ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೇವವಿಮಲಗಣಿ, ದ'ಮೋದ ವಿಶ್ರ ೩೭೧ -- - -- - ಮೊಡಶ ಕಲಾಪರಿಪೂರ್ಣನಾದ ಚಂದ್ರನ ಕಾಂತಿಯಿಂದ ಮುಕ್ತರಾದ (ಮನಸೊತ) ಹೆಂಗಳೆಯರು ವಿಕಸಿತವಾದ ಶ್ವೇತಕಮಲಗಳ ಭ್ರಾಂತಿಯಿಂದ ನೀಲೋತ್ಪಲಂಗಳನ್ನು ಮುಡಿದುಕೊಳ್ಳುತ್ತಾರೆ ಅಥವಾ ಕರ್ಣಾಭರಣವನ್ನು ಮಾಡಿ ಕೊಳ್ಳುತ್ತಾರೆ. ಪುಷ್ಪವನ್ನು ವಿಕ್ರಯಿಸುವ ನಲ್ಲೆಯರು ಹೂಗಳೆಂಬ ಭಾ೦ತಿಯಿಂದ ಕೇಳಿ ಗೃಹದಲ್ಲಿ ಭ್ರಂಗಗಳನ್ನು ಹಿಡಿದುಕೊಳ್ಳುತ್ತಾರೆ, ಕಿರಾತಪ್ರಿಯರು ಮುಕ್ಕಾ ಫಲ ಭಾ೦ತಿಯಿಂದ ಗುಲಗಂಜಿಯನ್ನು ಆರಿಸಿಕೊಳ್ಳುತ್ತಾರೆ. ಆದಕಾರಣ ಪೂರ್ಣ ಚಂದ್ರನು ಯಾರಿಗೆತಾನೇ ಭ್ರಾಂತಿಯನ್ನುಂಟುಮಾಡುವುದಿಲ್ಲ! ಪಂಚಾಪಿ ದೇವತರವೊSಧರಿತುಃ ಸ್ಪದಾನ - ಲೀಲಾಯಿರ್ವಸುಮತೀ ಕುಸುಮಧ್ಯಚೇನ ಸಂಭೂಯ ಕಾಂಚನಲೋಚ ಯ ಚೂಲಿಕಾಯಾಂ ಕಿ, ಮಂತ್ರ ಯಂತ್ಸವವೃತ್ರಹಣಂ ವಿಜೇತುಂ || ೧೦-೫೫, ಸರ್ವಾ ತಿಶಯಸೌಂದರಮೂರ್ತಿಮತ್ತಾಗಿ ಭೂಮನ್ಮಥನಂತಿರುವ ಕೊಡಗೈ ಯುಳ್ಳ ರಾಜನಿಂದ ತಿರಸ್ಕೃತವಾದ ಕಲ್ಲ ಪಾರಿಜಾತಾದಿ ದೇವತರುಗಳುಮೇರುಪರ್ವ ತದಲ್ಲಿ ಸೇರಿ ಈ ರಾಜನನ್ನು ಜಯಿಸಬೇಕೆಂದು ಯೋಚಿಸುತ್ತಿವೆಯೋ ಎಂಬಂತೆ ಕಾಣುತ್ತದೆ. ದಾ ಮ ದ ರ ಮಿ ಶ್ರ * ದೀರ್ಘದೋಷಕುಲೋದ್ಧೂತ ದಾಮೋದರ ಇತಿಶ್ರುತಃ. ಛಂದನಾ೦ಲಕ್ಷಣಂತೇನ ಸೋದಾಹರಣಮುಚ್ಯತೆ || ಎಂಬ ಗ್ರಂಥಸ್ಥ ಶ್ಲೋಕದಿಂದಲೂ, “ ಇತಿ ಮೈಥಿಲೀಯ ದೀರ್ಘದೋಷ ಕುಲೋದ್ಧೂತ ದಾಮೋದರಮಿಶ್ರ ಒರಚಿತೇ ” ಎಂದು ಗ್ರಂಥಾಂತ್ಯದಲ್ಲಿ ಹೇಳ ಲ್ಪಟ್ಟಿರುವುದರಿಂದ ಇವನು ಮೈಥಿಲೀಯ ಬ್ರಾಹ್ಮಣನೆಂದೂ, ದೀರ್ಘದೋಷ ಕುಲ ಸಂಜಾತನೆಂದೂ ತಿಳಿಯಬಹುದು, ಕಾಲ:- ಪ್ರಾಕೃತಪಿಂಗಳ ಸೂತ್ರಕ್ಕೆ ವ್ಯಾಖ್ಯಾನಕಾರನಾದ ಲಕ್ಷ್ಮಿನಾಥನು ಕ್ರಿ. ಶ. ೧೬೫೭ರಲ್ಲಿ ಬರೆದಿರುವ ವ್ಯಾಖ್ಯಾನದಲ್ಲಿ ಈತನನ್ನು ಉದಾಹರಿಸಿಕೊಂಡಿರುವ - - - -

  • ಹನುಮನಾಟಕವನ್ನು (ಯಾವುದೋ ಸಂಗ್ರಹೀತ) ಮಹಾನಾಟಕವೆಂದು ಹೇಳುವ

ದಾಮೋದರಮಶ್ರನು ಇವನಲ್ಲ.