ಪುಟ:Abhaya.pdf/೧೫೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

೧೫೭ ಅಭಯ

“ಬೇರೆ ಕಡೆಗೆ ಸಾಗಿಸಿದ್ದಿ ತುಂಗಕ್ಕ.”

“ಹುಂ.... ನಾನು ನೋಡ್ದಾಗ ನೀವೆಲ್ಲ ಅಳ್ತಿದ್ರಿ.”

“ಇಲ್ಲ ! ಸುಳ್ಳು !”

“ನಂಗೊತ್ತಿಲ್ವೆ ಜಲಜ ?”.

“ಆಗಲಿ. ಅಳ್ತಿದ್ದೆವು. ಏನಾಯ್ತೀಗ ?”

“ಏನೂ ಇಲ್ಲ. ಸುಮ್ನೆ ಹೇಳ್ದೆ.”

“ಸರಿ. ಅದನ್ನೆಲ್ಲಾ ಮರೆತ್ಬಿಡು ಅಕ್ಕ.”

“ನೀವೆಲ್ರೂ ಒಳ್ಳೆಯವರು ಜಲಜ.” ಒಳ್ಳೆಯವರೊ-ಕೆಟ್ಟವರೊ! ಜಲಜೆಗೆ ಆ ಪದಗಳ ನಿಜವಾದ ಸ್ಪಷ್ಟ ವಾದ ಅರ್ಥ ತಿಳಿಯದು. ಆದರೆ ತಮ್ಮ ಒಳ್ಳೆಯತನದಿಂದ, ನೊಂದ ಜೀವಿಯಾದ ತುಂಗಮ್ಮನಿಗೆ ಯಾವ ಒಳ್ಳಿತನ್ನೂ ಮಾಡುವುದು ಸಾಧ್ಯವಾಗಿ ರಲಿಲ್ಲ. ಅಷ್ಟು ಮಾತ್ರ ನಿಜ. ಆ ದಿನ,ಸತ್ತು ಹುಟ್ಟಿದ್ದ ಮಗುವನ್ನು ಮಣ್ಣು ಮಾಡಿ ಬಂದ ಮೇಲೆ ಕುರುಡಿ ಸುಂದ್ರಾ ಕೇಳಿದ್ದಳು:

“ಓಗ್ಗುಟ್ಟು ಬಂದ್ರಾ ಜಲಜಾ ?” “ಹೂಂ ಕಣೇ.”

“ಚೆಂದಾಗಿತ್ತಾ ಮೊಗು ? ಎಂಗಿತ್ತು ನೋಡಾಕೆ ?”

ಆ ಒಂದು ಕ್ಷಣ ಜಲಜೆಗೆ ತಾಳ್ಮೆ ತಪ್ಪಿ ಸಿಟ್ಟು ಬಂದಿತ್ತು ಕುರುಡಿಯ ಪ್ರಶ್ನೆಯಲ್ಲಿ ಯಾವ ಅರ್ಥವೂ ಇಲ್ಲವೆಂದು ತೋರಿತು ಅವಳಿಗೆ

“ಚೆಂದಾಗಿತ್ತು, ಅದರಮ್ನ೦ಗೇ !”

"ಓ!"

ರೇಗಿದ್ದ ಜಲಜೆಯ ಸ್ವರ ಎಂದಿನಂತಿರಲಿಲ್ಲ. ಆದರೆ ಸುಂದ್ರಾ, ತುಂಗಕ್ಕನಿಗೆ ಒದಗಿದ ಸಂಕಟಕ್ಕಾಗಿ ಜಲಜ ಅತ್ತು ಆ ಸ್ವರ ಬದಲಾಗಿರ ಬಹುದೆಂದು ಭಾವಿಸಿದಳು. ಮಗು ಬದುಕಲಿಲ್ಲವೆಂದು ಆ ಕುರುಡಿಗೆ ದುಃಖ ವಾಯಿತು. ಆದರೆ ಇನ್ನೊಬ್ಬಳು, ಬದುಕಿನಲ್ಲಿ ಪಡಬಾರದ ಕಷ್ಟಗಳನ್ನೆಲ್ಲ ಪಟ್ಟಿದ್ದ ಪಾರೋತಿ ಎಂಬ ಹುಡುಗಿ, ಕಹಿಯಾಗಿ ಹೇಳಿದ್ದಳು: