ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಂಕಟನಾಥ ವೆಂಕಟಗಿರಿರಾಜ ವಂಶಾವಳಿ (ರೀಚರ್ಲವಂಶ) ಯಾಚಮನಾಯಕ + ಪೋಚಮಾಂಬಾ ಸಿ೦ಗಪ್ರಭು ಸಿಂಗಪ್ರಭು ವೇನಮನಾಯಕ ರೇಚಮಹೀಪತಿ ಅನಂತ ಅಥವಾ ಮಾಧವ= ಅನ್ನ ಪೊತ + ಅನ್ನಮಾಂಬಾ, ಮಾದನಾಯಕ ನಾಗನಾಯಕ (ಕವರೀರಾಯ ) (ರಾಹುತರಾಯ) ದೇವಗಿರಿ ಇತರರು (ಹೆಸರು ಗೊತ್ತಿಲ್ಲ) ವೇದಗಿರೀಶ್ವರ ಸಿಂಗಭೂಪತಿ (ರಸಾರ್ಣವಸುಧಾಕರವನ್ನು ಬರೆದವನು) - - - 1 ಅನ್ನ ಪೋತ ಕುಮಾರದಾಚಯ್ಯ ವಲ್ಲಭರಾಯ ಮೂವರು ಮಕ್ಕಳು (ಹೆಸರು ಗೊತ್ತಿಲ್ಲ) ಮೇಲೆ ಹೇಳಿದ ವಂಶಾವಳಿಯಲ್ಲಿ ರಸಾರ್ಣವಸುಧಾಕರಕಾರನ ಅಜ್ಜನ ಹೆಸರು ಸಿಂಗಪ್ರಭುವೆಂದು ಹೇಳಿದ ಈ ವಂಶಾವಳಿಯನ್ನೂ, ರಾಜಮಹೇಂದ್ರ ವರದ ರಡ್ಡಿರಾಜರ ವಂಶಾವಳಿಯನ್ನೂ ಹೋಲಿಸಿ ನೋಡಿದರೆ ಸಿಂಗಪಭುವು ಶ್ರೀವೇದಾಂತಾಚಾರರ ಸಮಕಾಲೀನನೆಂದು ಸ್ಪಷ್ಟವಾಗುತ್ತದೆ. ಕೊಂಡವೀಡು (ಕೃಷ್ಣಾ ಜಿಲ್ಲಾ) ಮತ್ತು ರಾಜಮಹೇಂದ್ರದಲ್ಲಾಳಿದ ರಡ್ಡಿ ಅರಸುಗಳನ್ನು ವೀರೇಶಲಿಂಗಂಪಂತಲು ಯವರ ಗ್ರಂಥದಿಂದ ಸಂಗ್ರಹಿಸಬಹು ದಾಗಿದೆ. ೧. ಪೋಲಯ ನೇಮರಡ್ಡಿ :-ಕ್ರಿ. ಶ ೧೩೨೮-೧೫೩೯ರ ವರೆಗೆ ಇವನು ಓರಂಗಲ್ಲಿನ ಎರಡನೇ ಪ್ರತಾಪರುದ್ರನ ಸೇನಾಪತಿಯಾಗಿದ್ದು ೧೩೨೮ರಲ್ಲಿ ಸ್ವತಂತ್ರನಾಗಿ (ಪೆನುಕೊಂಡ' ಎಂಬುದನ್ನು ಸ್ವಾಧೀನಪಡಿಸಿಕೊಂಡು ಆಳಿದನು. ೨. ಅನವೇಮರಡ್ಡಿ:-ಇವನು ಪೋಲಯ ವೇಮರಡ್ಡಿಯ ಮಗನು. ಕ್ರಿ. ಶ ೧೩೪೦-೧೩೬೯ರ ವರೆಗೆ ಇವನ ರಾಜಧಾನಿಯು ನೆಲ್ಲೂರುಬಳಿಯಣ ಅಡ್ಡಂಕಿ, ಇವನು ಪಾತಾಳಗಂಗೆಯ ಹತ್ತಿರ (38)