ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೮

ಹೂಬಿಸಿಲು

"ಅಯ್ಯ ಅಪ್ಪಾ, ಅದನ್ನೇನ ಕೇಳ್ತೀಯೊ? ಅವರು ಮಾಡಿಕೊಂಡೆ ಹೇಣತೀ ಮ್ಯಾಲೆ ಜೀವಾ ಮಾಡಿದ್ಹಾಂಗ ನನ್ನ ಮ್ಯಾಲೆ ಸಹ ಜೀವ ಕಳಕೋತಾರ. ಇಷ್ಟ ಯಾಕ, ಅವಕ ಹೇಣ್ತಿ ಸುದ್ದಾ ಭಾಳ ದೊಡ್ಡ ಮನಸಿನವರಿದ್ದಾರ; ಮೊನ್ನೆ ತಮ್ಮ ಕೂಸಿನ ಜಾವಳದಾಗ ನನ್ನ ಮುದ್ದಾಂ ಕರೆಕಳಿಸಿ ನಾಲ್ಕು ದೇವರ ಪದಾ ಅನ್ನಲಿಕ್ಕೆ ಹಚ್ಚಿದ್ರೂ, ಮತ್ತ ಹತ್ತ ಮಂದೀಒಳಗ, ತಮ್ಮ ಗೆಳತೇರ ಮುಂದ ಒಂದ ಜರದ ಸೀರಿ ತಂದು, ಸ್ವತಃ ತಮ್ಮ ಕೈಲೆ ಉಡೀ ತುಂಬಿದರು, ಇದರ ಏನು ಸಣ್ಣ ಮಾತಾತ ಅಪ್ಪಾ? ಹಬ್ಬಾ-ಹುಣ್ಣಿವೀ ಬಂತಂದ್ರ ಆ ತಾಯಿ ನನಗ ಒಲೀನ ಹೊತ್ತಿಸಗೊಡೂದುಲ್ಲಾ. ಅವರ ಮಕ್ಕಳೂ ಮರಿ ಎಲ್ಲಾ ನಮ್ಮಲ್ಲೆ ಬರ್ತಾವ, ಹೋಗ್ತ್ರಾವ! ಇವರೂ ಭಾಳೊತ್ತು ಇಲ್ಲೇ ಕೂತ್ರ, "ಮನೀಗೆ ಲಗೂನ ಹೋಗ್ರೀ, ಅವ್ವಾ ಅವರು ಹಾದಿ ನೋಡ್ತಿದ್ದಾರಾದೀತೂ" ಅಂತ ಸಿಟ್ಟು ಮಾಡಿ ಕಳಸಿಕೊಡತೇನಿ. ಮತ್ತು ಅವ್ಟ್ವಾ ಅವರೂ ಹಾಂಗ ಹೇಳಿ ಇಲ್ಲಿಗೆ ಕಳಸ್ತಾರ? ಎನ್ನುತ್ತ ತನ್ನ ಟ್ರಂಕು ಪೆಟ್ಟಗೆಗಳನ್ನು ತೆಗೆದು, ಆ ನಾಲ್ಕು ವರುಷದ ಅವಧಿಯಲ್ಲಿ ತನ್ನ ಮಾಲಿಕರು ತನಗಾಗಿ ಕೊಟ್ಟಿದ್ದನ್ನೆಲ್ಲ ತಂದೆಗೆ ತೋರಿಸಿದಳು. ಅವನೂ ಹಿರಿಹಿರಿ ಹಿಗ್ಗಿದನು. ಸಾವಿರಾರು ರೂಪಾಯಿ ಬೆಲೆಬಾಳುವ ಬೆಳ್ಳಿಯ ಸಾಮಾನು, ಅರಿವೆ-ಅಂಚಡಿಗಳು, ಮೂರು ನಾಲ್ಕು ಸಾವಿರದ ಚಿನ್ನದಾಭರಣಗಳು... ಅವಳ ತಂದೆಯು ನಿಜವಾಗಿಯೂ ಬೆರಗಾದನು.

"ತಂಗೀ, ನಮ್ಮೂರ ಮಂದಿ ಹೇಳ್ತೆವ್ವಾ, ನೀ ಈಗ ಭಾಳ ಆರಾಮಾಗಿದ್ದೀಯಂತ. ಆದಕ್ಕ ನಿನ್ನ ಹಡೆದಾಕಿ ಅಂದ್ಲೂ, 'ಹಾಂಗಾರ ಮಾತಾಡಿಸಿಗೊಂಡರ ಬರ್ರೀ ಹೋಗಿ' ಅಂತ, ಬಂದೆ. ಆಂs...ಮತ್ತ ಒಂದು ತಿಂಗಳೊಪ್ಪತ್ತು ನಡೀಯಲ್ಲಾ ಊರ ಕಡೆ--ತವರುಮನೀ ಮಾಡಿ ಬಂದೀಯಂತ. "

"ನನಗ ಬರಲಿಕ್ಕೆ ಆಗಲಿಕ್ಕಿಲ್ಲಪ್ಪಾ ಸುಮ್ಮನ. ಭಂಗಾರದ್ಹಾ೦ಗ ಈಗ ದೇವ್ರ ಅಂತ ಹಾದಿಗೆ ಹೆತ್ತೇನಿ, ಮಾಲಕರಲ್ದ ಅವರ