ಈ ಪುಟವನ್ನು ಪರಿಶೀಲಿಸಲಾಗಿದೆ
ಆಹ್ವಾನ
ಪಂಡಿತ್ :
ಈ ವಿಷಯದಲ್ಲಿ ಸಂಸ್ಕೃತದ ಕೊಡುಗೆ ಅಪಾರವಾದದ್ದೂಂತ ನನಗೆ ಸ್ವಲ್ಪ
ಹೆಮ್ಮೆಯೇ!
ಇತಿಹಾಸದ ಪ್ರಾದ್ಯಾಪಕ :
ಇಂಥ ಸ್ವಾಭಿಮಾನ ಕ್ಷಮ್ಯ, ಅಪ್ಪಣೆಕೊಡಿಸಿ!
ಪಂಡಿತ್ :
ಮಹಾಕಾವ್ಯಗಳಾದ 'ರಾಮಾಯಣ' 'ಮಹಾಭಾರತ' ಇಡೀ ದೇಶದ ಸೊತ್ತು.
ಭರತೇಶ್ :
ಹಿಂದಿಯ'ತುಳಸೀದಾಸ ರಾಮಾಯಾಣ',ತಮಿಳಿನ 'ಕಂಬ ರಾಮಾಯಣ'
ಕನ್ನಡದ ಕುವೆಂಪು ವಿರಚಿತ 'ಶ್ರೀ ರಾಮಾಯಣ ದರ್ಶನಂ',-ಇವೆಲ್ಲ ಆ
ಪ್ರಾಚೀನ ಮಹಾಕಾವ್ಯದ ಭಾರತೀಯತ್ವಕ್ಕೆ ಸಾಕ್ಷಿ.
ಪಾಂಡಿತ್ :
ಭಾಸನ ನಾಟಕಗಳು, ಶೂದ್ರಕನ 'ಮೃಚ್ಛಕಟಿಕ', ಕಾಳಿದಾಸನ 'ಅಭಿಜ್ಞಾನ
ಶಾಕುಂತಲ', ನಿಶಾಖದತ್ತನ 'ಮುದ್ರಾರಾಕ್ಷಸ', ಭವಭೂತಿಯ 'ಮಾಲತೀ
ಮಾಧವ', 'ಪಂಚತಂತ್ರದ ಕಥೆಗಳು,' 'ಹಿತೋಪದೇಶ'ದ ಕಥೆಗಳು
ಇವೆಲ್ಲ ಭಾರತೀಯ ಸಾಹಿತ್ಯ.
ಭರತೇಶ್ :
ನಿಜ, ಭಾರತದ ಎಲ್ಲ ಭಾಷೆಗಳಲ್ಲೂ ಲಭ್ಯವಿರುವ ಸಾಹಿತ್ಯ.
ಇತಿಹಾಸದೆ ಪ್ರಾದ್ಯಾಪಕ :
ಇತಿಹಾಸದ ದೃಷ್ಟಿಯಿಂದ ಮಾತ್ರ ಸಂಸ್ಕೃತವೀಗ ಜೀವಂತವಲ್ಲದ ಭಾಷೆ.
ಭರತೇಶ್ :
ಆದರೆ ಅದೀಗ ಬೇರೆ ರೂಪಗಳಲ್ಲಿ ಜೀವಂತವಾಗಿ ಉಳಿದಿದೆ. ಭಾರತದ ಹತ್ತು
ಹದಿನಾರು ಪ್ರಮುಖ ಭಾಷೆಗಳಲ್ಲಿ ಈಗ ಅದು ಬದುಕಿದೆ. ಉತ್ತರದ ಭಾಷೆ
ಗಳಿಗೂ ದ್ರಾವಿಡ ಮೂಲದ ಹೆಚ್ಚಿನ ಭಾಷೆಗಳಿಗೂ ಸಂಬಂಧ ಸಾಧ್ಯವಾಗಿ
ರೋದು ಸಂಸ್ಕೃತದ ಮೂಲಕವೇ.
__________________
೧೭೦