ವಿಷಯಕ್ಕೆ ಹೋಗು

ಪುಟ:AAHVANA.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಆಹ್ವಾನ


ಬಸವೇಶ್ವರ:

"ದಯವಿಲ್ಲದ ಧರ್ಮವಾವುದಯ್ಯ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿ,
ದಯವೇ ಧರ್ಮದ ಮೂಲವಯ್ಯ.
ಕೂಡಲ ಸಂಗಮದೇವರಂತಲ್ಲದೊಲ್ಲನಯ್ಯ."

ನಿರೂಪಕ :

ಕರ್ಣಾಟಕಾಂಧ್ರಗಳಲ್ಲಿ ವೀರಶೈವ ಮತ ಪ್ರಸಾರವಾಯಿತು. ಉತ್ತರದ ರಾಜ್ಯಗಳೆಡೆಗೂ ಜಂಗಮರು ನಡೆದರು.
ಇತಿಹಾಸಕಾರ :

ಈ ವೇಳೆಗಾಗಲೇ ಮುಸಲ್ಮಾನರು ಭಾರತದ ಮೇಲೆ ಏರಿ ಬಂದಿದ್ದರು.ಅವರ ಧರ್ಮವೂ ಇಲ್ಲಿ ಮನೆಮಾಡಿತು.
ನಿರೂಪಕ :

ಇಸ್ಲಾಂ ಜ್ಞಾನ ಭಂಡಾರದೊಡನೆ ಬಂದಿತು; ಧಾರ್ಮಿಕ ಪ್ರಜಾಪ್ರಭುತ್ವದ ಭಾವನೆಯನ್ನು ತಂದಿತು. ಭಾರತೀಯ ಸಂಗೀತ, ಶಿಲ್ಪಕಲೆ, ಚಿತ್ರಕಲೆಗೆ ಸ್ಥಿರವಾದ ಅಮೂಲ್ಯವಾದ ಕಾಣ್ಕೆಗಳು ಮುಸಲ್ಮಾನರಿಂದ ಬಂದುವು...... ಬಡ ನೇಕಾರನೊಬ್ಬ ರಾಮರಹೀಮರಲ್ಲಿ ಏಕರೂಪವನ್ನು ಕಂಡ.
ಕಬೀರ:

 “ ಬೀತಗಯೆ ದಿನ ಭಜನ ಬಿನಾರೆ |
ಬಾಲ ಅವಸ್ಥಾ ಖೆಲ ಗವಾಯೊ |
ಜಬ ಜೋ ಬನ ತಬ ಮಾನ ಘನಾರೆ ||
ಕಹತ ಕಬೀರ ಸುನೊ' ಭಯಿ ಸಾಧೊ |
ಪಾರ ಉತರಗಯೆ ಸಂತ ಜನಾರೆ ||"

ನಿರೂಪಕ :

ಕಬೀರನು ಹಾಡಿದ ಆ ಹದಿನೈದು-ಹದಿನಾರನೆಯ ಶತಮಾನದಲ್ಲೇ ಗುರು ನಾನಕ್, ಹಿಂದೂಧರ್ಮ ಇಸ್ಲಾಂಗಳೆರಡರಿಂದಲೂ ಅತ್ಯುತ್ತಮವಾದ

_____

೪೫

A3]