ಪುಟ:ಶ್ರೀರಾಮಕೃಷ್ಣ ಪರಮಹಂಸರ ಚರಿತೆ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹತ್ತನೆಯ ಅಧ್ಯಾಯ. ಸಾಧಕಥಾವಸಮಾಲೋಚನೆ. ಸ್ವಾಮಿವಿವೇಕಾನಂದರೇ ಮುಂತಾದ ಶಿಷ್ಯರು ಪರಮಹಂಸರ ಸೇವೆಗೆ ಬಂದುನಿಂತಾಗ ಅವರ ಸಾಧನೆಗಳೆಲ್ಲವೂ ಮುಗಿದುಹೋಗಿ ದುವು, ತೋತಾಪುರಿ, ಭೈರವಿಬ್ರಾಹ್ಮಣಿ ಮುಂತಾದ ಗುರುಸಾಧಕ ರೆಲ್ಲರೂ ದಕ್ಷಿಣೇಶ್ವರನನ್ನು ಬಿಟ್ಟು ಹೊರಟುಹೋಗಿದ್ದರು. ಮಧು ರಾನಾಥ, ರಾಣಿ ರಾಸಮಣಿ, ರಾಮೇಶ್ವರ ಮುಂತಾದವರೆಲ್ಲರೂ ಸ್ವರ್ಗಸ್ಥರಾಗಿದ್ದರು. ಈ ಸಾಧನೆಗಳನ್ನೆಲ್ಲ ಕಣ್ಣಾರೆ ನೋಡಿ, ಅವು ಗಳಲ್ಲಿ ಆಸಕ್ತಿಯಿಟ್ಟು ತತ್ವಾವಧಾನ ಮಾಡಿನೋಡಿದ ಜನರು ಆಗ ಯಾರೂ ಇರಲೇ ಇಲ್ಲವೆಂದು ಹೇಳಬಹುದು, ಆದ್ದರಿಂದ ಪರಮಹಂಸರು ತಮ್ಮ ಸಾಧನಗಳನ್ನು ಕುರಿತು ಪ್ರಸ್ತಾಪಿಸಿ ಶಿಷ್ಯ ಮಂಡತಿಗೆ ವಿಸ್ತಾರವಾಗಿ ಅವೆಲ್ಲವನ್ನೂ ತಿಳಿಯಪಡಿಸದಿದ್ದರೆ ಅವರು ಮಾಡಿದ ಸಾಧನಗಳು ಜನಗಳಿಗೆ ತಿಳಿಯಬರುತ್ತಲೇ ಇರಲಿಲ್ಲ ವೆಂದು ತೋರುತ್ತದೆ. ಈ ಭಾಗವೆಲ್ಲ ಬಹುಮಟ್ಟಿಗೆ ಅವರು ಸ್ವಂತ ವಾಗಿ ಆಡಿದಮಾತುಗಳಿ೦ದಲೇ ಗ್ರಥಿತವಾಗಿದೆ. ಅಲ್ಲಲ್ಲಿ ಅವರ ಮಾತುಗಳನ್ನೆ ವಾಕ್ಯವೇಷನದಲ್ಲಿ ಬರೆದಿರುವುದನ್ನು ನೋಡಿ ಪಾಠ ಕರು ಆಗಲೇ ಈ ವಿಷಯವನ್ನು ಸ್ವಲ್ಪ ಮಟ್ಟಿಗಾದರೂ ಊಹಿಸಿರ ಬಹುದು. ನಮ್ಮ ಕಡೆಯಲ್ಲಿ ಅನೇಕರು ಈ ಸಾಧನೆಗಳ ಹೆಸರನ್ನೆ ? ಕೇಳಿಲ್ಲ, ಪ್ರಾಣಾಯಾಮ ಮಾಡುವುದು ಬಟ್ಟೆಯನ್ನು ನುಂಗಿ ತೆಗೆದು ಅಥವಾ ದೇಹದೊಳಕ್ಕೆ ನೀರನ್ನು ಸೆಳೆದುಕೊಂಡು ಶುದ್ದಿ ಮಾಡಿಕೊಳ್ಳುವುದು ಮುಂತಾದುವುಗಳನ್ನು ಕೆಲವರು ನೋಡಿರ