ಪುಟ:ಹಗಲಿರುಳು.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು ೨೫ [ಅದಕ್ಕೆ ನಕ್ಷತ್ರಪತಿ ಸೈಗುಟ್ಟಿ, ಪರಿವಾರದೊಡನೆ ಜಲಧರನ ಮರೆಹೊ ಕನ.. ಮಧ್ಯಸ್ಥರು ಅಡಿಗೆಗೆವುದಕ್ಕೆ ಮೊದಲೆ, ಕಣ್ಣು ಕುಕ್ಕಿದರೂ ಕಾಣದ ಕತ್ತಲೆ ಎತ್ತೆತ್ತಲೂ ಮತ್ತೆ ಮುಸುಕಿ, ವೇಷಧಾರಿಗಳು ಅತ್ತಿತ್ತ ಸರಿವ ಮೊದಲೆ ಬೀಳುವ ಜವನಿಕೆಯಾಯಿತು. ಸೆರೆಸಿಕ್ಕಿದಲ್ಲಿ ಉಳಿಹೊಗಿಸುವುದು ದುಷ್ಟರ ಕಟ್ಟಳೆ, ಜಲಧರನು ತಿರುಗಿ ಲೋಕವನ್ನು ನೋಡಿದನು. ಎಲ್ಲೆಲ್ಲಿ ಯ ತೇಜಸ್ವಿಯ ಬಾವಟಿಗಂಬಗಳ, ಬೇರೆ ಬೇರೆ ಬೆಳಕಿನ ಪತಾಕೆಗಳೂ, ಕಾರ್ಗತ್ತಲೆಗಣಿಯ ವಣಿಗಳಂತೆ, ಜಳಜಳಿಸುತ್ತಿದ್ದುವು. ಕತ್ತಲೆ ವಿಸ್ತರಿಸಿ ದಷ: ಸಾರಣೆನೆಲಗಳ್ಳಿ ಚೆಲ್ಲಿದ ಜಲಬಿಂದುಗಳಂತೆ, ಆ ದ್ವಜಗಳು ತಳ ಇಳಿಸಿ ನೆಲೆನಿಲ್ಲುತ್ತಿದ್ದವು. ಎದುರಾಳುಗಳು, ಸಡಿಲಾಗಿ ಹೊಕ್ಕು ಹೊರಡುತ್ತ ಕೆಳೆಯ೦ತಿದ್ದರೆ, ನಿಷ್ಕಪಟಿಗಳ ಎಣಿಕೆಯ ಬೆಳಕು, ಮರಳಿಗೆ ಬಿದ್ದ ನೀರಿನಂತೆ ಆರಿಹೋಗುವುದು ಸ್ವಭಾವವು, ದೃಢನಿಶ್ಚಯದವರ ಬಗೆ ಬಯಲಾಗಬೇಕಾ ಗರೆ, ವಿರೋಧಿಗಳ ಒತ್ತಾಟವೇ ಬೇಕು. ಇರಲಿ, ಜಲಧರನು, ತನ್ನ ಶಾಂತ ನಾವ ಆಂತರ್ಯನನ್ನು ತಿಳಿಸಿ ಸದಗತಿಯನ್ನು ಲೋಕಕ್ಕೆ ಕಳುಹಿದನು. ಆ ಸದಾಗತಿಯ ಬರುವಿಕೆಯನ್ನು ಹೀಗೆ ಬಣ್ಣಿಸಬಹುದು, ಕಂದ | ಜಲಧರನಂ ತನ್ನವರೊಡ ನೊಳಹೊಕ್ಕನು ರಾಜನಿಗೆ ಕತ್ತಲೆಯೆರ್ತ್ತ 1 ತಲೆದೊರುತವನ ಬಗೆ: ಬಲವಾಗಿದೆ, ಲೋಕವೆನ್ನ ನುಡಿಗೊಪ್ಪುವುದೆ? | ೧ !! ಎನ್ನುವ ಸಂದೇಹದ ಚಳಿ ಬಿನುಗುತ್ತಾ ವಮಾತನೆನ್ನಲಿ, ನೆಲವಿ || ಮುನ್ನೆಂದು ಶಂಕೆಗೊಳ್ಳು ತ ತನ್ನಯ ಕೈ ಬಿಸಿ ಮೆಲ್ಲ ಮೆಲ್ಲನೆ ಸುದ- 11 ೨ || ಸೆದಾಗ ಲೋಕಕ್ಕಿಳಿದು, ತೇಜಸ್ವಿಯನ್ನು ಬಿಟ್ಟು, ಮೊದಲು ಊರವರ ಕಿವಿ ಯನ್ನೆ ಊದಬೇಕೆಂದು ಹವಣಿಸಿದನು. ಆದರೆ, ಅವರು ಸದಾಗತಿಯ ಚಳಿಗೆ ಸಂದೇಹಿಸಿ, ಅದನ್ನೆಲ್ಲ ದೆ, ತೇಜಸ್ವಿಯೆಡೆಗೇ ಹೋದರು, ದೃಢನಿಶ್ಚಯದ ಹಿಂದಾ ಳುಗಳು, ನಿಷ್ಟರಾದ ಮುಂದಾಳುಗಳ ಕಣ್ಮರೆಯಿಸಿ ಈಚೆಯ ಕಡ್ಡಿಯನ್ನಾದರೂ ಆಚೆಗೆ ಇಡಲು ಸಮ್ಮತಿ ಸರೆಂಬುದು ಆಶ್ವರ್ಯವಲ್ಲ. ಉಪಾಯವಿಲ್ಲದೆ, ಸದಾ ಗತಿಯ ತೇಜಸ್ವಿಯ ಸಮ್ಮುಖಕ್ಕೇ ಹರಿಯಬೇಕಾಯಿತು.]