ಪುಟ:ಹಗಲಿರುಳು.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು. ೨೧ --- 60 ಜಲಧರ:- ಎಲ್ಲರಿಗೂ ಕ್ರಮಕ್ರಮವಾಗಿಯೇ ಮನವರಿಕೆಯಾಗುವುದು. ಆಗ ಬಿತ್ತಿ, ಈಗ ಹಣ್ಣು ಕೊಯ್ಯಬೇಕೆಂದರೆ, ಹೇಗಾದೀತು? ಆ ಮೂಢತೆ ನಮ್ಮಲ್ಲಿ ಮಾತ್ರವೆಂದಲ್ಲ; ಎಲ್ಲೆಲ್ಲಿಯೂ ಒಂದೇ ರೀತಿ, ನೂಢತೆಯೇ ರೂಢಿಯ ನೆಲೆ ಗಟ್ಟು' ಎಂಬ ಮಾತೂ, ಅದರಿಂದಲೆ ಹುಟ್ಟಿತು. ಹೊಸಸುಧಾರಣೆ ಮೇಲೆ ಬಂದು ರೂಢವಾಗಬೇಕಾದರೆ, ಆ ಕಾಲಕ್ಕೆ ಸಲ್ಲದ ಹಳೆನಡತೆಗಳ ಮೂಢಭಕ್ತಿ ಎಲ್ಲವೂ ಅಡಿಗೆ ಬೀಳಬೇಕು, ಪ್ರಕೃತಿಹಿತವಾದ ಹೊಸ ಕಟ್ಟೋಣವು, ಲೋಕಕ್ಕೆ ತನ್ನ ತಲೆ ತೋರಿಸಬೇಕಾದರೆ, ತತ್ಕಾಲಕ್ಕೆ ಸಮ್ಮತವಾಗದೆ ವಿಕೃತವಾದ ಹಳೆಮನೆಯ ಕಲ್ಲು ಮಣ್ಣುಗಳೂ, ಕಸಕಡ್ಡಿಗಳೂ ತಳಗಟ್ಟಾಗ ಬೇಕಾಗುವುದಲ್ಲವೆ? ಇದೊಂದು ಸುಧಾರಣೆಯೆಂದು, ಎಲ್ಲವನ್ನೂ ಬದಲಿಸಬೇ ಕೆಂದು ಚಲಹಿಡಿದರೆ, ಅದು, ಆ ಮುಂದಾಳುಗಳ ಸ್ವಾಭಿಮಾನಶೂನ್ಯತೆಯನ್ನೂ, ಲೋಕಹಿತವಿಘಾತೆ, ಕತೆಯನ್ನೂ ಬಯಲುಪಡಿಸಿ, ಮಂಜುಗಡ್ಡೆಯ ಮನೆ ಯಂತೆ, ಏಳಿಗೆಗೆ ಪ್ರತಿಯಾಗಿ ಬೀಳಿಕೆಯನ್ನೆ ಹೊಂದುವುದು ಹೇಗೆಂದರೆಹಳೆಯದೆಲ್ಲವನ್ನೂ ಬಿಟ್ಟರೆ, ನಮ್ಮದೆಂಬುದು ಏನೂ ಇಲ್ಲ ಎಂದಾಯಿತು. ಅದಿಲ್ಲ ವಾದರೆ, ಆತ್ಮಗೌರವವೂ ಇಲ್ಲ. ಬೇಡವೆಂದರೆ, ಸ್ವಧರ್ಮವಾದ ಕರ್ತವ್ಯವೂ ಇಲ್ಲ. ಆ ಧರ್ಮವನ್ನು ಅಲಕ್ಷಿಸಿದರೆ, ಆತ್ಮವಿಶ್ವಾಸವೂ ಇಲ್ಲದೆ, ತಾನು ತಾನೇ ಅಲ್ಲ ವೆಂದಾಗುವುದು. ಆದರೆ ಲೋಕವು ಇನ್ನೂ ತಾನುತಾನಾಗಿಯೆ ಇದೆ. ಈ ಮುಂದಾಳು ಮಾತ್ರ ಬೇರೆಯಾಗಿ ಲೋಕವೆಂದರೆ, ಬೀಗದಕೈ ಬಿಸುಟ ಪೆಟ್ಟಿಗೆಯಂತಾದೀತು. ಆ ಕೈಯನ್ನು ಕಳೆವಾಗ, ಬಾಗಿಲುತರೆದಿದ್ದರೆ, ಒಳಗಿನ ಹೊತ್ತು, ಕಂಡವರ ಕೈಗೆ ; ಮುಚ್ಚಿದ್ದರೆ, ಹುಗಿದಿಟ್ಟ ಹಣದಂತೆ, ಕತ್ತಲೆಕೊಣೆಗೆ, ಹಾಗಾದರೆ ಎಲ್ಲವೂ ನಿರರ್ಥಕವಾದೀತು, ಅದರಿಂದ, ಮಾಸಿಹೋದರೂ, ಯೋಗ್ಯವಿದ್ದರೆ, ಆ ಹಳೆಯಪದ್ಧತಿಗಳಿಗೆ, ಒಂದಿಷ್ಟು ಹೊಸಬಣ್ಣ ಗೊಟ್ಟರಾಯಿತು, ನಿರರ್ಥಕ ಗಳಾದವುಗಳನ್ನು, ಲೋಕಕ್ಕೆ ತಿಳಿಸಿಯೆ ತೆಗೆದುಹಾಕಬೇಕು. ಉದ್ದು ಉಬ್ಬಿ ದರೂ ಮದ್ದಳೆಯಾಗದೆಂದು ಬೋಧಿಸಿದರೆ, ಆ ಲೌಕಿಕರೂ ಅಲ್ಲಗಳೆಯ ಲಿಕ್ಕಿಲ್ಲ. ಅದರಿಂದ ಎಲ್ಲವನ್ನೂ, ಅವರಿಗೆ ನ್ಯಾಯರೀತಿಯಿಂದ ತಿಳಿಸಿ, ಹೊಸಸುಧಾರಣೆಯನ್ನು ತಕ್ಕಂತೆ ಹಬ್ಬಿಸಬೇಕಲ್ಲದೆ, ಕೂಡಲೆ ನೆಲವನ್ನು ಸ್ವರ್ಗಕ್ಕೆ ಏರಿಸಬೇಕೆಂದು ಕೈ ಹಾರಿಸಬಾರದು, ಮೊಗೆದು ಮಾಯಲಿಕ್ಕೆ