ಪುಟ:ಹಗಲಿರುಳು.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಕೋಗಿಲೆ, ಎಪ್ರಿಲ್ ೧೯೧೮. ಓಹೋ ! ಹೊತ್ತು ಹೋಯಿತು. ಇನ್ನು, ವಿಮರ್ಶೆಗೆ ಎಡೆ ಇಲ್ಲ, ಆರ್ಯ ನಿಗೆ, ಮುಸ್ಸು ಮೀರಿದೆ, ಕತ್ತಲೆಯ ಭೇದೋಪಾಯವು, ಎತ್ತೆ ತಲೂ ತಲೆ ದೋರಹತ್ತಿದೆ. ಅದೊ ! ಆರ್ಯನ ಪಕ್ಷದವರೆಲ್ಲ, ಕಾರ್ಯವಿಮುಖರಾಗಿ, ಚಲಿಸ ತೊಡಗಿದ್ದಾರೆ, ಮಾತ್ರವಲ್ಲ, ಅವರು ನನ್ನ ವಿಷಯದಲ್ಲಿ, ಸಂಶಯಪಡುತ್ತಾರೆಂದು, ಧ್ವನಿಪ್ರಧಾನವಾದ, ಅವರ ಮಾತೇ ಸೂಚಿಸುವುದು, ಇನ್ನು, ನಾನೂ, ಅತ್ತ ಕಡೆಯ ವಿಚಾರವನ್ನು ಮಾಡದಿದ್ದರೆ, ಅಪವಾದಕ್ಕೆ ಬಲಿಬೀಳಬೇಕಾದೀತು. ಲೋಕಾಪ ವಾದಾದ್ಭಯಂ' ಎಂದಲ್ಲವೆ ಎಚ್ಚರಿಕೆಯ ಮಾತು ? ಇಂತು ಪ್ರಸ್ತಾವನೆ. ಟಿ. ಒ೦ ದ ನೆ ಯ ಅ೦ ಕ. •••0�ov• (ಮುಚ್ಚಂಜೆಯ ಹೊತ್ತು, ವೃದ್ದನಾದ ಆರ್ಯನು (ಸೂರ್ಯನು) ಕಾಲನ ರಥದೊಳಗಿನ ಕಂಬಿಸಿಲ ಪೀತಾಂಬರದ ಹಾಸಿಗೆ ಹಿಡಿದಿರುತ್ತಾನೆ.) ಆರ್ಯ:-(ಮೋರೆಯೆತ್ತಿ, ಮುಂದಿನ ಪ್ರಜೆಗಳನ್ನು ನೋಡಿ) ಪ್ರಜೆಗಳೆ, “ನೀವೆಂದರೆ, ನನ್ನನ್ನು ಮನಮುಟ್ಟಿ ಪೂಜಿಸುತ್ತ, ಆಜ್ಞಾಧಾರಕರಾಗಿರುವವರು' ಎಂಬು ದನ್ನು ಚೆನ್ನಾಗಿಬಲ್ಲೆ ನು, (ಅರಸಿಂಗಂ ಪ್ರಜೆಯೆ ದೈವಂ' ಎಂಬ ಮಾತು, ನಿಮಗೇ। ಸಲ್ಲು ವುದು. ಆದರೆ, ಅದಕ್ಕಾಗಿ, ಮುಖಸ್ತುತಿಮಾಡುವುದು ಸರಿಯಲ್ಲ , ಸ್ತುತಿಯಿಂದ, ಹಲವು ಬಾರಿ, ಕೇಡೆ ಉಂಟಾಗುವುದೆಂಬುದು ಅನುಭವಸಿದ್ದವು. ಅದರಿಂದಲೆ, ನಿಮ್ಮ ನಡತೆಯನ್ನು ಒಳಗಿಟ್ಟು, ಹೊರಗೆ, ಗಂಭೀರಭಾವದಿಂದಿ ದ್ದೆನು. ಆದರೆ, ನೀವು, ನನ್ನ ಆ ಗಂಭೀರತೆಗೆ ಬೇಸರಪಟ್ಟ ಮೂಢರಲ್ಲ ವೆಂಬುದು, ನಿಮ್ಮ ಆಗಾಗಿನ ಕರ್ತವ್ಯತತ್ಪರತೆಯಿಂದಲೂ, ಕಡೆಗಾಲದ ಈ ಅಜ್ಜನ ಮೋರೆ ನೋಡುವುದಕ್ಕಾಗಿ ಬಂದು ನೆರೆದಿರುವ ಈ ಸಂದಣಿಯಿಂದ ಲೂ, ನಿಮ್ಮೆಲ್ಲರ ಮುಖಭಾವದಿಂದಲೂ, ಮತ್ತಷ್ಟು ಗಟ್ಟಿಯಾಗಿದೆ. ಬೆಲ್ಲ ದಲ್ಲಿ ಕಡೆಗೊಡಿಯೆಂದುಂಟೆ? ನಿಮ್ಮಲ್ಲಿ ಹಲವರು, ನನ್ನ ಕೈಸನ್ನೆಯಿಂದಾಗಿ, ಮುಂಜಾನೆ ಆನೆಯಾಡ ತೊಡಗುವ ಮೊದಲೆ, ನನ್ನ ಪಕ್ಷದವರೆಂಬುದನ್ನು, ತಮ್ಮ ಪಕ್ಷಗಳನ್ನು ವಿಸ್ತ - --~- - - - - - -+ ೧. ಅಜ್ಜ = ಅಜ್ಜ ನು, ಆರ್ಯನು, ೨, ಪಕ್ಷ = ಮಿತ್ರಸಮೂಹ, ರೆಕ್ಕೆ,