ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂವಾಲಕ _b

  • # 1 # * *
  • * *
  • * * * *
  • * *
  • * *
  • *
  • * *
  • * * *
  • *

• • • • • • • • • • • • • ಭಗವತೀದಾಸ :-ಮಂತ್ರಿವರ್ಯನೆ ! ಅದಕ್ಕೇತಕ್ಕೆ ಚಿಂತಿಸಬೇಕು ? ಬಹಳ ಕಾಲದಿಂದಲೂ, ನಮ್ಮ ರಜಪೂತಯೋಧಗಣವು ರಣಸಮುದ್ರದಲ್ಲಿ ಧುಮಿಕಿ ಯವನರ ಎದೆಯ ರುಧಿರವನ್ನು ಹೀರಿ ತಮ್ಮ ದಾಹವನ್ನು ತೀರಿಸಿಕೊಳ್ಳಲು ಬಹಳ ಆತುರಪಡು ತಿರುವುದು. ಆ ನೀಚನಾದ ಮುಜಫರನ ಯವನ ಸೈನ್ಯವು ನಮ್ಮ ದುರ್ಗವನ್ನು ಸಮೀಪಿಸಿದುದೇ ಆದರೆ ನಮ್ಮ ಸುಶಿಕ್ಷಿತವಾದ ಸೇನೆಯು ಅದನ್ನು ನಿರ್ಮೂಲಮಾಡಿ ಮುಜಫರನ ಹೆಸರನ್ನು ಪ್ರಪಂಚದಿಂದಲೇ ಅಳಿಸಿ ಬಿಡುವುದರಲ್ಲಿ ಲೇಶಮಾತ್ರವೂ ಸಂದೆ ಗವಿರಲಾರದು. ಹೀಗಿರುವಲ್ಲಿ ನಾವು ಆ ತುಷ್ಟನಾದ ಯವನನಿಗೆ ಏತಕ್ಕಾಗಿ ಭಯತ ಡಬೇಕು? ಅ ನು ನಮ್ಮ ಸೈನ್ಯದ ಬಳಿ ಬರಲಿ ! ಆಗ ರಾಜ ಪುತ್ರ ಕನೈಯನ್ನು ಹಿ' ಜಾತಿಯವನು ಅಪೇಕ್ಷಿಸುವುದರ ಸುಗಮವೇನಾಗುವುದೆಂಬುದನ್ನು ಅವನಿಗೆ ಬೆನ ತಿಳುಹಿಸಿ ಬುದ್ದಿ ಗಲಿಸುವೆನು. ವಿಕ್ರಮಸಿಂಹ :-ಮಹಾರಾಜ! ಸಾವಧಾನದಿಂದ ಟಿಸಿ, ಕೊಪ್ರೊ. ದ್ರೇಕದಿಂದ ಸಿಕ್ಕಿದಹಾಗೆಲ್ಲ ಪ್ರವರ್ತಿಸುವುದು ಶ್ರೇಯಸ್ಕರವಾದುದಲ್ಲ. ಚೆನ್ನಾಗಿ ಪರ್ಯಾಲೋಚಿಸಿ ನೋಡಿ-ನಮ್ಮ ಸೇನೆಯಿರುವುದು ? ಅವರ ಬಲವೆರುವುದು ? ಅವರ ಅಗಾಧವಾದ ಸೇನೆಯನ್ನು ಇದಿಸಿದರೆ ನಮ್ಮ ಗತಿಯೇನಾಗುವುದು ? ಭಗವತೀದಾಸ:-ವಿಕ್ರಮಸಿಂಹ ! ಏನು ಹೇಳುತ್ತಿರ.ವಿ? ಒಂದೂವರೆ ಸಹಸ್ರ ಸುಶಿಕ್ಷಿತರಾದ ಯೋಗಳು ನಮ್ಮ ಆಜ್ಞಾಬದ್ಧರಾಗಿಲ್ಲವೆ ? ವಿಕ್ರಮಸಿಂಹ-ನಮ್ಮ ಬಳಿ ಇರುವವರಾದರೋ ಒಂದೂವರೆಸಹಸ್ರ ಸವಾ ರರು, ಆದರೆ, ಅವರ ಬಳಿ ಐದುಸಹಸ್ರ ರಾಯತರಿರುವರಲ್ಲ ! ಭಗವತೀದಾಸ-ಮಂತ್ರಿವರ್ಯನೆ ! ಹಾಗಾದರೆ ನಮ್ಮ ಸೈನ್ಯವು ಅವರ ಸೈನ್ಯವನ್ನಿ ದಿರಿಸಿ ಯುದ್ಧ ಮಾಡಲಾರದೆ ? ನಮ್ಮ ಸೈನಿಕರ ನರಗಳಲ್ಲಿಯೂ ದುರ್ಬಲ ತೆಯು ವ್ಯಾಪಿಸಿರುವುದೇನು ? ನಮ್ಮವರೆಲ್ಲರೂ ಹೆಂಗಸರಾದರೋ ? ನಮ್ಮ ಸೈನಿಕರಲ್ಲಿನ ರಜಪೂತರಕ್ತವು ಇಂಗಿಹೊಯಿತೆ ? ನಮ್ಮವರು ತಮ್ಮ ಪೂರ್ವ ಪುರುಷರ ಶೌರ್ಯ, ಸೈರ, ಸಾಹಸಾದಿ ಸತ್ವಗುಣಗಳನ್ನು ಮರೆತುಬಿಟ್ಟರೆ ? ಅವರ ಜ್ಞಾಪಕಶಕ್ತಿಯು ಹಾಳಾಗಿ ಹೋಯಿತೆ ? ನಮ್ಮವರು, ಭರತಖಂಡಕ್ಕೆ ರತ್ನ ಪ್ರಾಯವಾದ ರಾಜಸ್ಥಾನ ದಲ್ಲಿ ಆರ್ಯವೀರದಂಪತಿಗಳಿಗೆ ಜನ್ಮಗ್ರಹಣಮಾಡಲಿಲ್ಲವೆ ? ನಮ್ಮವರು ರಜಪೂತಜನ ನಿಯ ಸ್ತನ್ಯಪಾನವನ್ನು ಮಾಡಲಿಲ್ಲವೇನು ? ನಮ್ಮವರೆಲ್ಲರಲ್ಲಿಯೂ ಕ್ಷಾತ್ರಧರ್ಮವು ತಿಲಮಾತ್ರವಾದರೂ ಉಳಿದುಕೊಳ್ಳದೆ ಎಲುಪ್ತವಾಗಿ ಹೋಯಿತೆ ?-ಎ, ವಿಕ್ರಮ