ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೬ ಶ್ರೀ ರಾಮಕೃಷ್ಣ ಪರಮಹ೦ಸ ರ ಕೊಂಡು ತನ್ನನ್ನು ಎಂದಿಗೂ ಮರೆಯಲಾರರೆಂದೂ ತನ್ನನ್ನು ಎಂ ದಿಗೂ ನಿರಾಕರಿಸಲಾರರೆಂದೂ ಸಮಯವನ್ನು ನಿರೀಕ್ಷಿಸುತ್ತಿರ ಬಹುದೆಂದೂ ಸರಿಯಾದ ಅವಕಾಶ ಸಿಕ್ಕಿದಾಗ ಬಂದು ಕರೆದು ಕೊಂಡು ಹೋಗಬಹುದೆಂದೂ ಸಮಾಧಾನ ಹೇಳಿಕೊಂಡಳು. ಊರಿನಲ್ಲಿ ಜನರು ತನ್ನ ಗಂಡನು ಮೈ ಮೇಲಿನ ಬಟ್ಟೆಯನ್ನು ಕೂಡ ಬಿಟ್ಟು, “ ಹರಿಹರಿ” ಎಂದು ಅಲೆಯುತ್ತಾನೆಂದು ಆಗಾಗ ಅಂದು ಕೊಳ್ಳುವುದನ್ನೂ, ಹೆಂಗಸರು “ ಹುಚ್ಚನ ಹೆಂಡತಿ ” ಎಂದು ಅಂದು ಕೊಳ್ಳು ವುದನ್ನೂ ಕೇಳಿ “ ರಾಗಾದರೆ ಕಾಮಾರಪುಕುರದಲ್ಲಿದ್ದ ಹಾಗೆ ಈಗ ಇಲ್ಲವೆ? ಜನಗಳು ಹೇಳುವ ಹಾಗೆ ಅವರಿಗೆ ಈ ಅವಸ್ಥೆಯಾ ಗಿರುವುದೇ? ಅದೃಷ್ಟವಶಾತ್‌ ಹಾಗಾಗಿದ್ದರೆ ನಾನು ಇಲ್ಲಿರುವುದು ಯುಕ್ತವಲ್ಲ. ಅವರ ಹತ್ತಿರವೇ ಇದ್ದು ಸೇವೆಮಾಡುವುದು ಉಚಿತ " ಎಂದು ನಿರ್ಧರಮಾಡಿಕೊಂಡು ಈ ಮಾತನ್ನು ತನ್ನ ತಂದೆಗೆ ತಿಳಿ ಸಿದಳು. ಆತನು ಅದಕ್ಕೆ ಸಮ್ಮತಿಸಿ ಮಗಳು ಅಸ್ವಸ್ಥಳಾಗಿದ್ದರೂ ದಕ್ಷಿಣೇಶ್ವರಕ್ಕೆ ಕರೆದುಕೊಂಡು ಹೋದನು. (1872.). ಶಾರದಾದೇವಿಯು ರೋಗಪೀಡಿತಳಾಗಿರುವಾಗಲೇ ಹೊರಟು ಬಂದದ್ದನ್ನು ನೋಡಿ ಪರಮಹಂಸರಿಗೆ ಬಹುವ್ಯಥೆಯಾಯಿತು. ಆದ್ದರಿಂದ ತಮ್ಮ ಕೊಠಡಿಯಲ್ಲಿಯೇ ಬೇರೆಯೊಂದು ಹಾಸಿಗೆಯಲ್ಲಿ ಆಕೆಯು ಮಲಗುವಂತೆ ಏರ್ಪಾಡುಮಾಡಿ ಮೂರುನಾಲ್ಕು ದಿನ ಹಗಲು ರಾತ್ರಿ ಔಷಧಿ ಪಥ್ಯಗಳನ್ನು ಕೊಟ್ಟು ತಾವೇ ಉಪಚಾರ ಮಾಡಿದರು. ಜ್ವರವು ವಾಸಿಯಾಗಲು ಆಕೆಯು ಅಲ್ಲಿಯೇ ಇರ ಬೇಕೆಂದು ನಿಶ್ಚಯವಾಯಿತು. ಆಕೆಯ ತಂದೆಯ ಸಂತೋಷ ದಿಂದ ಮಗಳನ್ನು ಬಿಟ್ಟು ತಮ್ಮ ಊರಿಗೆ ಹಿಂತಿರುಗಿ ಹೊರಟು ಹೋದನು. ಇಲ್ಲಿಂದ ಮುಂದಕ್ಕೆ ಶಾರದಾದೇವಿಗೆ ದಕ್ಷಿಣೇಶ್ವರವೇ ಮನೆ ಯಾಯಿತು. ಆಕೆಗೂ ಪರಮಹಂಸರಿಗೂ ಇದ್ದ ಪರಸ್ಪರಸಂಬಂಧ, ಕಾಮಗಂಧ ಹೀನವಾದ