ಪುಟ:Abhaya.pdf/೧೬೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೧೫೬
ಅಭಯ

ತುಂಗಮ್ಮನ ಮೊನದಿಂದಲೂ ಹೊರಡಲು ತಮಗೆ ತಡವಾದ್ದ

ರಿಂದಲೂ ಸರಸಮ್ಮನಿಗೆ ಕಸಿವಿಸಿಯಯಿತು.

"ಯಾಕೆ ಕೇಳ್ದೆ ತುಂಗ?"

ತುಂಗಮ್ಮ ಉತ್ತರವೀಯಲಿಲ್ಲ.ಬದಲು ತಾನೇ ಒಂದು ಪ್ರಶ್ನೆ

ಕೇಳಿದಳು:

"ನನ್ನ ವಿಷಯ ಎನು ತೀರ್ಮಾನಮಾಡ್ಥೀರಿ ದೊಡ್ದಮ್ಮ?"

"ಅದೇನೆ ಹಾಗಂದ್ರೆ?"

"ನನು--ಇನ್ನು--..."

ತನಗಿಷ್ಟು ಶಕ್ತಿ ಇಲ್ಲವೆಂದಿತು ಸರಸಮ್ಮ ಸಹನೆ.

"ತುಂಗಾ!ಇಂತ ಯೊಚ್ನೆ ಮಡ್ಬೆಡ !ಯಾರು ಇದನ್ನೆಲ್ಲಾ

ನಿನ್ತಲೇಲಿ ತುಂಬೊದರು ? ತೂ...ಆ ಜಲಜಾಗಿಷ್ಟೂ ಬುದ್ದಿಯಿಲ್ಲ--

"ಅಯ್ಯೋ ! ಜಲಜ ಏನೂ ಹೇಳಿಲ್ಲ ದೊಡ್ಡಮ್ಮ -ನಾನೇನೇ-...."

"ಸರಸಮ್ಮ ನಕ್ಕರು.

"ನಿನ್ನ ತಲೆಕಾಯಿ!ಸುಮ್ನೆ ಮಲಕೊ.ನಿನಗೆ ಹೆಚ್ಚು ಹೆಚ್ಚು ಹಣ್ಣು

ಬೇಕು,ಅಂತ ಮಿಂಟಿಂಗ್ನಲ್ಲಿ ಕೆಳಿ ಪಾಸ್ಮಾಡಿಸ್ಕೊಂಕೊಂಡು ಬರಿತಿನಿ...

"ಆ ಮಾತಿಗೆ ಎನು ಉತ್ತರಕೊಡಬೇಕೆಂಬುದೇ ತುಂಗಮ್ಮನಿಗೆ

ತೋಚಲಿಲ್ಲ.

"ಆಮೇಲೆ,ಇನ್ನೂ ಒಂದು ವಿಷಯ ತುಂಗ---"

"ಎನು ದೊಡ್ಡಮ್ಮ?"

"ನಿಮ್ತಂದೆ ಕಾಗದಕ್ಕೆ ಉತ್ತರ ಬರೀಬೇಕು ತುಂಗ. ಅವರಿಗೇನೊ

ತಿಳಿಸೇ ಇಲ್ಲ."

"ಹೊಂ."

"ನಾಳೇನಾದ್ರೂ ಬರೀಬೇಕು.ನಾನೂ ಬರೀತೀನಿ."

"ಆಗಲಿ ದೊಡ್ದಮ್ಮ."

"ಅದೇನು ಬರೀತೀಯೋ ಯೋಚ್ನೆ ಮಾಡಮ್ಮ.ನಾಳೆ ಮಾತ್ನಾ

ಡೋಣ ಆ ವಿಷಯ."