ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚದಗುಚ್ಛ. ಕಾಳಿಚರಣನು ಬುಡುಬುಡುಕಿಯವನ ವೇಷದಿಂದ ತಾನು ಸಾಧಿಸಬೇಕೆಂದಿದ್ದ ಉದ್ಯಮವನ್ನು ಚೆನ್ನಾಗಿ ಸಾಧಿಸಿದನು. ಭುಜಂಗನು ಸಂಪೂರ್ಣವಾಗಿ ಕಾಚರಣನ ಬಲೆಯಲ್ಲಿ ಬಿದ್ದನು, ಅಷ್ಟೇ ಏಕೆ ? ಅವನು ಈ ಬುಡುಬುಡುಕಿಯವನ ಮಾತಿನಂತೆ ನಡೆಯಲು ಈಷದಪಿ ಹಿಂಜರಿಯುತ್ತಿರಲಿಲ್ಲ. ಇವನು ವಿಷಪಾನವನ್ನು ಮಾಡೆಂದು ಹೇಳಿದ್ದರೆ ಅದನ್ನು ಕೂಡ ಮಾಡಲು ಸಿದ್ಧನಾಗಿದ್ದನು. ಈ ಸಂದರ್ಭವನ್ನರಿತು, ಕಾಳೀಚರಣನು ತನ್ನ ವಾಕ್ಚಾತುರ್ಯದಿಂದ ಅವನನ್ನು ಕೇವಲ ಮುಗ್ಧನಾಗುವಂತೆ ಮಾಡಿದನಲ್ಲದೆ ಅವನ ಪರಮಗುರುವಾದ ಪುರಂದರನು ಕೇವಲ ನಟನೆಯ ಮನುಷ್ಯ ನೆಂದೂ, ಅವನು ಕೇವಲ ತನ್ನ ಸ್ವಾರ್ಥಕ್ಕಾಗಿ ಆ ರೀತಿ ನಂಬಿಕೆಯನ್ನು ಹುಟ್ಟಿಸಿ, ಕಾರ್ಯವು ಕೈಗೂಡಿದ ಮೇಲೆ ಎಲ್ಲರಿಗೂ ಮೋಸಮೂಡುವನೆಂದೂ, ಏನಾದರೂ ಮಾಡಿ ಅವನಧೀನದಿಂದ ಆ ದಿವಸವೇ ಹುಡುಗಿಯರನ್ನು ಹೊರತರಬೇಳೆ :ದ, ಹೇಳಿ ದನು. ಅವನ ಮಾತಿನಲ್ಲಿ ಭುಜಂಗನಿಗೆ ನಂಬುಗೆಯು ಉಂಟಾಗಿದ್ದುದರಿಂದ ಅವನು ಹೇಳಿದುದು ನಿಜವೆಂದು ನಂ: ಆ ಮನೆ ಬಂದ ಹೆಂಗಸನ್ನು ಮೇಲೆ ಬೆಂದ್ರ ಮನೆಗೆ ಕರೆದುಕೊಂಡು ಹೋಗಬೇಕೆಂದು ಆಲೋಚಿಸಲಾರಂಭಿಸಿದನು. ಕಾಳಿಚರ ಣನು ಆ ದಿನ ಸಾಯಂಕಾಲ ತಾನು ಬಂದು ಕೈಯಲ್ಲಾದ ಸಹಾಯವನ್ನು ಮಾಡು ವುದಾಗಿ ಹೇಳಿ ಭುಜಂಗನ ಅಪ್ಪಣೆಯನ್ನು ಪಡೆದು ಅಲ್ಲಿಂದ ಹೊರಟುಹೋದನು. ಭುಜಂಗನು,-ಕಾಳೀಕರಣನ ಹೇಳಿಕೆಗೆ ಮರುಳಾಗಿದ್ದವನು; ನರಸನು ಆಡಿದ ಮಾತಿ ನಪ್ರಕಾರ ತನ್ನ ಸಹಾಯಕ್ಕಾಗಿ ಸಾಯಂಕಾಲ ಬರಬಹುದೆಂದೂ, ಆ ದಿವಸ ಪುರಂದರ ನನ್ನೂ ಹುಡುಗಿಯರನ್ನೂ ಬಹು ಎಚ್ಚರಿಕೆಯಿಂದ ನೋಡಿಕೊಳ್ಳಬೇಕೆಂದೂ ನಿಶ್ಚಯಿಸಿ ಕೊಂಡನು, ಹಾಗೆಯೆ, ಆ ಮನೆಯಲ್ಲಿ ಪುರಂದರನನ್ನು ಬೆನ್ನು ಬಿಡದಂತೆ ಕಾಯ್ದನ್ನು ಅಷ್ಟರಲ್ಲಿ ಕಾಳೀಕರಣನು ಆ ಮನೆಯ ಯಜಮಾನನನ್ನು ಪತ್ತೆಮಾಡಿಸಿ ಕರೆಯಿಸಿ ಕೊಂಡು ಅವನಿಂದಾಗಬೇಕಾದ ಕೆಲಸಗಳೆಲ್ಲವನ್ನೂ ತಿಳಿಯಿಸಿ, ಅವನೊಂದಿಗೆ ಒಬ್ಬ ಮನುಷ್ಯನನ್ನು ಕಳುಹಿಸಿಕೊಟ್ಟನು. ಅವರಿಬ್ಬರೂ ಪುರಂದರಾದಿಗಳಿದ್ದ ಮನೆಗೆ ಹೋದರು. ಮನೆಯಲ್ಲಿದ್ದ ಪುರಂದರ ಮತ್ತು ಭುಜಂಗ, ಇವರಿರ್ವರ ಅವರನ್ನು ಉಚಿತ ವಾಗಿ ಸತ್ಕರಿಸಿ ( ಬಂದ ಕಾರ್ಯವೇನು ? ” ಎಂದು ಕೇಳಿದರು, ಮನೆಯ ಯಜಮಾ ನನು « ಸ್ವಾಮಿ ! ಈ ಮನೆಯ ಅಂತರ್ಗೃಹದಲ್ಲಿ ನಮಗೆ ಸ್ವಲ್ಪ ಕೆಲಸವಿದೆ ಒಂದು ಕಾಲುಗಂಟೇಮಟ್ಟಿಗೆ ನಮ್ಮನ್ನು ಬಿಡಬೇಕು !” ಎಂದಂದನು,