ !

ಅಲ್ಲ. ಪ್ರತಿಶರೀರವನ್ನೂ ಆಶ್ರಯಮಾಡಿ ಜೀವಭಾವದಿಂದ ಪ್ರಕಾಶಿ ಸುತ್ತಿ ದ್ದಾನೆ. ಹೀಗೆ ಪ್ರಾಣಿಗಳ ಆಂತರದಲ್ಲಿ ಸೇರಿ ಜಗದ್ರೂಪ ವಾಗಿ ಇದರೂ ಜಗತ್ತಿನ ಎಲ್ಲಾ ಪದಾರ್ಥಗಳಿಂದಲೂ ಬೆರೆಯಾ ಗಿದ್ದಾನೆ. ಯಾವಾಗಲೂ ಮಾಯಾರಹಿತ ನಿರ್ಗುಣ ಸ್ವರೂಪ | ದಲ್ಲಿ ಇರುತ್ತಾನೆ. )