ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಆಹ್ವಾನ ಬಸವೇಶ್ವರ:
"ದಯವಿಲ್ಲದ ಧರ್ಮವಾವುದಯ್ಯ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿ, ದಯವೇ ಧರ್ಮದ ಮೂಲವಯ್ಯ. ಕೂಡಲ ಸಂಗಮದೇವರಂತಲ್ಲದೊಲ್ಲನಯ್ಯ."
ನಿರೂಪಕ : ಕರ್ಣಾಟಕಾಂಧ್ರಗಳಲ್ಲಿ ವೀರಶೈವ ಮತ ಪ್ರಸಾರವಾಯಿತು. ಉತ್ತರದ ರಾಜ್ಯಗಳೆಡೆಗೂ ಜಂಗಮರು ನಡೆದರು. ಇತಿಹಾಸಕಾರ : ಈ ವೇಳೆಗಾಗಲೇ ಮುಸಲ್ಮಾನರು ಭಾರತದ ಮೇಲೆ ಏರಿ ಬಂದಿದ್ದರು.ಅವರ ಧರ್ಮವೂ ಇಲ್ಲಿ ಮನೆಮಾಡಿತು. ನಿರೂಪಕ : ಇಸ್ಲಾಂ ಜ್ಞಾನ ಭಂಡಾರದೊಡನೆ ಬಂದಿತು; ಧಾರ್ಮಿಕ ಪ್ರಜಾಪ್ರಭುತ್ವದ
ಭಾವನೆಯನ್ನು ತಂದಿತು. ಭಾರತೀಯ ಸಂಗೀತ, ಶಿಲ್ಪಕಲೆ, ಚಿತ್ರಕಲೆಗೆ ಸ್ಥಿರವಾದ ಅಮೂಲ್ಯವಾದ ಕಾಣ್ಕೆಗಳು ಮುಸಲ್ಮಾನರಿಂದ ಬಂದುವು...... ಬಡ ನೇಕಾರನೊಬ್ಬ ರಾಮರಹೀಮರಲ್ಲಿ ಏಕರೂಪವನ್ನು ಕಂಡ.
ಕಬೀರ:
“ ಬೀತಗಯೆ ದಿನ ಭಜನ ಬಿನಾರೆ | ಬಾಲ ಅವಸ್ಥಾ ಖೆಲ ಗವಾಯೊ | ಜಬ ಜೋ ಬನ ತಬ ಮಾನ ಘನಾರೆ || ಕಹತ ಕಬೀರ ಸುನೊ' ಭಯಿ ಸಾಧೊ | ಪಾರ ಉತರಗಯೆ ಸಂತ ಜನಾರೆ ||"
ನಿರೂಪಕ : ಕಬೀರನು ಹಾಡಿದ ಆ ಹದಿನೈದು-ಹದಿನಾರನೆಯ ಶತಮಾನದಲ್ಲೇ ಗುರು ನಾನಕ್, ಹಿಂದೂಧರ್ಮ ಇಸ್ಲಾಂಗಳೆರಡರಿಂದಲೂ ಅತ್ಯುತ್ತಮವಾದ