ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಡೆದುಬಂದ ಲಕ್ಷ್ಮಿ

೧೦೩

"ಲೇ ದ್ಯಾಂವಿ, ನಿನ್ನ ಕೂನ ಮಾಡ್ಕ೦ದ್ರು” ಎಂದು ಹತ್ತಿರ ಬಂದು ಹಲ್ಲು ಕಡಿಕಡಿದು ದೌಪದಿಯ ಗಂಡ ಗೊಣಗುಟ್ಟ-ಹತ್ತಿದ.

ದ್ಯಾಂವಕ್ಕ ನ ಜಿದ್ದಿಗೆ ಬಿದ್ದಳು. ಅವಳೂ ಮೆಲ್ಲಗೆ "ಗಂಡ್ಲು ನಿನ್ನ ಧೀರೇವರ ನೋಡ್ತೀನಿ; ಇಲ್ಲಾರ ನನ್ನ ಅನಾತ ಬಡವೀ ಧಿರೇ ನರ ನರಿಕ್ಷ್ಯಚ್ಚು ! ” ಎಂದವಳೆ ಕಚೇರಿ ಬಿಟ್ಟು, ಮಗನನ್ನು ಕಣ್ಣಿಯಿಂದ ಕರಕೊಂಡು ಹೊರಗೆ ಬಂದಳು.

ನಾಲ್ಕಾರು ನಿಮಿಷ ಮಗನೊಡನೆ ಏನೇನೋ ಮಾತನಾಡಿಕೊಂಡು ಒಳಗೆ ಬಂದಳು. “ "ಯಪ್ಪಾ, ಅಂವನ ಮದಿವಿ ರೂಪಾಯಿ, ನಟ ಹೇಳಿಬಿಡಿ. ನಂಗ ಗೊತ್ತೈತಿ, ಆರಿಸು ರೂಪಾಯ್ಯಾಗ ಮನವಿ ಮಾಡಿಕೊ: ಡಾ; ಸಾವಿರ ರೂಪಾಯಂತಾನಿ ಎಪನಾರ, ಓಂತಾ ಬಡವ, ಸೆರೆಬಡಕ ಮಾ, ಸಾವಿರ ರೂಪಾಯಾ ಎಲ್ಲಿಂದ ತಂದಿದ್ದಾನು ? ಆಟ ಇಚಾರ ಆಗಿ: ದಣ್ಯಾರ-ತಮ್ಮ ಪಾದಕ ಬೀಳತೇನ್ರಿ."

ಆಕೆಯ ಮಾತಿಗೆ ಎಲ್ಲ ಅಮಲ್ದಾರರೂ ದ ೦ ಗು ಬ ಡೆ ದು ಹೋದರು. ನ್ಯಾಯಮೂರ್ತಿಗಳು "ಅವ್ವಾ, ನೀನೆ ನನ್ನ ಜಾಗಾದಲ್ಲಿದ್ದರೆ ಒಳಿತಾಗುತ್ತಿತ್ತು ನೋಡು. ಎಷ್ಟು ನಿನ್ನ ಧೈರ್ಯ ಎಷ್ಟು ನಿನ್ನ ವಿಚಾರ ತಾಯಿ ! ” ಎಂದರು.

ಇಷ್ಟರಿಂದಲೇ ದ್ಯಾನಕ್ಕನಿಗೊಳ್ಳೆಯ ಅಭಿಮಾನವುಂಟಾಯಿತು

"ಅವಳ ಸೋಡಪತ್ರವಾಗಬೇಕಾದರೆ ಬೇಕಾಗುವ ಹಣವನ್ನು ನೀನೇಕೆ ಕೊಡುತ್ತೀಯಾ ? ” ಪೋಲಿಸ ಕ್ರಾಸಾಯಿತು.

“ನನ್ನ ಮಗನ ಸಂಗಾಟ ಬಗಣಾನಾಡಿಕೊಂತಾಳುತ್ರಿ. ಹೀ೦ಗ ಬಿಟ್ರ, ಪರದೇಶಿ ಹುಡಿಗಿ ಅಡ್ಡಾಡಿ ಆಗಿ ಹೊಕ್ಕೆತಿ; ಯಡ್ಕ ಮತ್ತೂ ಮತ್ತೂ ಓಡಿ ಓಡಿ ಹೋಗೂವ. ಅದರಕಿಂತಾ ಮನವಿಮಾಡಿ ಮನ್ಯಾಗಿಟಗೊಂಡಿದ್ದ ಸುಕಾ ಅಲ್ರೀ ಯಪ್ಪಾ ? "