ಆಹ್ವಾನ
ಬಸವೇಶ್ವರ:
"ದಯವಿಲ್ಲದ ಧರ್ಮವಾವುದಯ್ಯ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿ,
ದಯವೇ ಧರ್ಮದ ಮೂಲವಯ್ಯ.
ಕೂಡಲ ಸಂಗಮದೇವರಂತಲ್ಲದೊಲ್ಲನಯ್ಯ."
ನಿರೂಪಕ :
ಕರ್ಣಾಟಕಾಂಧ್ರಗಳಲ್ಲಿ ವೀರಶೈವ ಮತ ಪ್ರಸಾರವಾಯಿತು. ಉತ್ತರದ ರಾಜ್ಯಗಳೆಡೆಗೂ ಜಂಗಮರು ನಡೆದರು.
ಇತಿಹಾಸಕಾರ :
ಈ ವೇಳೆಗಾಗಲೇ ಮುಸಲ್ಮಾನರು ಭಾರತದ ಮೇಲೆ ಏರಿ ಬಂದಿದ್ದರು.ಅವರ ಧರ್ಮವೂ ಇಲ್ಲಿ ಮನೆಮಾಡಿತು.
ನಿರೂಪಕ :
ಇಸ್ಲಾಂ ಜ್ಞಾನ ಭಂಡಾರದೊಡನೆ ಬಂದಿತು; ಧಾರ್ಮಿಕ ಪ್ರಜಾಪ್ರಭುತ್ವದ
ಭಾವನೆಯನ್ನು ತಂದಿತು. ಭಾರತೀಯ ಸಂಗೀತ, ಶಿಲ್ಪಕಲೆ, ಚಿತ್ರಕಲೆಗೆ
ಸ್ಥಿರವಾದ ಅಮೂಲ್ಯವಾದ ಕಾಣ್ಕೆಗಳು ಮುಸಲ್ಮಾನರಿಂದ ಬಂದುವು......
ಬಡ ನೇಕಾರನೊಬ್ಬ ರಾಮರಹೀಮರಲ್ಲಿ ಏಕರೂಪವನ್ನು ಕಂಡ.
ಕಬೀರ:
“ ಬೀತಗಯೆ ದಿನ ಭಜನ ಬಿನಾರೆ |
ಬಾಲ ಅವಸ್ಥಾ ಖೆಲ ಗವಾಯೊ |
ಜಬ ಜೋ ಬನ ತಬ ಮಾನ ಘನಾರೆ ||
ಕಹತ ಕಬೀರ ಸುನೊ' ಭಯಿ ಸಾಧೊ |
ಪಾರ ಉತರಗಯೆ ಸಂತ ಜನಾರೆ ||"
ನಿರೂಪಕ :
ಕಬೀರನು ಹಾಡಿದ ಆ ಹದಿನೈದು-ಹದಿನಾರನೆಯ ಶತಮಾನದಲ್ಲೇ ಗುರು ನಾನಕ್, ಹಿಂದೂಧರ್ಮ ಇಸ್ಲಾಂಗಳೆರಡರಿಂದಲೂ ಅತ್ಯುತ್ತಮವಾದ
_____
೪೫
A3]