ಪುಟ:Abhaya.pdf/೧೬೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೧೫೫
ಅಭಯ

ಅದು ಸುಳ್ಳಾಗಿತ್ತು.ಆದರೆ ಒಳ್ಲಿತಿಗಾಗಿ ಒಮ್ಮೊಮ್ಮೆ ಸುಳ್ಳು ಹೇಳುವುದು ಅವಶ್ಯವೆಂಬುದನ್ನು ಅನುಭವದಿಂದ ಅವರು ಕಂಡು ಹಿಡಿದಿದ್ದರು.ವಾಸ್ತವವಾಗಿ,ಆಡಳಿತ ಸಮಿತಿಯಲ್ಲಿರುವ ಹನ್ನೊಂದು ಜನರಲ್ಲಿ ಎಲ್ಲರೂ ಪ್ರತಿಸಾರೆಯೂ ಸಭೆಗೆ ಬರುತ್ತಿರಲಿಲ್ಲ.ಎಷ್ಟೋ ಸಾರಿ 'ಕ್ವೋರಂ'ಇರುತ್ತಿರಲಿಲ್ಲ.ಮತ್ತೆಷ್ಟೋ ಬಾರಿ,ಕಾರ್ಯದರ್ಶಿನಿ ಮತ್ತು ಸರಸಮ್ಮ ಕುಳಿತು,ತುರ್ತಿನಿ ತೀರ್ಮಾನಗಳನ್ನು ರೂಪಿಸಿ ಬರೆದಿಟ್ಟು,ಇತರ ಸದಸ್ಯರಿಗೆ ಕಳುಹಿಸಿಕೊಟ್ಟು ಸಹಿ ಪಡೆಯುತಿದ್ದರು.ಆದರೆ ನಿಜಸ್ತ್ತಿತಿಯನ್ನು ಎಂದೂ ಅಭಯದಾಮದ ಹುಡುಗಿಯರಿಗೆ ಹೇಳುವಂತಿರಲಿಲ್ಲ.ಹಾಗೆ ಹೇಳಿದರೆ,ಅಭಯದಾಮದ ಆಡಳಿತದಲ್ಲಿ ಅವರಿಗಿರುವ ನಂಬುಗೆ ಖಂಡಿತವಾಗಿಯೂ ಶಿದಿಲವಾಗುತಿತ್ತು.ದೂಡ್ಡಮ್ಮ,ಹೆಚ್ಚು ಕಡಿಮೆ ವಾರಕ್ಕೊಮ್ಮೆ ಮಿಟಿಂಗಿಗೆ ಹೋಗುವ ವಿಷಯ ಅಭಯದಾಮದ ಪ್ರತಿಯೊಬ್ಬರಿಗೂ ತಿಳಿದಿದ್ದುದೇ.ಆ ಮಿಟಿಂಗು ಭಾರೀ ಸಭೆಯೆಂದೊ ಅಲ್ಲಿ ದೊಡ್ಡಮ್ಮ,ತಮ್ಮೆಲ್ಲರ ಜವಾಬ್ದಾರಿ ಹೊತ್ತ್ ಪ್ರತಿನಿದಿಯಾಗಿ,ಪಾಯಸದೊಟವಿದ್ದ ದಿವಸ ಮಾಡುವ ಭಾಷಣಕ್ಕಿಂತಲೂ ದೊಡ್ಡ ಭಾಷಣವನ್ನು ಕೊಡುವರೆಂದೂ ಹುಡುಗಿಯರ ಕಲ್ಪನೆಯಾಗಿತ್ತು.ಅಂತಹ ಕಲ್ಪನೆಗೆ ಆದಾರ ಒದಗಿಸುವುದು ಮೂಲಕ ಅಭಯದಾಮದ ಹಿರಿಮೆ ಹೆಚ್ಚುತ್ತದೆಂಬುದನ್ನೂ ಸರಸಮ್ಮ ಅನುಭವದಿಂದ ಅರಿತಿದ್ದರು.

ತುಂಗಮ್ಮನ ಮುಂದೆಯೂ ರೂಪುಗೊಂಡಿತು ಕಮಿಟಿಮಿಟಿಂಗಿನ

ಚಿತ್ರ.ಆ ಸಭೆಗೆ ತನ್ನ ಬದುಕನ್ನು ಬಿಗಿದ ಕೊಂಡಿ ಯಾವುದೆಂದು ತಿಳಿಯಲು ಆಕೆ ಬಯಸಿದಳು.

"ಮಿಟಿಂಗ್ನಲ್ಲಿ ಇಲ್ಲಿಯ ಹುಡುಗೇರ ವಿಷಯವೆಲ್ಲಾ ಚರ್ಚೆಮಾಡ್ತೀ

ರೀಂತ ಜಲಜ ಅಂತಿದ್ಲು,ಹೌದೆ ದೊಡ್ಡಮ್ಮ?"

"ಹೌದು.

"ತನ್ನ ವಿಷಯವೂ ಅಲ್ಲಿ ಚರ್ಚೆಯಾಗುವುದು ಹಾಗಾದರೆ.ಒಮ್ಮೆಲೆ

ಆ ಸಭೆ,ತುಂಗಮ್ಮ ಸಿನಿಮಾದಲ್ಲಿ ಕಂಡಿದ್ದ ನ್ಯಾಯಾಸ್ತಾನವಾಗಿ ಮಾರ್ಪಟ್ಟಿತು.ಯಾವ ರೀತಿ ತನ್ನ ಬಗೆಗೆ ಅಲ್ಲಿ ಮಾತುಗಳು ಬರುವುವೂ?