ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಆಹ್ವಾನ
[ನಿರಾಶೆ ಸೂಚಿಸುವ ಏಕನಾದ]
ಕಿಸಾಗೋತಮಿ: .
ಅಮ್ಮಾ, ಇದು ಸಾವಿಲ್ಲದ ಮನೆಯೆ? ಸಾವಿಲ್ಲದ ಮನೆಯ ಸಾಸಿವೆ ಕಾಳು ಬೇಕು ನನಗೆ.
ಇನ್ನೊಬ್ಬಳು ಹೆಂಗಸು:
ಎಂಥ ಮಾತು..... ತ್ಸು---ತ್ಸು..... [ಕ್ಷಣ ಮೌನ. ತೀವ್ರಗೊಳ್ಳುವ ಏಕನಾದ]
ಕಿಸಾಗೋತಮಿ:
ಕತ್ತಲಾಯಿತು. ಎಲ್ಲರನ್ನೂ ಕೇಳಿ ನೋಡಿದೆನಲ್ಲ! ಸಾವಿಲ್ಲದ ಮನೆಯಿಲ್ಲ--
ಅಂಥ ಮನೆಯೇ ಇಲ್ಲ....
[ಅರಿವು ಮೂಡುತ್ತ] ಮಗುವನ್ನು ಕಳೆದುಕೊಂಡ ತಾಯಿ ನಾನೊಬ್ಬಳೇ ಎಂದಿದ್ದೆನಲ್ಲ!.... ಎಂಥ
ಹುಚ್ಚಿ ನಾನು! ಸಾವಿಲ್ಲದ ಮನೆಯ ಸಾಸಿವೆಯ ತಾರೆಂದು ಭಗವನ್ ಅಂದುದರ ಅರ್ಥ ಈಗ ತಿಳಿಯಿತು--ಈಗ ತಿಳಿಯಿತು.... ನಿರೂಪಕ:
ಜನಸಾಮಾನ್ಯರ ಬದುಕಿನಲ್ಲಷ್ಟೇ ಅಲ್ಲ! ರಾಷ್ಟ್ರ ಜೀವನದಲ್ಲೂ ಅರಿವು
ಮೂಡಿಸುವ ಕಾರ್ಯವನ್ನು ಬುದ್ಧ ಕೈಕೊಂಡ. ಇತಿಹಾಸಕಾರ:
ಒಮ್ಮೆ ಶಾಕ್ಯರು ಮತ್ತು ಕೋಲಿಯರೊಳಗಿನ ವೈರ ತೀವ್ರಗೊಂಡು ಯುದ್ಧ ಒದಗಿಬಂತು, ಎರಡೂ ಸೇನೆಗಳು ಕದನಕ್ಕೆಂದು ಸೂರ್ಯೋದಯವನ್ನು ಇದಿರುನೋಡುತ್ತ ಎದುರುಬದುರಾಗಿ ಅಣಿ ನೆರೆದುವು. [ತುತೂರಿ ಮೊಳಗುತ್ತದೆ. ಭೇರಿ ಬಾರಿಸುವ ಸದ್ದು, ಶಂಖಧ್ವನಿ]
ಶಾಕ್ಕರಾಜ :
ಶಾಕ್ಯ ಸೇನಾಪತಿ ! ಎಲ್ಲವೂ ಸಿದ್ಧವೆ ?