ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನೀಲೆಯ ಸಂಸಾರ

"ನೀಲೀ, ನಿನ್ನನ್ನ ಈಗ ನುನು ಊರಿಗೆ ಕರೆಕಳಸಿದ್ದು ಯಾತಕಂತ ಗೊತ್ತೈತೇನು ?"

"ಇಲ್ಲಪ್ಪಾ, ಗೊತ್ತಿಲ್ಲಾ ...."

"ಆಹಹಹಹs .......... ಶಾರದೂರಾಗಿದ್ದಕ್ಯಾರ, ನೀನೂ ಸೋಗ ಮಾಡಾಕ ಬಾಳ ಕಲ್ತೀ ಬಾ--ಹೊಯ್ಮಾಲೀ |"

ನೀಲೆಯ ಕಣ್ತುಂಬಿ ನೀರು ಹರಿಯಹತ್ತಿತು.

"ಅಪ್ಪಾ, ಸುಮ್ಮಸುಮ್ಮನ ಬೈಲಿಕ್ಕೆ ನಾನೇನು. ಅಂಥಾದ್ಟು ಮಾಡಿದ್ದು? ನನ್ನ ತಪ್ಪಾದ್ರೂ ಮೊದಲು ನನ್ನ ಉಡೀ ಒಳಗ ಬೀಳಲಿ, ಆಮೇಲೆ ಸಿಟ್ಬಾಗಿರಂತ?*

"ನೋಡ್ನೋಡ........... ಇದಕs ನೋಡ ನಿನಗ ಸೋಗಲಾಡಿ ಅನ್ನೂದು? ಹೌದಲ್ಲ, ಮನ್ಸೆ ಥಿಮ್ಮ ಸಾಲೀ ಒಳಗ ಒಂದ ನಾಟಕಾ ಮಾಡಿಸಿದ್ರಂತಲ್ಲಾ ನಿಮ್ಮ ಅಕ್ಕಾನೋರು? ಅದರಾಗೆ ನಿನ್ನ ಸೋಗ ಬಲು ಚೆಂದಾತಂತಲ್ಲಾ..........."

ನೀಲೆಗೆ ದುಃಖವು ಒತ್ತರಿಸಿತು. ತನ್ನ ತಂದಿ ಏತಕ್ಕಾಗಿ ಈ ತರದ ಬಿರುಸು ನುಡಿಗಳನ್ನಾಡುತ್ತಿರಬಹುದೆಂದವಳಿಗೆ ತಿಳಿಯದೇಹೋಯಿತು. ಚಟ್ಟನೆದ್ದು ಒಳಗೆ ಹೋಗಿಬಿಟ್ಟಳು. ತಂದಿಯೋ, ಕಚ್ಚದ ಸಾಯಿಯ ಕ್ರಮವನ್ನು ನಡೆಯಿಸಿಬಿಟ್ಟಿದ್ದನು.

ಲೀಲಾವತಿಯು ತೇಗೂರ ಗೌಡೆರ ಮಗಳು. ತೇಗೂರ ಗೌಡರೆಂದರೆ ಆ ಊರಿಗೆ ರಾಜರಿದ್ದಂತೆಯೇ. ಒಕ್ಕಲಿಗರೇ ಅವರ ಸೇನಾಪತಿಗಳು. ದನ-ಕರುಗಳೇ ಅವರ ಆನೆಕುದುರೆಗಳ ಸೈನ್ಯ. ತೋಟ-ಹೊಲ-ಯಾತದ ಬಾವಿ, ಇವೆ ಅವರಿಗೆ ರಣಾಂಗಣ. ಇಲ್ಲಿಯೇ ಅವರ ಜೀವನದ ಹೋರಾಟ.