ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಲಾಸಿನಿ JANAhfvhhhhhhhh /\r\ nh A AANNAhr\ \\r\n\n\ /\/\ /\ /\/\r\\/\hr\\nhhhhhhh/\hy V V V Y Y Y Y Y Y. ಪಿಶಾಚನಾಗಿಯಾದರೂ ನಿನ್ನ ಮೇಲೆ ಸೇಡನ್ನು ತೀರಿಸಿಕೊಳ್ಳುವೆನು !!! ನೀನು ನನ್ನನ್ನು ಹಿಡಿಯಲೇ ಬೇಕೆಂದೂ, ನಾನು ನಿನ್ನ ಕೈಗೆ ಸಿಕ್ಕಲೇಬಾರದೆಂದೂ, ಪರಸ್ಪರ ಬದ್ಧ ಕಂಕಣರಾಗಿರುವೆವು. ನಿನ್ನ ಪ್ರಯತ್ನವು ವಿಫಲವಲ್ಲ ! ನನಗೆ ದೈವಸಹಾಯವಿಲ್ಲ !! ನಿನ್ನ ಕೈಯಲ್ಲಿ ಬೀಳುವುದಕ್ಕಿಂತಲ, ಯಮಕಿಂಕರರ ಕರಗತವಾಗುವುದು ನನಗೆ ಅಧಿಕ ಸುಖಕರವಾಗಿ ಕಂಡಿತು. ಹಾಗೆಯೇ ನಿಶ್ಚಯಿಸಿದೆನು ! ಸ್ವಚ್ಛಾಮರಣವನ್ನೇ ಹೊಂದುವನು. ಆವ ಮನೆಯಲ್ಲಿ ನನಗೆ ಬಲಭುಜದಂತಿದ್ದ ಮನುವು ನಿನ್ನೊಂದಿಗೆ ಹೋರಾಡಿ ಗತಪ್ರಾಣನಾದನೋ, ಎಲ್ಲಿ ನೀನು ಬಂದಿಯಾಗಿದ್ದು ಅತಿ ಸಾಹಸದಿಂದ ತಪ್ಪಿಸಿ ಕೊಂಡೆಯೋ, ಅಲ್ಲಿ ಈ ನಿನ್ನ ನಿರ್ಭಾಗ್ಯ ಸಹಾಧ್ಯಾಯಿಯ ಮೃತ ಕಳೇ ಬರವನ್ನು ನೋಡು ! ಇತಿ ನಿರ್ಭಾಗ್ಯ ಪುರಂದರ, ಕಾಗದವನ್ನು ನೋಡಿ ಕಾಳೀಕರಣನು ಸ್ವಲ್ಪಕಾಲ ಆಲೋಚಿಸಿದನು. ಹೀಗೆ ಮಾತನಾಡದೆ ಕಾಳೀಚರಣನು ಕುಳಿತಿದ್ದುದನ್ನು ಇಸ್ಪೆಕ್ಟರು ಕಂಡು, « ಇದೇನು ??? ಎಂದು ಪ್ರಶ್ನಿಸಿದರು. ಕಾಳೀಚರಣರು, ನನ್ನ ಯೋಚನೆಯು ಸರಿಯಾದ ಮಾರ್ಗ ದಲ್ಲಿ ಓಡುತ್ತಿರುವುದಾದರೆ, ಇದೊಂದು ಅತಿಶಯ ಗಂಭೀರ ಚಾತುರ್ಯ !?? ಎಂದಂದು ರಾಯರೆ ! ಅಗತ್ಯವಾದ ಕೆಲಸವಾಗಿ ಕಾಣುತ್ತದೆ ! ಸ್ವಲ್ಪ ಕಾಲದಲ್ಲಿಯೆ ಬಂದು ತಮ್ಮನ್ನು ನೋಡುವೆನು.' ಎಂದು ಹೇಳಿ ಅಲ್ಲಿಂದ ಹೊರಟೇಬಿಟ್ಟನು. ಕಾಳೀಚರಣನು ಹೋದುದನ್ನು ನೋಡಿ ಇಸ್ಪೆಕ್ಟರು, “ ಇದೆಂತಹ ಕೆಲಸ! ಯಾವಾಗನೋಡಿದರೂ, ಎಂತಹ ಕಾರ್ಯ ಬಿದ್ದರೂ, ಏಕಾಂಗಿಯಾಗಿಯೇ ನುಗ್ಗುತ್ತಿರು ವನಲ್ಲ ! ಇದೆಂತಹ ಧೈರ್ಯ !! ಈತನಿಗೆ ಪ್ರಾಣಭಯವೆಂಬುದು ಲೇಶಮಾತ್ರ ವಾದರೂ ಇಲ್ಲ ! ಆ ಕಾಗದದಲ್ಲಿದ್ದ ಸಂಗತಿಯನ್ನು ಕೂಡ ಹೇಳದೆ ಹೊರಟು ಹೋದನಲ್ಲಾ ! ಆಗಲಿ !!?' ಎಂದಂದುಕೊಂಡು, ಕಾಳೀಕರಣನು ಹೋದ ಮಾರ್ಗ ವನ್ನೇ ಅನುಸರಿಸಿ ಹೋದರು. ಇಬ್ಬರೂ ನಿರ್ದಿಷ್ಟ ಸ್ಥಾನವನ್ನು ಸೇರಿದರು. ದೃಶ್ಯವು ಹೃದ್ವೇದಕವಾಗಿತ್ತು. ಕಾಳೀಚರಣನು ಚಕಿತನಾದನು. ರ್ಇ ಸ್ಪೆಕ್ಟರ ಸ್ಥಿತಿಯಾದರೋ ಕೇವಲ ಸ್ತಂಭೀಭೂತ? ಸ್ವಲ್ಪ ಕಾಲ ಹಾಗೆಯೇ ನಿಂತಿದ್ದರು.” ಅಹಹ ! ಎಂತಹ ಭಯಂಕರ ಪರಿಣಾಮ !!