ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ವಿಜ್ಞಾಪನೆ.




ಶ್ರೀ ಶ್ರೀರಾಮಕೃಷ್ಣ ಪರಮಹಂಸರವರು, “ಬ್ರಹ್ಮಸಾಕ್ಷಾತ್ಕಾರ ವಾಗದೆ ವೇದಾಂತ ವಿಚಾರವನ್ನು ಗ್ರಂಥಗಳಲ್ಲಿ ಓದಿಕೊಂಡು ಪರಮಾತ್ಮನ ಸ್ವರೂಪವನ್ನು ಕುರಿತು ವಿಚಾರಮಾಡುವುದು, ಭೂಪಠ ದಲ್ಲಿ ಕಾಶೀಪಟ್ಟಣವನ್ನು ನೋಡಿ ಅದನ್ನು ವರ್ಣನೆ ಮಾಡುವಹಾಗೆ?" ಎಂದು ಹೇಳುತ್ತಿದ್ದರು, ನಾವು ಅವರ ಜೀವನ ಚರಿತ್ರೆಯನ್ನು ಬರೆಯು ವುದಕ್ಕೆ ಹೊರಟಿರುವುದೂ ಸ್ವಲ್ಪ ಮಟ್ಟಿಗೆ ಹಾಗೆಯೇ ಆಗಿದೆ. ನನಗೆ ಆ ಮಹಾನುಭಾವರ ಸಾನ್ನಿಧ್ಯದಲ್ಲಿಯೇ ಇದ್ದುಕೊಂಡು ಅವರ ಸಂಗತಿಗಳನ್ನು ಪ್ರತ್ಯಕ್ಷವಾಗಿ ತಿಳಿದುಕೊಳ್ಳುವ ಪುಣ್ಯವು ಲಭಿಸ ಲಿಲ್ಲ. ಅವರು ಹೇಳಿರುವ ವಿಚಾರಗಳನ್ನು ಪೂರ್ಣವಾಗಿ ಗ್ರಹಿಸುವ ಶಕ್ತಿಯಂತೂ ಇಲ್ಲವೇ ಇಲ್ಲ. ಆದರೂ ಬೆಂಗಳೂರಿನ ಶ್ರೀರಾಮ ಕೃಷ್ಣ ಮಠದಲ್ಲಿರುವ ಶ್ರೀನಿರ್ಮಲಾನಂದ ಸ್ವಾಮಿಗಳ ಆಜ್ಞೆಯಂತೆ ಈ ಕೆಲಸವನ್ನು ಕೈಗೊಂಡು ಪರಮಹಂಸರ ಶಿಷ್ಯಮಂಡಲಿಗೆ ಸೇರಿದ ಶಾರದಾನಂದ ಸ್ವಾಮಿಗಳಿಂದ ಬಂಗಾಳಿ ಭಾಷೆಯಲ್ಲಿ ರಚಿತವಾದ “ಶ್ರೀರಾಮಕೃಷ್ಣ ಲೀಲಾಪ್ರಸಂಗ” ಎಂಬ ಗ್ರಂಥದ ಆಧಾರದ ಮೇಲೆ ಈ ಸಣ್ಣ ಪುಸ್ತಕವನ್ನು ಬರೆದಿದ್ದೇವೆ. “ಶ್ರೀರಾಮಕೃಷ್ಣ ಲೀಲಾಪ್ರಸಂಗವು" ಬಹು ದೊಡ್ಡ ಗ್ರಂಥ; ಇದುವರಿಗೆ ಪ್ರಕಟವಾ ಗಿರುವ ಆ ಗ್ರಂಥವು ಸುಮಾರು ೧,೫೦೦ ಪುಟಗಳವರೆಗೆ ಬಂದಿದೆ. ಆದರೂ ಅದು ಅಷ್ಟಕ್ಕೇ ಮುಗಿಯುವಂತಿಲ್ಲ. ಇದೇ ಬೆಂಗಳೂರು ಮಠದಲ್ಲಿಯೇ ಇದ್ದು ಈಗ ಮದರಾಸಿಗೆ ದಯಮಾಡಿರುವ ವಿದೇಹಾ ನಂದ ಸ್ವಾಮಿಗಳು ಅದಷ್ಟನ್ನೂ ನಮಗೆ ಓದಿತಿಳಿಸಿದರು. ಆದ್ದ ರಿಂದ ಈ ಗ್ರಂಥರಚನೆಗೆ ಅವರಿಂದಾದ ಸಹಾಯವು ಇಷ್ಟೆಂದು