ಪುಟ:AAHVANA.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಆಹ್ವಾನ

     ತಮ್ಮ  ಎಂಭತ್ತನೆಯ ಹುಟ್ಟು ಹಬ್ಬದ ದಿವಸ ಕವಿ ರವೀಂದ್ರರು  ನೀಡಿದ ಸಂದೇಶದಲ್ಲಿ,
    “ಮನುಷ್ಯನಲ್ಲಿ ನಂಬುಗೆಯನ್ನು  ಕಳೆದುಕೊಳ್ಳುವ   ಮಹಾ       ಪಾಪವನ್ನು  ನಾನು ಮಾಡಲಾರೆ. ಅದರ బದಲು అವನ ಇತಿಹಾಸ ದಲ್ಲೊಂದು ಹೊಸ ಅಧಾಯ ಆರಂಭವಾಗುವುದನ್ನು  ನಾನು ಇದಿರು ನೋಡುವೆ,”
     __ಎಂಬ ಒಂದು ಮಾತಿದೆ.
     ఆ ಕವಿವಾಣಿಗೆ ಪಾವಿತ್ರ್ಯವನ್ನು ಕಲ್ಪಿಸಿ ಅದಕ್ಕೆ అನುಸಾರವಾಗಿ    ತಮ್ಮ ವಿಚಾರಗಳನ್ನೂ ಕೃತಿಗಳನ್ನೂ ಭಾರತೀಯರು ರೂಪಿಸಿಕೊಳ್ಳಬೇಕು. 
    ಹಾಗೆ ಮಾಡದೇ ಹೋದೆವೆಂದರೆ ಈಗ ಹರಿಯುತ್ತಿರುವ ಬೆಳಕು ನಿರರ್ಥಕವಾದೀತು; ಅದು ಬರಿಯ ಬೆಳಗಾದೀತು.
                  ೬
     ಸ್ವತಂತ್ರ ಭಾರತದ ಬೇರೆ ಬೇರೆ ಮುಖಗಳನ್ನು ಕುರಿತು ಈವರೆಗೆ ವಿವೇಚಿಸಿದ ನಾವು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಅನುಪಲ್ಲವಿಗೆ ಹಿಂದಿರುಗೋಣ.
    ಏಳು ಮಹಾ ನದಿಗಳ, ಏಳು ಮಹಾ ಪರ್ವತಗಳ ಈ ಬೃಹತ್ ರಾಷ್ಟ್ರದ ವೈವಿಧ್ಯಮಯ ಬದುಕಿನ ಪ್ರತೀಕ__ಸಪ್ತವರ್ಣಗಳ ಇಂದ್ರಧನುಸ್ಸು.
    ನಮ್ಮ ಇತಿಹಾಸ,  ತತ್ತ್ವಜ್ಞಾನ,  ಸಾಮಸಾಮಾಜಿಕ ಬೆಳವಣಿಗೆ, ಸಂಗೀತ_ನ್ರುತ್ಯ_ಶಿಲ್ಪ_ಚಿತ್ರಕಲೆಗಳು,. ಭಾರತೀಯ ಭಾಷೆಗಳ ಪ್ರಾಚಿನ

ಹಾಗೂ ಆಧುನಿಕ ಸಾಹಿತ್ಯ ಸ್ರುಷ್ಟಿ ಇವೆಲ್ಲ ನಮ್ಮಲ್ಲಿನ ವಿವಿಧತೆಯೊಳಗಣ ಏಕತೆಗೆ,ಭಿನ್ನತೆಯೊಳಗಿನ ಸಮಾನತೆಗೆ, ಸಾಕ್ಷಿಗಳು....

    .... ಫ್ರೆಂಚ್ ಸಾಹಿತ್ಯ_ತತ್ವಜ್ಞಾನಿ ರೊಮೆ ರೋಲಾ[ದಿವಂಗತರು]

ತಮ್ಮದೊಂದು ಗ್ರಂಥವನ್ನು,

               __________
                  ೨೨