ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಆಹ್ವಾನ
[ಗುಜುಗುಜು] ಅಗೋ ಸೂರ್ಯೋದಯವಾಗುತ್ತಿದೆ! ಈ ಶುಭ ಘಳಿಗೆಯಲ್ಲಿ ಪರಸ್ಪರ ಮಿತ್ರರಾಗಿ ಕೈಕೈ ಹಿಡಿದು ಧರ್ಮಕ್ಕೆ ಶರಣು ಬನ್ನಿ! [ಗುಜರಿಗುಜು]
ಶಾಕ್ಕರಾಜ : ಕೋಲಿಯಾಧಿಪ:
ಕ್ಷಮಿಸಿ ಭಗವನ್ !
ಸೈನಿಕ ಸ್ತೋಮ:
[ಸಾಲು ಮುರಿದು] ಜಯ ಜಯ ಬುದ್ಧದೇವ !
ನಿರೂಪಕ:
ಬುದ್ಧನ ಪರಿನಿರ್ವಾಣವಾದ ಮೇಲೂ ಬುದ್ಧಮತ ಬೆಳೆಯಿತು. ದೇಶವನ್ನೆಲ್ಲಾ ಸಂಘದ ಸೂತ್ರಗಳಿಂದ ಕಟ್ಟಿತು. ವಿದೇಶಗಳಿಗೂ ವ್ಯಾಪಿಸಿತು. ಅಸಂಖ್ಯ ಭಿಕ್ಕುಗಳು ಎಲ್ಲೆಡೆಗಳಿಗೂ ಬುದ್ಧನ ಸಂದೇಶವನ್ನು ಹೊತ್ತು ಸಾಗಿದರು.
ಭಿಕ್ಕುಗಳು:
"ಬುದ್ಧಂ ಶರಣಂ ಗಚ್ಛಾಮಿ ಧಮ್ಮಂ ಶರಣಂ ಗಚ್ಛಾಮಿ ಸಂಘಂ ಶರಣಂ ಗಚ್ಛಾಮಿ"
ನಿರೂಪಕ: ಬುದ್ಧನ ಸಮಕಾಲೀನನು ವರ್ಧಮಾನ ಮಹಾವೀರ. ಬುದ್ಧ ಧರ್ಮದಂತೆಯೇ ವೇದೋಪನಿಷತ್ತುಗಳಿಗಿಂತ ಭಿನ್ನವಾದ ಇನ್ನೊಂದು ಮತವನ್ನು- ಜೈನ ಮತವನ್ನು-ಈತ ಸ್ಥಾಪಿಸಿದ. ದೇಶದ ವಿವಿಧ ಭಾಗಗಳಲ್ಲಿ-- ಕಾಥೇವಾಡ, ಗುಜರಾತ್, ರಾಜಸ್ಥಾ ನ, ಕರ್ನಾಟಕ, ದಖ್ಖಣದ ಪೀಠಭೂಮಿ ಇಲ್ಲೆಲ್ಲ --- ಈ ಧರ್ಮ ಪ್ರಸಾರಗೊಂಡಿತು. ಅದು, ವಿಶ್ವವನ್ನು ಜಯಿಸ ಹೊರಟ ಅಲೆಕ್ಝಾಂಡರ್ ಭಾರತದ ಮೇಲೆ ದಂಡೆತ್ತಿ ಬಂದ ಕಾಲ, ಇಲ್ಲಿಂದ ಆತ