ಸಾಹಿತ್ಯ, ತಿಳಿಯಬೇಕಾದ ವಿಷಯ. ಇದನ್ನು ಕೇಳಿದವರು ಸಾಹಿತ್ಯವು ಆವೇಶ ದಿಂದ ಬರುವುದಾದರೆ ನಾವು ಇನ್ನು ಏನು ಮಾಡುವುದಕ್ಕಾಗುತ್ತದೆ ಆವೇ ಶಬರುವುದಕ್ಕೆ ಕಾಯಬೇಕು ಎನ್ನ ಬಹುದು, ಆವೇಶಬರುವುದಕ್ಕೆ ಕಾಯಬೇಕೆನ್ನು ವುದು ಸರಿಯೆ : ಆದರೆ ಆ ಆವೇಶ ನಮಗೆ ಬರುವುದಕ್ಕೆ ತಕ್ಕವರಾಗುವುದು ನಾವು ಮಾಡಬೇಕಾದ ಕೆಲಸ. ಈ ಆವೇಶವು ಅದನ್ನು ಪಡೆಯುವುದಕ್ಕೆ ಯೋಗ್ಯರಾದವರಿಗೆ ಮಾತ್ರ ಬರುತ್ತದೆ. ನಮ್ಮ ಕನ್ನಡದ ಆನಂದರಾಮಾಯಣದ ಕವಿಯು ಸ್ನಾನಮಾಡಿ ದೇವಾ ಲಯಕ್ಕೆ ಬಂದು ಕೊಡುತ್ತಿದ್ದನಂತೆ ; ಒಡನೆ ಸರಸ್ವತಿ ಆವಾಹನವಾ ದಂತೆ ಅವನ ಬಾಯಿಂದ ಪದ್ಯಗಳು ಬರುವುವ, ಆ ಸ್ಥಾನವನ್ನು ವುದು ಕೇವಲ ಬಾಹ್ಯವಾದ ಒಂದು ಚಿಹ್ನೆ ಮಾತ್ರ ; ಅದರೊಂದಿಗೆ ಕವಿಯ ಮನಸ್ಕ ಪರಿಶುದ್ಧವಾಗಿ ಆವೇಶಕ್ಕೆ ತಕ್ಕುದಾಗುತ್ತಿತ್ತು, ಇದನ್ನೇ ನಮ್ಮ ಕವಿವರರಾದ ಠಾಕೂರರ, “ ನೀನು ಗಾನದಿಂದ ತುಂಬುವ ದಕ್ಕೆ ತಕ್ಕ ಒದುರ ಕೊಳಲೆಂಬಂತೆ ನನ್ನ ಜೀವನವನ್ನು ನಾನು ಸಮವಾ iNಯ ಸರಳವಾಗಿಯೂ ಮಾಡುವಂತೆ ನನಗೆ ಅನುಗ್ರಹಮಾಡು.” ಎಂದು ಹೇಳಿರುವುದು, ಕವಿಯು ಕವನವೆಲ್ಲದರ ಮಲನಾದ ಭಗವಂತನ ಕೇವಲ ಒಂದು ಕೊಳಲು ಮಾತ್ರ ; ಗಾನಕ್ಕೆ ಅವನು ಅಧಿಕಾರಿಯಲ್ಲ ; ಆದರೂ ಆ ಗಾನಕ್ಕೆ ತಕ್ಕ ಕೊಳಲಾಗಲು ಅವನು ಪ್ರಯತ್ನ ಮಾಡಬೇಕು. - ಇದು ಗ್ರಂಥಕರ್ತನನ್ನು ಮಾತ್ರವೇ ಸೇರಿದ್ದಲ್ಲ. ಉತ್ತಮ ಕಾವ್ಯವನ್ನು ರಚಿಸುವುದಕ್ಕೆ ತಕ್ಕವನಾಗುವುದು ಕವಿ ಯು ಒಬ್ಬನ ಕೆಲಸ ಮಾತ್ರವೂ ಅಲ್ಲ; ಅವನ ಜನಾಂಗದಲ್ಲಿ ಅದನ್ನು ಸಾಧ್ಯವನ್ನಾಗಿ ಮಾಡುವ ಬುದ್ದಿಯ ಚಟುವಟಿಕೆ ಇರಬೇಕು, ಕವಿಯ ಆವೇಶವು ಅವನ ಬುದ್ದಿ ರಾಗಗಳನ್ನ ನುಸರಿಸುವುದು ; ಅವನ ಬುದ್ದಿ ರಾಗ ಗಳು ಜನಾಂಗದ ಬುದ್ದಿರಾಗಗಳಿಗೆ ಅನುಗುಣವಾಗಿ ಇರುವುವು, ಜನಾಂ ಗವು ತನ್ನ ಕಲ್ಪನಾಶಕ್ತಿಯನ್ನು ವೃದ್ಧಿಗೊಳಿಸಿಕೊಂಡಹಾಗೆಲ್ಲಾ ಅದು ಜನಗಳಲ್ಲಿ ಕವನಕ್ಕೂ ಉತ್ತಮ ಸಾಹಿತ್ಯವನ್ನು ಬರೆಯುವುದಕ್ಕೂ ದಾರಿಯಾಗುತ್ತದೆ. ಒಂದು ಪುಸ್ತಕವನ್ನು ಬರೆಯುವುದು ಒಂದು ಅವಸ್ಥೆಯಲ್ಲಿ ಒಬ್ಬ ಮನುಷ್ಯನಿಗೆ ಆವಶ್ಯಕ ಕರ್ಮವಾಗುವುದು. ಆದರೆ
ಪುಟ:ಸಾಹಿತ್ಯ1924.djvu/೨೦
ಗೋಚರ