ಪುಟ:Abhaya.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಾಗದನನ್ನೋದಿದಾಗ ತುಂಗಮ್ಮ ತುಟಿಸಿಟ್ಟೆನ್ನಲಿಲ್ಲ ತಂದೆ
ಶಾಲೆಗೆ ಹೊರಟ ಮೇಲೆ ಮಾತ್ರ ಆಕೆ ಗೋಳೋ ಎಂದು ಅತ್ತಳು.
ಆ ದಿನ ತಂದೆಗೆ ಮಗಳ ರೋದನದ ಅರಿವಾಯಿತು; ಆದರೆ
ಅರ್ಥವಾಗಲಿಲ್ಲ.
ತುಂಗಮ್ಮನಿಗೆ ಭಯವಾಯಿತು ಎಲ್ಲವೂ ತಿಳಿಯದೇ ಇದ್ದರೂ
ಏನೂ ಅರಿಯದ ಹಸುಳೆಯಾಗಿರಲಿಲ್ಲ ಆಕೆ ನಾರಾಯಣ ಮೂರ್ತಿ
ಯನ್ನು ಕಂಡು ಮಾತನಾಡಿಯೇ ಬರಬೇಕೆಂದು ತುಂಗಮ್ಮ ತೀರ್ಮಾನಿ
ಸಿದಳು.
"ರೂಮಿಗೆ ಬೀಗ ಅಕ್ಕ"
---ಎಂದ ತುಂಗಮ್ಮನ ತಮ್ಮ, ಕೊಠಡಿಯನ್ನು ನೋಡಿಬಂದು,
ಅಕ್ಕನ ಮನಸ್ಸಿನ ಹೊಯ್ದಾಟವೇನೆಂಬುದು ಅವನಿಗೆ ಗೊತ್ತಿರಲಿಲ್ಲ. ಆದರೂ
ನಾರಾಯಣ ಮೂರ್ತಿಯ ವಿಚಿತ್ರ ವರ್ತನೆಯಿಂದಾಗಿ, ಆ ಭಾವನ ಮೇಲಿದ್ದ
ಮಮತೆ ಮಣ್ಣುಪಾಲಾಗಿತ್ತು.
"ಯಾಕೆ ? ಊರಲ್ಲಿಲ್ವೇನು ?"
"ಇಲ್ವಂತಕ್ಕಾ. ಮೈಸೂರಿಗೆ ಹೋಗಿದಾರಂತೆ."
ಮೈಸೂರಿಗೆ !
ಹೃದಯದ ಬೇಗುದಿಯನ್ನೆಲ್ಲ ತಣಿಸುವ ತಂಗಾಳಿಯೊಂದು ಬೀಸಿದ ಹಾಗಾಯಿತು ತುಂಗಮ್ಮನಿಗೆ ಇರಬಹುದೆ? ಇದು ಸಾಧ್ಯವೆ ? ಆತ
ಒಳ್ಳೆಯವನೇ ನೆಜ-ಅಲ್ಲವೆ?
ಆ ಸುದ್ದಿ ಕೇಳಿ ತುಂಗಮ್ಮ ಮುಗುಳು ನಕ್ಕಳು.
ಆಕೆಯ ತಂದೆಯೇನೂ ಅದರಿಂದ ಸಂತುಷ್ಟರಾಗಲಿಲ್ಲ. ಅವ
ರೆಂದರು:
"ನೀನು ಅವನ ಯೋಚ್ನೆ ಬಿಟ್ಟಿಡು ತುಂಗಾ ! ನಮಗೂ ಮಾನ ಇದೆ,
ಮಾರ್ಯಾದೆ ಇದೆ. ಬಡವರೂಂತ ಅದನ್ನೂ ಕಳಕೊಂಡಿಲ್ಲ ತಾನೆ?"
ಆ ಒಂದೊಂದು ಮಾತೂ ಶೂಲದಹಾಗೆ ತುಂಗಮ್ಮನನ್ನು ಇರಿಯು
ತಿತ್ತು....ಮಾನ...ಮರ್ಯಾದೆ.
ನಾರಾಯಣಮೂರ್ತಿ ವಿಶ್ವಾಸಘಾತ ಮಾಡಲಾರನೆಂಬ ನೆಂಬಿಕೆ